ಆಸ್ಕರ್‌ ವಿಜೇತ ಎಲಿಫೆಂಟ್‌ ವಿಸ್ಪರ್ಸ್‌ನ ಬೊಮ್ಮಾ- ಬೆಳ್ಳಿಗೆ ಮೋದಿ ಸನ್ಮಾನ: ಪ್ರಧಾನಿಯಿಂದ ಕಾಡು ಕುರುಬರ ಭೇಟಿ

ಆಸ್ಕರ್‌ ವಿಜೇತ ಎಲಿಫೆಂಟ್‌ ವಿಸ್ಪರ್ಸ್‌ನ ಬೊಮ್ಮಾ- ಬೆಳ್ಳಿಗೆ ಮೋದಿ ಸನ್ಮಾನ: ಪ್ರಧಾನಿಯಿಂದ ಕಾಡು ಕುರುಬರ ಭೇಟಿ

Published : Apr 06, 2023, 03:17 PM IST

ಆಸ್ಕರ್‌ ವಿಜೇತ ಡಾಕ್ಯುಮೆಂಟರಿ ದಿ ಎಲೆಫೆಂಟ್ ವಿಸ್ಪರ್ಸ್‌ ಪ್ರಮುಖ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿಯನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಕಾಡುಕುರುಬರನ್ನು ಪ್ರಧಾನಿ ಭೇಟಿ ಮಾಡುತ್ತಿರುವುದು ಖುಷಿ ತಂದಿದೆ ಎಂದು ಬೊಮ್ಮಾ ಹೇಳಿದ್ದಾರೆ.

 

ಚಾಮರಾಜನಗರ (ಏ.06): ದಿ ಎಲೆಫೆಂಟ್ ವಿಸ್ಪರ್ಸ್‌ ಡಾಕ್ಯುಮೆಂಟರಿ ಪ್ರಮುಖ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿಯನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿರುವ ಡಾಕ್ಯುಮೆಂಟರಿಯ ಪಾತ್ರಧಾರಿಗಳು. ಏ. 9ರಂದು ಬೊಮ್ಮಾ ಮತ್ತು ಬೆಳ್ಳಿ ಅವರು ಪ್ರಧಾನಿ ಮೋದಿಯಿಂದ ಏ.9ರಂದು ಸನ್ಮಾನ ಸ್ವೀಕರಿಸಲಿದ್ದಾರೆ. ಎಲ್ಲೋ ಇರುವ ಪ್ರಧಾನಿಗಳು ಕಾಡು ಕುರುಬರನ್ನ ಮಾತಾಡಿಸೋಕೆ ಬರ್ತಿರೋದು ಸಾಕಷ್ಟು ಖುಷಿ ತಂದಿದೆ. ಇಲ್ಲಿವರೆಗೆ ಯಾವುದೇ ಪ್ರಧಾನಿ ಮಧುಮಲೆ, ಬಂಡಿಪುರಕ್ಕೆ ಪ್ರಧಾನಿ ಬಂದಿಲ್ಲ. 

ಆಸ್ಕರ್ ಅಂದ್ರೆ ಏನಂತ ನನಗೆ ಗೊತ್ತಿಲ್ಲ. ಕಾಡೊಳಗೆ ಜೀವನ ಮಾಡುವ ನಮಗೆ ಈ ಡಾಕ್ಯುಮೆಂಟರಿ ಬಳಿಕ ಆಸ್ಕರ್ ನ ಪವರ್ ತಿಳಿಯಿತು. ನಮ್ಮ ದೇಶ ಸಂತೋಷ ಪಡುವ ಸಂಗತಿ ಇದು. ಪ್ರಧಾನಿ ಜೊತೆಗೆ ತಮಿಳುನಾಡು ಸಿಎಂ, ಮಿನಿಸ್ಟರ್ ಗಳು ಬರ್ತಿದ್ದಾರೆ. ಕಾಡುಜನಗಳಾದ ನಮಗೆ ಮನೆ ಕೊಡಬೇಕು, ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಬೇಕು. ಅವಕಾಶ ಸಿಕ್ಕರೆ ಪ್ರಧಾನಿ ಬಳಿ ಇದನ್ನೆಲ್ಲ ಕೇಳ್ತಿವಿ. ನಾನು ಹಿರೋ ಅಂತ ಭಾವಿಸಿಲ್ಲ. ಕಾಡು ಕುರುಬರು ಹೀಗೆ ಇರೋದು, ಹೀಗೆ ಇರ್ತಿವಿ. ನಿರ್ದೇಶಕಿ ಕಾರ್ತಿಕಿ ಗೊನ್ಸಾವೆಲ್ಸ್ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದ್ದರು. ಡಾಕ್ಯುಮೆಂಟರಿ ಮಾಡ್ಬೇಕು ಅಂತ ಮನೆಗೆ ಬಂದಿದ್ದರು ಎಂದು ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿಯ ಬೊಮ್ಮಾ ಹೇಳಿದ್ದಾರೆ.

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more