ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!

ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!

Published : Aug 19, 2022, 01:17 PM IST

ಮೋದಿ ವಿಶೇಷ ಭದ್ರತಾ ಪಡೆಗೆ ಈಗ ಕರುನಾಡಿನ ಕಡುವೀರನೂ  ಎಂಟ್ರಿ ಕೊಟ್ಟಾಯ್ತು..  ಎದುರಾಗೋ ಆಪತ್ತು ಎಂಥದ್ದೇ ಇರಲಿ.. ಅದನ್ನೆಲ್ಲಾ ಪತ್ತೆ ಹಚ್ಚೋ ರಣಬೇಟೆಗಾರ ಈತ.. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಈತನಿಗೆ ಸಿಕ್ಕಿರೋ ಮನ್ನಣೆ ಗೌರವ ಅಷ್ಟಿಷ್ಟಲ್ಲ.. 6 ತಿಂಗಳ ಪ್ಲಾನಿಂಗ್.. 2 ತಿಂಗಳ ಟ್ರೇನಿಂಗ್ ಕೊಟ್ಟು, ಮೋದಿ ಭದ್ರತೆಯ ಅದಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ.. 
 

ಬೆಂಗಳೂರು (ಆ.19): ಕರ್ನಾಟಕದ ದೇಶೀಯ ನಾಯಿಗಳ ತಳಿಯಾದ ಮುಧೋಲ್ ಹೌಂಡ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸ್ಕ್ವಾಡ್‌ಗೆ ಸೇರ್ಪಡೆಗೊಂಡಿವೆ. ಅದರೊಂದಿಗೆ ಪ್ರಧಾನಿ ಭದ್ರತೆಯ ಟೀಮ್‌ನಲ್ಲಿ ಮುಧೋಳವೀರನಿಗೆ ಅತೀದೊಡ್ಡ ಜವಾಬ್ದಾರಿ ಸಿಕ್ಕಂತಾಗಿದೆ.

ಮುಧೋಳ ತಳಿಗಳು, ಈಗಾಗ್ಲೇ ಗಡಿಯನ್ನೂ ಕಾಯುತ್ತಿವೆ. ಭಾರತೀಯಸ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ತಳಿಯ ಶ್ವಾನಗಳು ಇನ್ಮುಂದೆ ಪ್ರಧಾನಿ ಅವರನ್ನೂ ಕಾಪಾಡಲಿವೆ. ಹಾಗಾದರೆ, ಈ ಶ್ವಾನಗಳಲ್ಲಿರುವ ಸ್ಪೆಷಾಲಿಟಿ ಏನು? ಯಾವ ಕಾರಣಕ್ಕಾಗಿ ಮೋದಿ ಭದ್ರತೆಗೆ ಇಂಥ ಶ್ವಾನಗಳನ್ನು ಎಸ್‌ಪಿಜಿ ಪಡೆಗೆ ಸೇರಿಸಿದ್ದಾರೆ ಎನ್ನೋದರ ಕಂಪ್ಲೀಟ್‌ ರಿಪೋರ್ಟ್‌.

ಮೋದಿ ಭದ್ರತಾ ಪಡೆಗೆ ಮುಧೋಳ ನಾಯಿಗಳು: ಕರ್ನಾಟಕಕ್ಕೆ ಕೀರ್ತಿ

ಹೆಮ್ಮೆಯ ಸಂಕೇತವಾಗಿರೋ ಮುಧೋಳ ತಳಿ ಶ್ವಾನಗಳಿಗೆ ಒಂದು ಇತಿಹಾಸವೇ ಇದೆ. ದೇಶದ ಪ್ರಧಾನಿಗಳ ರಕ್ಷಣೆ ಮಾಡೋದು ಅಂದ್ರೆ, ಅದು ದೇಶವನ್ನೇ ಕಾದಹಾಗೆ. ಪ್ರಧಾನಿ ಮೋದಿ ಅವರ ರಕ್ಷಣೆ ಕೊಡೋ್ಕ್ಕೆ ಅಂತಲೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಇದೆ. ಅವರ ಬಳಿ ಅತ್ಯಾಧುನಿಕ, ಅತಿ ಸುಧಾರಿತ ಆಯುಧಗಳೂ ಇವೆ. ಇದೆಲ್ಲದರ ಜೊತೆಗೆ, ಈಗ ನಮ್ಮ ಮುಧೋಳ ನಾಯಿಗಳೂ ಕೂಡ, ಆ ರಕ್ಷಣಾ ಪಡೆಯ ಭಾಗವಾಗಿದೆ. 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!