ಕರಿನೀರ ಶಿಕ್ಷೆಯ ಕರಾಳತೆಯನ್ನು ಅನುಭವಿಸಿದ್ದ ದೇಶಭಕ್ತ ಸಾವರ್ಕರ್‌!

ಕರಿನೀರ ಶಿಕ್ಷೆಯ ಕರಾಳತೆಯನ್ನು ಅನುಭವಿಸಿದ್ದ ದೇಶಭಕ್ತ ಸಾವರ್ಕರ್‌!

Published : Aug 16, 2022, 01:21 PM ISTUpdated : Aug 16, 2022, 01:22 PM IST

ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣಾ ಅರ್ಜಿ ಬರೆದು ಕೊಟ್ಟಿದ್ರು ಅಂತ ಕಾಂಗ್ರೆಸ್ ನಾಯಕರು ಆರೋಪಿಸ್ತಾರೆ. ಹಾಗಾದ್ರೆ ಅಂಡಮಾನ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆ ಅನುಭವಿಸುತ್ತಿದ್ದ ಸಾವರ್ಕರ್, ಕ್ಷಮಾಪಣೆಯ ಅರ್ಜಿ ಬರೆದಿದ್ದು ಯಾಕೆ..? ಅವತ್ತು ಸಾವರ್ಕರ್ ಅವರ ಮನಸ್ಸಿನಲ್ಲಿದ್ದದ್ದೇನು..? 
 

ಬೆಂಗಳೂರು (ಅ. 16): ವೀರ್‌ ಸಾವರ್ಕರ್‌ ವಿಚಾರವಾಗಿ ರಾಜ್ಯದಲ್ಲಿ ವಾಕ್ಸಮರ, ಅಹಿತಕರ ಘಟನೆಗಳು ನಡೆಯುತ್ತಿವೆ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ವ್ಯಕ್ತಿ ಎಂದು ಕಾಂಗ್ರೆಸ್‌  ವಿನಾಯಕ ದಾಮೋದರ ಸಾವರ್ಕರ್ ಅವರನ್ನು ದೂಷಣೆ ಮಾಡುತ್ತಿದೆ. ಹಾಗಿದ್ದಲ್ಲಿ, ಅಪ್ರತಿಮ ಸ್ವಾತಂತ್ರ್ಯವೀರನ ಬೆಚ್ಚಿ ಬೀಳಿಸುವ ಅಸಲಿ ಚರಿತ್ರೆ ಏನು ಎನ್ನುವುದರ ರಿಪೋರ್ಟ್‌.

ಸಾವರ್ಕರ್‌ ಬರೆದಿದ್ದ ಒಂದೇ ಒಂದು ಪುಸ್ತಕಕ್ಕೆ ಬೆಚ್ಚಿಬಿದ್ದಿದ್ದ ಬ್ರಿಟಿಷರು ಅವರಿಗೆ, ಭೂಲೋಕದ ನರಕ ಎಂದೇ ಹೇಳಲಾಗುವ ಅಂಡಾಮಾನ್‌ನಲ್ಲಿ ಕರಿನೀರ ಶಿಕ್ಷೆ ವಿಧಿಸಿದ್ದರು. 13 ವರ್ಷ ಈ ಕರಾಳ ಲೋಕದಲ್ಲಿ ನಲುಗಿದ್ದರು ಸಾವರ್ಕರ್‌. ಇಂಥ ಸಾವರ್ಕರ್‌ ಕಾಂಗ್ರೆಸ್‌ ಕಣ್ಣಲ್ಲಿ ಹೇಡಿಯಂತೆ ಕಾಣುತ್ತಿರೋದೇಕೆ? ಸಾವರ್ಕರ್ ವಿಚಾರದಲ್ಲಿ ಯಾಕಿಷ್ಟು ದ್ವೇಷ, ತಾತ್ಸಾರ..? ವಿನಾಯಕ ದಾಮೋದರ ಸಾವರ್ಕರ್ ಅನ್ನೋ ಸ್ವತಂತ್ರ ಸೇನಾನಿಯ ಚರಿತ್ರೆಯ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಿದೆ.

'ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ'

ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ಸಾವರ್ಕರ್. ಅವರ ಹೋರಾಟದ ಹಾದಿಯೇ ವಿಭಿನ್ನ. ಆ ಹಾದಿಯಲ್ಲಿ ಕಷ್ಟಪಟ್ಟು ಗಳಿಸಿದ್ದೆಲ್ಲವನ್ನೂ ಸಾವರ್ಕರ್ ಕಳೆದುಕೊಂಡು ಬಿಟ್ಟಿದ್ದರು. ದೇಶಕ್ಕೆ ಸ್ವಾತಂತ್ರ್ಯ ಲಕ್ಷಾಂತರ ಕ್ರಾಂತಿಕಾರಿಗಳ ಬಲಿದಾನವಾಗಿತ್ತು.  ಅಂತಹ ಕ್ರಾಂತಿಕಾರಿಗಳಲ್ಲಿ ಒಬ್ಬರು ವಿನಾಯಕ ದಾಮೋದರ್ ಸಾವರ್ಕರ್. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಲ್ಲಿ, ಅವರ ಬಲಿದಾನವನ್ನು ನೆನೆಯುವುದು ಪ್ರತಿಯೊಬ್ಬ ದೇಶಭಕ್ತರ ಕರ್ತವ್ಯ. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more