ಮಹಾಕುಂಭ ಮೇಳಕ್ಕೆ ಖರ್ಚೆಷ್ಟು? ಆದಾಯ ಎಷ್ಟು? 'ಹೊಟ್ಟೆ ತುಂಬುತ್ತಾ' ಅಂದವರಿಗೆ ಲಕ್ಷ ಕೋಟಿ ಆದಾಯದ ಉತ್ತರ!

ಮಹಾಕುಂಭ ಮೇಳಕ್ಕೆ ಖರ್ಚೆಷ್ಟು? ಆದಾಯ ಎಷ್ಟು? 'ಹೊಟ್ಟೆ ತುಂಬುತ್ತಾ' ಅಂದವರಿಗೆ ಲಕ್ಷ ಕೋಟಿ ಆದಾಯದ ಉತ್ತರ!

Published : Jan 29, 2025, 07:45 PM IST

ಮಲ್ಲಿಕಾರ್ಜುನ ಖರ್ಗೆಯವರ ಗಂಗಾ ಸ್ನಾನದ ಟೀಕೆ ವಿವಾದಕ್ಕೆ ಕಾರಣವಾಗಿದ್ದು, ಕುಂಭಮೇಳದಿಂದ ಲಕ್ಷ ಕೋಟಿ ಆದಾಯ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. 7,500 ಕೋಟಿ ರೂಪಾಯಿ ಬಜೆಟ್‌ನ ಮಹಾಕುಂಭ ಮೇಳಕ್ಕೆ 40 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದ್ದು, 2 ರಿಂದ 4 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಪವಿತ್ರ ಗಂಗಾ ಸ್ನಾನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ಬಾಯಲ್ಲಿ ಬಂದ ಮಾತು ಇಡೀ ದೇಶದ ಹಿಂದೂಗಳಲ್ಲಿ ಬೆಂಕಿ ಹೊತ್ತಿಸುವಂತಾಗಿತ್ತು. ಗಂಗಾ ಸ್ನಾನದಿಂದ ದೇಶದ ಬಡತನ ದೂರವಾಗುತ್ತಾ, ಬಡವರ ಹೊಟ್ಟೆ ತುಂಬುತ್ತಾ ಎಂದು ಟೀಕೆ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸುವ ಭರದಲ್ಲಿ ಖರ್ಗೆ ಬಾಯಲ್ಲಿ ಅಳತೆ ಮೀರಿತ ಮಾತು ಹೊರಗೆ ಬಂದಿತ್ತು. ಆದರೆ, ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆ ಒಂದು ಮಾತು ಕಾಂಗ್ರೆಸ್‌ ಪಕ್ಷಕ್ಕೆ ಆಪತ್ತು ಆಗುವ ಸನ್ನಿವೇಶನ ನಿರ್ಮಾಣ ಆಗಲಿದೆ. ಖರ್ಗೆ ಹೊತ್ತಿಸಿದ ಕುಂಭ ಕಿಚ್ಚಿನಲ್ಲಿ ರಾಜಕೀಯ ಜ್ವಾಲೆ ಧಗ ಧಗ ಉರಿಯುತ್ತಿದೆ. ಇದೇ ಸಂದರ್ಭದಲ್ಲಿ ಕುಂಭ ಮೇಳದಿಂದ ಸಾವಿರ ಕೋಟಿಗಳ ಲೆಕ್ಕದಲ್ಲಿ ಖರ್ಚು, ಲಕ್ಷ ಕೋಟಿಗಳ ಲೆಕ್ಕದಲ್ಲಿ ಆದಾಯ ಬರುತ್ತಿದೆ ಎನ್ನುವುದು ಇದಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಪ್ರಯಾಗ್'ರಾಜ್'ನಲ್ಲಿ ನಡೀತಾ ಇರೋ ಮಹಾಕುಂಭ ಮೇಳದ ಒಟ್ಟು ಬಜೆಟ್ 7,500 ಕೋಟಿ ರೂಪಾಯಿ. ಅದರಲ್ಲಿ ಉಫತ್ತರ ಪ್ರದೇಶ ಸರ್ಕಾರದ ಪಾಲು 5,400 ಕೋಟಿ ರೂಪಾಯಿ, ಕೇಂದ್ರ ಸರ್ಕಾರದ ಪಾಲು 2,100 ಕೋಟಿ ರೂಪಾಯಿ ಇದೆ. ಮಹಾಕುಂಭ ಮೇಳದಿಂದ ಬರಲಿರುವ ಅಂದಾಜು ಆದಾಯ 2ರಿಂದ 4 ಲಕ್ಷ ಕೋಟಿ ರೂಪಾಯಿ ಆಗಿದೆ. ಒಟ್ಟು 45 ದಿನಗಳ ಮಹಾಕುಂಭಮೇಳಕ್ಕೆ ಸರಿ ಸುಮಾರು 40 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ. CAIT ಅಂದ್ರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ದತ್ತಾಂಶದ ಪ್ರಕಾರ ಶೇ.80ರಷ್ಟು ಪ್ರವಾಸಿಗರು ತಲಾ ₹5,000 ಖರ್ಚು ಮಾಡಲಿದ್ದಾರೆ ಎಂದು ಅಂದಾಜಿಸಿದೆ. ಈ ಲೆಕ್ಕದ ಪ್ರಕಾರ ಮಹಾಕುಂಭ ಮೇಳದಲ್ಲಿ ನಡೆಯಲಿರುವ ಒಟ್ಟು ವ್ಯವಹಾರ ಮತ್ತು ಆದಾಯ ₹ 2 ಲಕ್ಷ ಕೋಟಿ ದಾಟಲಿದೆ. ಒಬ್ಬ ಪ್ರವಾಸಿಗ ₹10 ಸಾವಿರದಂತೆ ಖರ್ಚು ಮಾಡಿದರೆ ಸುಮಾರು 4 ಲಕ್ಷ ಕೋಟಿ ಆದಾಯದ ನಿರೀಕ್ಷೆಯಿದೆ ಎನ್ನುತ್ತದೆ ಅಂದ್ರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ದತ್ತಾಂಶ ವರದಿ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more