ಪೊಲೀಸರ ಬಂಧನದಲ್ಲಿ ಪೊರಕೆ ಹಿಡಿದು ಕೊಠಡಿ ಸ್ವಚ್ಚಗೊಳಿಸಿದ ಪ್ರಿಯಾಂಕಾ ಗಾಂಧಿ!

Oct 4, 2021, 3:30 PM IST

ಉತ್ತರ ಪ್ರದೇಶ(ಅ.04): ಲಂಖೀಪುರದಲ್ಲಿ ನಡೆದ ಹಿಂಸಾಚಾರ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳೂ ನಡೆಯುತ್ತಿದೆ. ಹಿಂಸಾಚಾರಕ್ಕೆ ಬಲಿಯಾದ ರೈತ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಆಗಮಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಯುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹಬಂಧನದಲ್ಲಿರಿಸಿದ ಕೊಠಡಿ ಸ್ವಚ್ಚವಿಲ್ಲದ ಕಾರಣ ಪ್ರಿಯಾಂಕ ಪೊರಕೆ ಹಿಡಿದು ಕಸ ಗುಡಿಸಿ ಕೊಠಡಿ ಸ್ವಚ್ಚಗೊಳಿಸಿದ್ದಾರೆ.