75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮೋದಿ ಪಂಚ ಮಹಾ ಪ್ರತಿಜ್ಞೆ!

75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮೋದಿ ಪಂಚ ಮಹಾ ಪ್ರತಿಜ್ಞೆ!

Published : Aug 16, 2022, 03:51 PM IST

ದೇಶದ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮೋದಿ ಮಾಡಿದರು ಪಂಚ ಮಹಾ ಪ್ರತಿಜ್ಞೆ.. ಅಮೃತ ಮಹೋತ್ಸವದ ಹೊತ್ತಲ್ಲಿ ಪಂಚಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇಕೆ..? ಆ 82 ನಿಮಿಷದ ಭಾಷಣದಲ್ಲಿ ಮೋದಿ ಹೇಳಿದ್ದೇನೇನು..? ಹೇಗಿರಲಿದೆ ಶತಮಾನೋತ್ಸವದ ಹೊತ್ತಿಗೆ ಭಾರತ..? 
 

ಬೆಂಗಳೂರು (ಆ.16): ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೃತ ಮಹೋತ್ಸವದ ಹೊತ್ತಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ನಂತರ ಅಂದಾಜು 82 ನಿಮಿಷಗಳ ಕಾಲ ಮಾತನಾಡಿದರು. ಈ ವೇಳೆ ಅವರು ಹೇಳಿದ ಪಂಚ ಪ್ರತಿಜ್ಞೆ ಗಮನಸೆಳೆದಿದೆ. ಅಮೃತ ಮಹೋತ್ಸವದ ಸಂಭ್ರಮದ ಬೆನ್ನಲ್ಲಿಯೇ ಶತಮಾನೋತ್ಸವದಲ್ಲಿ ದೇಶ ಯಾವ ಗುರಿಯನ್ನು ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ಮಾತನಾಡಿದರು.

ಮೋದಿ ಅವರು ಆಡಿದ ಒಂದೊಂದು ಮಾತೂ ಕೂಡ, ದೇಶದ ನಾಗರೀಕರಿಗೆ ಅತಿಮುಖ್ಯವಾದ ಸಂದೇಶಗಳನ್ನೂ ರವಾನಿಸಿದೆ. ಪ್ರಧಾನಿ ಮೋದಿ ಅವರು, ದೇಶದ ಜನತೆಗೆ ಪಂಚ ಪ್ರಾಣ ಅನ್ನೋ ಅಸ್ತ್ರ ಕೊಟ್ಟು, ಅಭಿವೃದ್ಧಿ ಯ ಕಡೆ ನಡೆಯೋದನ್ನಷ್ಟೇ ಹೇಳಿಲ್ಲ. ಅದರ ಜೊತೆಗೆ ಈ ದೇಶದ ಜನತೆ, ಯಾರ್ಯಾರ ಸ್ಮರಣೆ ಮಾಡಬೇಕು ಅನ್ನೋದನ್ನ ಕೂಡ ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯಕ್ಕೆ ಕೇಳಿದ್ರು ಶುಭ ಮಹೂರ್ತ, ಆಗಸ್ಟ್‌ 15ರ ದಿನಕ್ಕಾಗಿ ಕೇಳಲಾಗಿತ್ತು ಜಾತಕ

ನರೇಂದ್ರ  ಮೋದಿ ತಮ್ಮ ಸುದೀರ್ಘ ಭಾಷಣದಲ್ಲಿ ಇತಿಹಾಸ ನಿರ್ಮಿಸಿದವರನ್ನ ಮಾತ್ರವೇ ಅಲ್ಲ. ಇತಿಹಾಸ ಮುನ್ನಡೆಸಬೇಕಾದ ಹೊಣೆ ಹೊತ್ತವರಿಗೂ ಕಿವಿಮಾತು ಹೇಳಿದರು. ದೇಶದ ಪ್ರಜಾಪ್ರಭುತ್ವ, ನಾರಿ ಶಕ್ತಿಯ ಬಗ್ಗೆ ಮಾತನಾಡುತ್ತಾ, ಭಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದರು.

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more