ಫೇಸ್‌ಬುಕ್‌ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್‌ ಗೂಢಚರನಾದ ಕತೆ!

ಫೇಸ್‌ಬುಕ್‌ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್‌ ಗೂಢಚರನಾದ ಕತೆ!

Published : Sep 21, 2021, 04:34 PM IST

ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

ಬೆಂಗಳೂರು(ಸೆ. 21) ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

ಜಿತೇಂದರ್‌ ಸಿಂಗ್‌ ಮೂಲತಃ ರಾಜಸ್ಥಾನದ ಬಾಡ್ಮೇರ್‌ ಜಿಲ್ಲೆಯವನಾಗಿದ್ದಾನೆ. ಕಳೆದ ಎರಡೂವರೆ ವರ್ಷಗಳಿಂದ ನಗರದಲ್ಲಿ ಬಟ್ಟೆವ್ಯಾಪಾರ ಮಾಡುತ್ತಿದ್ದ. ರಸ್ತೆ ಬದಿ ಬಟ್ಟೆವ್ಯಾಪಾರ ಮಾಡುವವರಿಗೆ ಸಗಟು ದರದಲ್ಲಿ ಬಟ್ಟೆಒದಗಿಸುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹೆಚ್ಚಾಗಿ ಬಳಸುವ ಚಟ ಇತ್ತು. ಯುವತಿಯರಿಗೆ ಫೇಸ್‌ಬುಕ್‌ ಮೂಲಕ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ಬಳಿಕ ತಾನು ಸೇನಾ ಅಧಿಕಾರಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡು ಚಾಟ್‌ ಮಾಡುತ್ತಿದ್ದ. 

ಪ್ರಾಯಶಃ ತನಗೆ ತಿಳಿಯದೆಯೇ ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ, ದೇಶದ ಭದ್ರತೆ ಬಗ್ಗೆ ಎಚ್ಚರಿಕೆ ವಹಿಸದೆ ಸೂಕ್ಷ್ಮ ಸೇನಾ ನೆಲೆಗಳ ವಿವರವನ್ನು ಶತ್ರುದೇಶಕ್ಕೆ ನೀಡಿದ ಬೆಂಗಳೂರಿನ ಕಾಟನ್‌ಪೇಟೆ ನಿವಾಸಿ, ಸಗಟು ವಸ್ತ್ರ ವ್ಯಾಪಾರಿ ಜಿತೇಂದರ್‌ ಸಿಂಗ್‌ ಎಂಬಾತನ ‘ಹನಿಟ್ರ್ಯಾಪ್‌’ ಕತೆಯಿದು.

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು