ಫೇಸ್‌ಬುಕ್‌ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್‌ ಗೂಢಚರನಾದ ಕತೆ!

ಫೇಸ್‌ಬುಕ್‌ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್‌ ಗೂಢಚರನಾದ ಕತೆ!

Published : Sep 21, 2021, 04:34 PM IST

ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

ಬೆಂಗಳೂರು(ಸೆ. 21) ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

ಜಿತೇಂದರ್‌ ಸಿಂಗ್‌ ಮೂಲತಃ ರಾಜಸ್ಥಾನದ ಬಾಡ್ಮೇರ್‌ ಜಿಲ್ಲೆಯವನಾಗಿದ್ದಾನೆ. ಕಳೆದ ಎರಡೂವರೆ ವರ್ಷಗಳಿಂದ ನಗರದಲ್ಲಿ ಬಟ್ಟೆವ್ಯಾಪಾರ ಮಾಡುತ್ತಿದ್ದ. ರಸ್ತೆ ಬದಿ ಬಟ್ಟೆವ್ಯಾಪಾರ ಮಾಡುವವರಿಗೆ ಸಗಟು ದರದಲ್ಲಿ ಬಟ್ಟೆಒದಗಿಸುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹೆಚ್ಚಾಗಿ ಬಳಸುವ ಚಟ ಇತ್ತು. ಯುವತಿಯರಿಗೆ ಫೇಸ್‌ಬುಕ್‌ ಮೂಲಕ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ಬಳಿಕ ತಾನು ಸೇನಾ ಅಧಿಕಾರಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡು ಚಾಟ್‌ ಮಾಡುತ್ತಿದ್ದ. 

ಪ್ರಾಯಶಃ ತನಗೆ ತಿಳಿಯದೆಯೇ ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ, ದೇಶದ ಭದ್ರತೆ ಬಗ್ಗೆ ಎಚ್ಚರಿಕೆ ವಹಿಸದೆ ಸೂಕ್ಷ್ಮ ಸೇನಾ ನೆಲೆಗಳ ವಿವರವನ್ನು ಶತ್ರುದೇಶಕ್ಕೆ ನೀಡಿದ ಬೆಂಗಳೂರಿನ ಕಾಟನ್‌ಪೇಟೆ ನಿವಾಸಿ, ಸಗಟು ವಸ್ತ್ರ ವ್ಯಾಪಾರಿ ಜಿತೇಂದರ್‌ ಸಿಂಗ್‌ ಎಂಬಾತನ ‘ಹನಿಟ್ರ್ಯಾಪ್‌’ ಕತೆಯಿದು.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!