ಜನರ ಮಾಹಿತಿ ರಕ್ಷಣೆ, ಮಾರಾಟ ತಡೆಗೆ  ಡಿಪಿಡಿಪಿ ಕಾಯ್ದೆ ರಚನೆ: ರಾಜೀವ್‌ ಚಂದ್ರಶೇಖರ್

ಜನರ ಮಾಹಿತಿ ರಕ್ಷಣೆ, ಮಾರಾಟ ತಡೆಗೆ ಡಿಪಿಡಿಪಿ ಕಾಯ್ದೆ ರಚನೆ: ರಾಜೀವ್‌ ಚಂದ್ರಶೇಖರ್

Published : Aug 13, 2023, 04:06 PM ISTUpdated : Aug 13, 2023, 04:07 PM IST

ದೇಶದ ಪ್ರತಿಯೊಬ್ಬ ನಾಗರಿಕನ ಮಾಹಿತಿಯ ರಕ್ಷಣೆ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ತಡೆಯಲು ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ ಜಾರಿಗೊಳಿಸಲಾಗಿದೆ.

ಬೆಂಗಳೂರು: ದೇಶದ ಪ್ರತಿಯೊಬ್ಬ ನಾಗರಿಕನ ಮಾಹಿತಿಯ ರಕ್ಷಣೆ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ತಡೆಯಲು ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ (ಡಿಪಿಡಿಪಿ ಕಾಯ್ದೆ) ಜಾರಿಗೊಳಿಸಲಾಗಿದೆ. ಜನರ ಮಾಹಿತಿ ದುರುಪಯೋಗವಾಗದಂತೆ ತಡೆಯಲು ಬೇರೆ ದೇಶಗಳ ಕಾಯ್ದೆಯ ನೆರವು ಪಡೆಯದೆ ಭಾರತೀಯ ಕಾಯ್ದೆ ರಚಿಸಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಸಂಸದ ದಿವಸ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ ಕುರಿತು ವಿವರಿಸಿದರು.

ದೇಶದ ಪ್ರತಿಯೊಬ್ಬ ಪ್ರಜೆಯ ಮಾಹಿತಿಯನ್ನೂ ಸಂರಕ್ಷಿಸುವ ಸಲುವಾಗಿ ಡಿಪಿಡಿಪಿ ಕಾಯ್ದೆ ರೂಪಿಸಲಾಗಿದೆ. 2010ರಲ್ಲಿ ರಾಜ್ಯಸಭೆಯಲ್ಲಿ ನಾನು ಜನರ ಮಾಹಿತಿ ಸಂರಕ್ಷಣೆ ಕುರಿತಂತೆ ಖಾಸಗಿ ಬಿಲ್‌ ಮಂಡಿಸಿದ್ದೆ. ಆದರೆ, ಅಂದಿನ ಯುಪಿಎ ಸರ್ಕಾರ ಅದಕ್ಕೆ ಮಹತ್ವ ನೀಡಲಿಲ್ಲ. ಹೀಗಾಗಿ ಖಾಸಗಿತನ ಅಥವಾ ಮಾಹಿತಿ ಸಂರಕ್ಷಣೆಗೆ ಕಾಯ್ದೆ ರೂಪ ದೊರೆತಿರಲಿಲ್ಲ. ಅದಾದ ನಂತರ ದೆಹಲಿಯ ಕನೌಟ್‌ ಪ್ರದೇಶದ ಪಾಲಿಕೆ ಬಜಾರ್‌ನಲ್ಲಿ .50ಕ್ಕೆ ಜನರ ಮಾಹಿತಿ ಸೋರಿಕೆ ಮಾಡುವ ವಿಚಾರವನ್ನು ಸದನದ ಗಮನ ಸೆಳೆದಿದ್ದೆ. ಆಗಲೂ ಸರಿಯಾಗಿ ಪ್ರತಿಕ್ರಿಯೆ ದೊರೆತಿರಲಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆ ಮೇರೆಗೆ ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ ಅನುಷ್ಠಾನಗೊಳಿಸಲಾಗಿದೆ ಎಂದರು.

2019ರಲ್ಲಿ ಡಿಪಿಡಿಪಿ ಕಾಯ್ದೆಯ ಕರಡು ಪ್ರತಿ ರೂಪಿಸಿ ಪ್ರಕಟಿಸಲಾಗಿತ್ತು. ಆದರೆ, ಕೊರೋನಾ ಸೇರಿ ಇನ್ನಿತರ ಕಾರಣಗಳಿಂದಾಗಿ ಅಂತಿಮ ಕಾಯ್ದೆಗೆ ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಲೋಕಸಭೆ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದು ನೋಟಿಫಿಕೇಷನ್‌ ಹೊರಡಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ತಂತ್ರಜ್ಞಾನ ಮತ್ತಷ್ಟುಅಭಿವೃದ್ಧಿ ಹೊಂದಲಿದೆ. ಆಗ ನಮ್ಮ ಮಾಹಿತಿಯ ರಕ್ಷಣೆ ಮತ್ತಷ್ಟುಕಠಿಣವಾಗಲಿದೆ. ಆದರೆ, ಡಿಪಿಡಿಪಿ ಕಾಯ್ದೆಯಿಂದಾಗಿ ಪ್ರತಿಯೊಬ್ಬ ನಾಗರಿಕನ ಮಾಹಿತಿಯೂ ಸುರಕ್ಷಿತವಾಗಿರಲಿದೆ ಎಂದು ಹೇಳಿದರು.
 
ಡಿಪಿಡಿಪಿ ಕಾಯ್ದೆಯಂತೆ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ಗಳು ಜನರ ಮಾಹಿತಿ ಸಂಗ್ರಹಿಸಿದ ನಂತರ ಅದನ್ನು ಬೇರೆಯವರಿಗೆ ನೀಡದಂತೆ ನಿರ್ಬಂಧ ಹೇರಲಾಗುತ್ತದೆ. ಜತೆಗೆ ಸೇವೆ ನೀಡಿದ ನಂತರ ಜನರ ಮಾಹಿತಿಯನ್ನು ಅಳಿಸಿ ಹಾಕಬೇಕು, ಯಾವ ವಿಚಾರಕ್ಕೆ ಮಾಹಿತಿ ಪಡೆಯಲಾಗುತ್ತದೆಯೇ ಅಷ್ಟಕ್ಕೆ ಮಾತ್ರ ಅದನ್ನು ಬಳಸಬೇಕು ಹಾಗೂ ಎಷ್ಟುಬೇಕೋ ಅಷ್ಟುಮಾಹಿತಿಯನ್ನು ಮಾತ್ರ ಸಂಗ್ರಹಿಸಬೇಕು ಎಂಬ ನಿರ್ಬಂಧ ವಿಧಿಸಲಾಗುತ್ತದೆ. ಒಂದು ವೇಳೆ ಕಾಯ್ದೆಯಲ್ಲಿನ ಅಂಶಗಳನ್ನು ಉಲ್ಲಂಘಿಸಿ ಜನರ ಮಾಹಿತಿ ಸೋರಿಕೆ ಮಾಡಿದರೆ ಸಂಸ್ಥೆಗೆ .250 ಕೋಟಿ ದಂಡ ವಿಧಿಸಲು ಅವಕಾಶವಿದೆ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಸಾರ್ವಜನಿಕರು ತಮ್ಮ ಮಾಹಿತಿ ಸೋರಿಕೆಯಾದ ಕುರಿತು ಡೇಟಾ ಪ್ರೊಟೆಕ್ಷನ್‌ ಬೋರ್ಡ್‌ನಲ್ಲಿ ದೂರು ದಾಖಲಿಸಬಹುದು. ಆ ದೂರನ್ನು ಬೋರ್ಡ್‌ ತನಿಖೆ ನಡೆಸಲಿದ್ದು, ಒಂದು ವೇಳೆ ಅಕ್ರಮ ಸಾಬೀತಾದರೆ ಭಾರೀ ದಂಡ ವಿಧಿಸಲಾಗುವುದು. ಎಷ್ಟುಮಾಹಿತಿ ಸೋರಿಕೆಯಾಗಿದೆಯೋ ಅಷ್ಟುಪ್ರಮಾಣದ ದಂಡ ವಿಧಿಸಲಾಗುತ್ತದೆ. ಅದು ಸರ್ಕಾರಿ ಸಂಸ್ಥೆಯಾಗಿರಬಹುದು ಅಥವಾ ಖಾಸಗಿ ಸಂಸ್ಥೆಯಾಗಿರಬಹುದು. ಎಲ್ಲ ರೀತಿಯ ಸಂಸ್ಥೆಗಳಿಗೂ ಒಂದೇ ರೀತಿಯ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?