ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

Published : Apr 18, 2022, 01:36 PM IST

ಇಡೀ ದೇಶದಲ್ಲೇ ಸಾಲು ಸಾಲು ಗಲಭೆಗಳು ಉಂಟಾಗ್ತಿದ್ದಾವೆ.. ನಮ್ಮ ಕಣ್ಣೆದುರಲ್ಲೇ ಹಿಜಾಬ್ ವಿವಾದದಿಂದ ಶುರುವಾದ ಧರ್ಮ ದಂಗಲ್ ಇವತ್ತು, ದೇಶವನ್ನೆಲ್ಲಾ ವ್ಯಾಪಿಸಿಕೊಂಡಿದೆಯೇನೋ ಅನ್ನೋ ಅನುಮಾನ ಮೂಡುತ್ತಿದೆ.

ನವದೆಹಲಿ(ಏ.18): ರಾಮನವಮಿ ಮೆರವಣಿಗೆ ವೇಳೆ, ಬರೀ ಮಧ್ಯಪ್ರದೇಶ ಮಾತ್ರವೇ ಅಲ್ಲ. ಒಡಿಸಾದ ಜೋಡಾದಲ್ಲೂ ಗಲಾಟೆಯಾಗಿತ್ತು. ಮಧ್ಯ ಪ್ರದೇಶ, ಯುಪಿ, ಒಡಿಸಾ, ಈ ಮೂರು ರಾಜ್ಯಗಳು ಸೇರಿ, ಬರೋಬ್ಬರಿ 130 ಕಡೆಗಳಲ್ಲಿ ದೌರ್ಜನ್ಯ ನಡೆದಿತ್ತು.. ಅದರ ಬೆನ್ನಲ್ಲೇ ಗುಜರಾತಿನಲ್ಲೂ ಇಂಥದ್ದೇ ಅವಘಡ ಸಂಭವಿಸಿದೆ ಅನ್ನೋ ವರದಿಯೂ ಹೊರಬಂದಿತ್ತು.. ಇದಿಷ್ಟೇ ಅಲ್ಲದೆ, ಗೋವಾ, ರಾಜಸ್ಥಾನ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಹ ರಾಮನವಮಿ ದಿನವೇ ಹಿಂಸಾಚಾರ ನಡೆದ ಪ್ರಕರಣಗಳೂ ಬಯಲಿಗೆ ಬಂದು ಮತ್ತಷ್ಟು ಆತಂಕ ಮೂಡಿಸಿತ್ತು.

ಅದರ ಬೆನ್ನಲ್ಲೇ ಈಗ ಮತ್ತೆ, ಆಂಧ್ರ ಪ್ರದೇಶದಲ್ಲಿ ಹನುಮ ಜಯಂತಿಯಂದೂ ಕೂಡ ಇದೇ ಥರ ಹತ್ತಾರು ಕಡೆ ಗಲಭೆಗಳಾಗಿದ್ದಾವೆ ಅಂತ ವರದಿಯಾಗಿದೆ.. ಇತ್ತೀಚೆಗೆ ದೇಶದ ಹಲವು ಭಾಗಗಳಲ್ಲಿ ಕೋಮು ಸೌಹಾರ್ದ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ.. ಅದರ ಮುಂದುವರೆದ ಭಾಗ ಅನ್ನೋ ಹಾಗೆ, ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕಲ್ಲು ತೂರಾಟ ಸಂಭವಿಸಿದೆ. ಹೀಗಿದ್ದರೂ ಈ ಎಲ್ಲಾ ವಿಚಾರಗಳ ಬಗ್ಗೆ ಪಿಎಂ ಮೋದಿ ಸೈಲೆಂಟ್ ಆಗಿದ್ದಾರೆ

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more