ಆಸ್ಕರ್‌ ವಿಜೇತ ಎಲಿಫೆಂಟ್‌ ವಿಸ್ಪರ್ಸ್‌ನ ಬೊಮ್ಮಾ- ಬೆಳ್ಳಿಗೆ ಮೋದಿ ಸನ್ಮಾನ: ಪ್ರಧಾನಿಯಿಂದ ಕಾಡು ಕುರುಬರ ಭೇಟಿ

ಆಸ್ಕರ್‌ ವಿಜೇತ ಎಲಿಫೆಂಟ್‌ ವಿಸ್ಪರ್ಸ್‌ನ ಬೊಮ್ಮಾ- ಬೆಳ್ಳಿಗೆ ಮೋದಿ ಸನ್ಮಾನ: ಪ್ರಧಾನಿಯಿಂದ ಕಾಡು ಕುರುಬರ ಭೇಟಿ

Published : Apr 06, 2023, 03:17 PM IST

ಆಸ್ಕರ್‌ ವಿಜೇತ ಡಾಕ್ಯುಮೆಂಟರಿ ದಿ ಎಲೆಫೆಂಟ್ ವಿಸ್ಪರ್ಸ್‌ ಪ್ರಮುಖ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿಯನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಕಾಡುಕುರುಬರನ್ನು ಪ್ರಧಾನಿ ಭೇಟಿ ಮಾಡುತ್ತಿರುವುದು ಖುಷಿ ತಂದಿದೆ ಎಂದು ಬೊಮ್ಮಾ ಹೇಳಿದ್ದಾರೆ.

 

ಚಾಮರಾಜನಗರ (ಏ.06): ದಿ ಎಲೆಫೆಂಟ್ ವಿಸ್ಪರ್ಸ್‌ ಡಾಕ್ಯುಮೆಂಟರಿ ಪ್ರಮುಖ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿಯನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿರುವ ಡಾಕ್ಯುಮೆಂಟರಿಯ ಪಾತ್ರಧಾರಿಗಳು. ಏ. 9ರಂದು ಬೊಮ್ಮಾ ಮತ್ತು ಬೆಳ್ಳಿ ಅವರು ಪ್ರಧಾನಿ ಮೋದಿಯಿಂದ ಏ.9ರಂದು ಸನ್ಮಾನ ಸ್ವೀಕರಿಸಲಿದ್ದಾರೆ. ಎಲ್ಲೋ ಇರುವ ಪ್ರಧಾನಿಗಳು ಕಾಡು ಕುರುಬರನ್ನ ಮಾತಾಡಿಸೋಕೆ ಬರ್ತಿರೋದು ಸಾಕಷ್ಟು ಖುಷಿ ತಂದಿದೆ. ಇಲ್ಲಿವರೆಗೆ ಯಾವುದೇ ಪ್ರಧಾನಿ ಮಧುಮಲೆ, ಬಂಡಿಪುರಕ್ಕೆ ಪ್ರಧಾನಿ ಬಂದಿಲ್ಲ. 

ಆಸ್ಕರ್ ಅಂದ್ರೆ ಏನಂತ ನನಗೆ ಗೊತ್ತಿಲ್ಲ. ಕಾಡೊಳಗೆ ಜೀವನ ಮಾಡುವ ನಮಗೆ ಈ ಡಾಕ್ಯುಮೆಂಟರಿ ಬಳಿಕ ಆಸ್ಕರ್ ನ ಪವರ್ ತಿಳಿಯಿತು. ನಮ್ಮ ದೇಶ ಸಂತೋಷ ಪಡುವ ಸಂಗತಿ ಇದು. ಪ್ರಧಾನಿ ಜೊತೆಗೆ ತಮಿಳುನಾಡು ಸಿಎಂ, ಮಿನಿಸ್ಟರ್ ಗಳು ಬರ್ತಿದ್ದಾರೆ. ಕಾಡುಜನಗಳಾದ ನಮಗೆ ಮನೆ ಕೊಡಬೇಕು, ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಬೇಕು. ಅವಕಾಶ ಸಿಕ್ಕರೆ ಪ್ರಧಾನಿ ಬಳಿ ಇದನ್ನೆಲ್ಲ ಕೇಳ್ತಿವಿ. ನಾನು ಹಿರೋ ಅಂತ ಭಾವಿಸಿಲ್ಲ. ಕಾಡು ಕುರುಬರು ಹೀಗೆ ಇರೋದು, ಹೀಗೆ ಇರ್ತಿವಿ. ನಿರ್ದೇಶಕಿ ಕಾರ್ತಿಕಿ ಗೊನ್ಸಾವೆಲ್ಸ್ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದ್ದರು. ಡಾಕ್ಯುಮೆಂಟರಿ ಮಾಡ್ಬೇಕು ಅಂತ ಮನೆಗೆ ಬಂದಿದ್ದರು ಎಂದು ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿಯ ಬೊಮ್ಮಾ ಹೇಳಿದ್ದಾರೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more