ಮುಂಬೈನಲ್ಲಿ ‘ಎಟಿಎಂ’ ರಣತಂತ್ರ ಯಶಸ್ವಿ; ಕರ್ನಾಟಕದಲ್ಲಿಯೂ ವರ್ಕೌಟ್ ಆಗುವ ಭರವಸೆ

Apr 28, 2021, 1:34 PM IST

ಮುಂಬೈ (ಏ/ 28): ದೇಶದಲ್ಲೇ ಅತಿ ಹೆಚ್ಚು ಸೋಂಕು ದಾಖಲಾಗುತ್ತಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ ಈಗಲೂ ಸೋಂಕು ಏರಿಕೆಯ ಗತಿಯಲ್ಲೇ ಇದೆ. ಆದರೆ ರಾಜಧಾನಿ ಮುಂಬೈನಲ್ಲಿ ಸೋಂಕು ನಿಯಂತ್ರಣಕ್ಕಾಗಿ ‘ಎಟಿಎಂ’ ರಣತಂತ್ರ ರೂಪಿಸಲಾಗಿತ್ತು. A- Asses, T- Trace, M- Managament ಎಂದರ್ಥ. ಅಂದರೆ ಸೋಂಕಿತರ ಪತ್ತೆ, ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ದಾಖಲು ಹಾಗೂ ನಿರ್ವಹಣೆ.

ಕೋವಿಡ್ ಆಸ್ಪತ್ರೆಯಲ್ಲೇ ಮಾಂಗಲ್ಯಂ ತಂತು ನಾನೇನ..ಪಿಪಇ ಕಿಟ್ ಧರಿಸಿ ಸಪ್ತಪದಿ ತುಳಿದ ಜೋಡಿ 

ಇದು ಅತ್ಯಂತ ಯಶಸ್ವಿಯಾಗಿರುವ ಕಾರಣ ಏಪ್ರಿಲ್‌ ಮೊದಲ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಸೋಂಕಿತರ ಸಂಖ್ಯೆ ಕಳೆದೊಂದು ವಾರದಿಂದ ಹಂತಹಂತವಾಗಿ ಇಳಿಕೆ ಕಾಣುತ್ತಿದೆ. ಹಾಗಾದರೆ ಕರ್ನಾಟಕದಲ್ಲಿಯೂ ಜನತಾ ಕರ್ಫ್ಯೂ ಯಶಸ್ವಿಯಾಗುತ್ತಾ..?