ಕಾರ್ಗಿಲ್ ವಿಜಯ ದಿವಸಕ್ಕೆ 23 ವರ್ಷ, ಎಲ್ಲೂ ಕೇಳಿರದ ಕಾರ್ಗಿಲ್ ರಣಕಲಿಗಳ ಕಥಾನಕ!

ಕಾರ್ಗಿಲ್ ವಿಜಯ ದಿವಸಕ್ಕೆ 23 ವರ್ಷ, ಎಲ್ಲೂ ಕೇಳಿರದ ಕಾರ್ಗಿಲ್ ರಣಕಲಿಗಳ ಕಥಾನಕ!

Published : Jul 27, 2022, 03:00 PM ISTUpdated : Jul 27, 2022, 03:39 PM IST

ಜುಲೈ 26.. ಪ್ರತಿ ಭಾರತೀಯನೂ  ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ತಿರುಗಬೇಕಾದ ದಿನ ಇದು. ಗುಳ್ಳೆ ನರಿಯ ಹಾಗೆ, ದಾಳಿ ನಡೆಸೋಕೆ ಬಂದವರ ಹೆಡೆಮುರಿ ಕಟ್ಟಿದ ದಿನ ಇದು. ಇಡೀ ಜಗತ್ತಿಗೆ ಭಾರತದ ತಾಕತ್ತು ಏನು ಅಂತ ತೋರಿಸಿಕೊಟ್ಟ ದಿನ ಇದು

ಜುಲೈ 26.. ಪ್ರತಿ ಭಾರತೀಯನೂ  ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ತಿರುಗಬೇಕಾದ ದಿನ ಇದು. ಗುಳ್ಳೆ ನರಿಯ ಹಾಗೆ, ದಾಳಿ ನಡೆಸೋಕೆ ಬಂದವರ ಹೆಡೆಮುರಿ ಕಟ್ಟಿದ ದಿನ ಇದು. ಇಡೀ ಜಗತ್ತಿಗೆ ಭಾರತದ ತಾಕತ್ತು ಏನು ಅಂತ ತೋರಿಸಿಕೊಟ್ಟ ದಿನ ಇದು

ಕೆಲವು ಸಲ ಹಿಮಾಲಯದ ವಾತಾವರಣ ಮನುಷ್ಯರಿಗೆ ಸಹಿಸೋಕೂ ಸಾಧ್ಯವಾಗದಷ್ಟು ಭೀಕರವಾಗಿ ಬದಲಾಗಿಬಿಡುತ್ತೆ. ಹಾಗಾಗಿನೇ, ಭಾರತ ಮತ್ತು ಪಾಕಿಸ್ತಾನ ಒಂದು ಒಪ್ಪಂದ ಮಾಡಿಕೊಂಡವು. ಪರಿಸ್ಥಿತಿ ಪ್ರತೀಕೂಲವಿದ್ದಾಗ, ವಾತಾವರಣ ಅಪಾಯಕಾರಿಯಾಗಿದ್ದಾಗ, ಈ ಪರ್ವತದ ನೆತ್ತಿ ಮೇಲೆ ಯಾರೂ ಇರಬಾರದು. ಯಾರೂ ಇನ್ನೊಬ್ಬರ ಮೇಲೆ ಅತಿಕ್ರಮಣ ಮಾಡಬಾರದು ಅಂತ. ಭಾರತವೇನೋ ಈ ಅಗ್ರಿಮೆಂಟಿಗೆ ಕಟಿಬದ್ಧವಾಗಿತ್ತು.. ಆದ್ರೆ ಪಾಕಿಸ್ತಾನ ಈ ನಿಯಮ ಮುರಿದಿತ್ತು. 1999 ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ, ಪಾಕಿಸ್ತಾನಿ ಸೈನಿಕರು ಕಾರ್ಗಿಲ್ ಪರ್ವತ ಪ್ರದೇಶವನ್ನ ಆವರಿಸಿಕೊಂಡರು.

ಈ ಪರಿ ಪ್ರಮಾಣದಲ್ಲಿ ಪಾಕ್ ಸೈನಿಕರು ಭಾರತದ ಗಡಿ ದಾಟಿ ಬಂದಿದ್ದು ಯಾರಿಗೂ ಗೊತ್ತೇ ಆಗಿರಲಿಲ್ಲ. ಅದನ್ನ ಗಮನಿಸಿದ್ದು ಯಾರು ಗೊತ್ತಾ? ತಾನ್ಶಿ ನಾಮ್ಗ್ಯಲ್ ಅನ್ನೋ ಕುರಿ ಕಾಯುವ ವ್ಯಕ್ತಿ.. ಆತ ಕುರಿ ಕಾಯೋಕೆ ಹೋಗಿದ್ದಾಗ, ದೂರದಲ್ಲಿ ಯಾರೋ ಬೈನಾಕ್ಯುಲರ್ ಹಿಡ್ಕೊಂಡು ನೋಡ್ತಾ ಇದ್ರು. ಕಾರ್ಗಿಲ್ ಪರ್ವತ ಪ್ರದೇಶದಲ್ಲಿ ಯಾರೋ 6 ಜನ ಇದ್ದಾರೆ ಅಂತ ಕುರಿ ಕಾಯೋ ವ್ಯಕ್ತಿ, ಭಾರತೀಯ ಸೈನಿಕರಿಗೆ ತಿಳಿಸ್ತಾನೆ.. ಬಹುಶಃ ಯಾರೋ ಹಳ್ಳಿಯವರು ಹೋಗಿರಬೇಕು ಅಂತ ಅಂದುಕೊಂಡ ಭಾರತೀಯ ಸೈನಿಕರು, ಮೊದಲಿಗೆ 6 ಜನರ ಸೈನಿಕರ ತಂಡವನ್ನು ಕಳಿಸಿಕೊಡ್ತಾರೆ. ಆದ್ರೆ ಅವರ್ಯಾರೂ ವಾಪಸ್ ಬರೋದೇ ಇಲ್ಲ. ಕಾರ್ಗಿಲ್ ಪ್ರದೇಶವನ್ನ ಪಾಕಿಸ್ತಾನ ಸೇನೆ ವಶಕ್ಕೆ ಪಡ್ಕೊಂಡಿದೆ ಅಂತ ಗೊತ್ತಾಗಿದ್ದು ಯಾವಾಗ ಗೊತ್ತಾ? ಕ್ಯಾಪ್ಟನ್ ಸೌರಭ್ ಕಾಲಿಯಾ ನಿಗೂಢವಾಗಿ ಕಾಣೆಯಾದಾಗ...!

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು