ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

Published : Apr 18, 2022, 01:36 PM IST

ಇಡೀ ದೇಶದಲ್ಲೇ ಸಾಲು ಸಾಲು ಗಲಭೆಗಳು ಉಂಟಾಗ್ತಿದ್ದಾವೆ.. ನಮ್ಮ ಕಣ್ಣೆದುರಲ್ಲೇ ಹಿಜಾಬ್ ವಿವಾದದಿಂದ ಶುರುವಾದ ಧರ್ಮ ದಂಗಲ್ ಇವತ್ತು, ದೇಶವನ್ನೆಲ್ಲಾ ವ್ಯಾಪಿಸಿಕೊಂಡಿದೆಯೇನೋ ಅನ್ನೋ ಅನುಮಾನ ಮೂಡುತ್ತಿದೆ.

ನವದೆಹಲಿ(ಏ.18): ರಾಮನವಮಿ ಮೆರವಣಿಗೆ ವೇಳೆ, ಬರೀ ಮಧ್ಯಪ್ರದೇಶ ಮಾತ್ರವೇ ಅಲ್ಲ. ಒಡಿಸಾದ ಜೋಡಾದಲ್ಲೂ ಗಲಾಟೆಯಾಗಿತ್ತು. ಮಧ್ಯ ಪ್ರದೇಶ, ಯುಪಿ, ಒಡಿಸಾ, ಈ ಮೂರು ರಾಜ್ಯಗಳು ಸೇರಿ, ಬರೋಬ್ಬರಿ 130 ಕಡೆಗಳಲ್ಲಿ ದೌರ್ಜನ್ಯ ನಡೆದಿತ್ತು.. ಅದರ ಬೆನ್ನಲ್ಲೇ ಗುಜರಾತಿನಲ್ಲೂ ಇಂಥದ್ದೇ ಅವಘಡ ಸಂಭವಿಸಿದೆ ಅನ್ನೋ ವರದಿಯೂ ಹೊರಬಂದಿತ್ತು.. ಇದಿಷ್ಟೇ ಅಲ್ಲದೆ, ಗೋವಾ, ರಾಜಸ್ಥಾನ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಹ ರಾಮನವಮಿ ದಿನವೇ ಹಿಂಸಾಚಾರ ನಡೆದ ಪ್ರಕರಣಗಳೂ ಬಯಲಿಗೆ ಬಂದು ಮತ್ತಷ್ಟು ಆತಂಕ ಮೂಡಿಸಿತ್ತು.

ಅದರ ಬೆನ್ನಲ್ಲೇ ಈಗ ಮತ್ತೆ, ಆಂಧ್ರ ಪ್ರದೇಶದಲ್ಲಿ ಹನುಮ ಜಯಂತಿಯಂದೂ ಕೂಡ ಇದೇ ಥರ ಹತ್ತಾರು ಕಡೆ ಗಲಭೆಗಳಾಗಿದ್ದಾವೆ ಅಂತ ವರದಿಯಾಗಿದೆ.. ಇತ್ತೀಚೆಗೆ ದೇಶದ ಹಲವು ಭಾಗಗಳಲ್ಲಿ ಕೋಮು ಸೌಹಾರ್ದ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ.. ಅದರ ಮುಂದುವರೆದ ಭಾಗ ಅನ್ನೋ ಹಾಗೆ, ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕಲ್ಲು ತೂರಾಟ ಸಂಭವಿಸಿದೆ. ಹೀಗಿದ್ದರೂ ಈ ಎಲ್ಲಾ ವಿಚಾರಗಳ ಬಗ್ಗೆ ಪಿಎಂ ಮೋದಿ ಸೈಲೆಂಟ್ ಆಗಿದ್ದಾರೆ

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more