ಮಹಾಕುಂಭ ಮೇಳಕ್ಕೆ ಖರ್ಚೆಷ್ಟು? ಆದಾಯ ಎಷ್ಟು? 'ಹೊಟ್ಟೆ ತುಂಬುತ್ತಾ' ಅಂದವರಿಗೆ ಲಕ್ಷ ಕೋಟಿ ಆದಾಯದ ಉತ್ತರ!

ಮಹಾಕುಂಭ ಮೇಳಕ್ಕೆ ಖರ್ಚೆಷ್ಟು? ಆದಾಯ ಎಷ್ಟು? 'ಹೊಟ್ಟೆ ತುಂಬುತ್ತಾ' ಅಂದವರಿಗೆ ಲಕ್ಷ ಕೋಟಿ ಆದಾಯದ ಉತ್ತರ!

Published : Jan 29, 2025, 07:45 PM IST

ಮಲ್ಲಿಕಾರ್ಜುನ ಖರ್ಗೆಯವರ ಗಂಗಾ ಸ್ನಾನದ ಟೀಕೆ ವಿವಾದಕ್ಕೆ ಕಾರಣವಾಗಿದ್ದು, ಕುಂಭಮೇಳದಿಂದ ಲಕ್ಷ ಕೋಟಿ ಆದಾಯ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. 7,500 ಕೋಟಿ ರೂಪಾಯಿ ಬಜೆಟ್‌ನ ಮಹಾಕುಂಭ ಮೇಳಕ್ಕೆ 40 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದ್ದು, 2 ರಿಂದ 4 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಪವಿತ್ರ ಗಂಗಾ ಸ್ನಾನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ಬಾಯಲ್ಲಿ ಬಂದ ಮಾತು ಇಡೀ ದೇಶದ ಹಿಂದೂಗಳಲ್ಲಿ ಬೆಂಕಿ ಹೊತ್ತಿಸುವಂತಾಗಿತ್ತು. ಗಂಗಾ ಸ್ನಾನದಿಂದ ದೇಶದ ಬಡತನ ದೂರವಾಗುತ್ತಾ, ಬಡವರ ಹೊಟ್ಟೆ ತುಂಬುತ್ತಾ ಎಂದು ಟೀಕೆ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸುವ ಭರದಲ್ಲಿ ಖರ್ಗೆ ಬಾಯಲ್ಲಿ ಅಳತೆ ಮೀರಿತ ಮಾತು ಹೊರಗೆ ಬಂದಿತ್ತು. ಆದರೆ, ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆ ಒಂದು ಮಾತು ಕಾಂಗ್ರೆಸ್‌ ಪಕ್ಷಕ್ಕೆ ಆಪತ್ತು ಆಗುವ ಸನ್ನಿವೇಶನ ನಿರ್ಮಾಣ ಆಗಲಿದೆ. ಖರ್ಗೆ ಹೊತ್ತಿಸಿದ ಕುಂಭ ಕಿಚ್ಚಿನಲ್ಲಿ ರಾಜಕೀಯ ಜ್ವಾಲೆ ಧಗ ಧಗ ಉರಿಯುತ್ತಿದೆ. ಇದೇ ಸಂದರ್ಭದಲ್ಲಿ ಕುಂಭ ಮೇಳದಿಂದ ಸಾವಿರ ಕೋಟಿಗಳ ಲೆಕ್ಕದಲ್ಲಿ ಖರ್ಚು, ಲಕ್ಷ ಕೋಟಿಗಳ ಲೆಕ್ಕದಲ್ಲಿ ಆದಾಯ ಬರುತ್ತಿದೆ ಎನ್ನುವುದು ಇದಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಪ್ರಯಾಗ್'ರಾಜ್'ನಲ್ಲಿ ನಡೀತಾ ಇರೋ ಮಹಾಕುಂಭ ಮೇಳದ ಒಟ್ಟು ಬಜೆಟ್ 7,500 ಕೋಟಿ ರೂಪಾಯಿ. ಅದರಲ್ಲಿ ಉಫತ್ತರ ಪ್ರದೇಶ ಸರ್ಕಾರದ ಪಾಲು 5,400 ಕೋಟಿ ರೂಪಾಯಿ, ಕೇಂದ್ರ ಸರ್ಕಾರದ ಪಾಲು 2,100 ಕೋಟಿ ರೂಪಾಯಿ ಇದೆ. ಮಹಾಕುಂಭ ಮೇಳದಿಂದ ಬರಲಿರುವ ಅಂದಾಜು ಆದಾಯ 2ರಿಂದ 4 ಲಕ್ಷ ಕೋಟಿ ರೂಪಾಯಿ ಆಗಿದೆ. ಒಟ್ಟು 45 ದಿನಗಳ ಮಹಾಕುಂಭಮೇಳಕ್ಕೆ ಸರಿ ಸುಮಾರು 40 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ. CAIT ಅಂದ್ರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ದತ್ತಾಂಶದ ಪ್ರಕಾರ ಶೇ.80ರಷ್ಟು ಪ್ರವಾಸಿಗರು ತಲಾ ₹5,000 ಖರ್ಚು ಮಾಡಲಿದ್ದಾರೆ ಎಂದು ಅಂದಾಜಿಸಿದೆ. ಈ ಲೆಕ್ಕದ ಪ್ರಕಾರ ಮಹಾಕುಂಭ ಮೇಳದಲ್ಲಿ ನಡೆಯಲಿರುವ ಒಟ್ಟು ವ್ಯವಹಾರ ಮತ್ತು ಆದಾಯ ₹ 2 ಲಕ್ಷ ಕೋಟಿ ದಾಟಲಿದೆ. ಒಬ್ಬ ಪ್ರವಾಸಿಗ ₹10 ಸಾವಿರದಂತೆ ಖರ್ಚು ಮಾಡಿದರೆ ಸುಮಾರು 4 ಲಕ್ಷ ಕೋಟಿ ಆದಾಯದ ನಿರೀಕ್ಷೆಯಿದೆ ಎನ್ನುತ್ತದೆ ಅಂದ್ರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ದತ್ತಾಂಶ ವರದಿ.

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more