Dec 22, 2022, 6:36 PM IST
ಕೊರೊನಾ ಆತಂಕದಿಂದ ಜನಾಕ್ರೋಶ ಯಾತ್ರೆ ನಿರ್ಧಾರವನ್ನು ಬಿಜೆಪಿ ನಾಯಕರು ಕೈಬಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಜನಾಕ್ರೋಶ ಯಾತ್ರೆಗೆ ಕಮಲ ಪಡೆ ಸಜ್ಜಾಗಿತ್ತು. ಆದರೆ, ಕೊರೊನಾ ಆತಂಕದಿಂದ ಈ ಯಾತ್ರೆಯನ್ನು ರದ್ದುಗೊಳಿಸಿದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಯಾತ್ರೆಯನ್ನು ಕೈಬಿಟ್ಟಿದೆ. ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವರು ಭಾರತ್ ಜೋಡೋ ಯಾತ್ರೆಯಲ್ಲೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ, ಇಲ್ಲದಿದ್ದರೆ ಯಾತ್ರೆ ಮುಂದೂಡಿ ಎಂದು ಪತ್ರ ಬರೆದಿತ್ತು.