ಕಾಶಿ, ಮಥುರಾ ವಿವಾದ ಬಗೆಹರಿಸಲು ಆರೆಸ್ಸೆಸ್‌ ಪ್ಲ್ಯಾನ್‌, ಮುಗಿಯುತ್ತಾ ದಶಕಗಳ ವಿವಾದ?

ಕಾಶಿ, ಮಥುರಾ ವಿವಾದ ಬಗೆಹರಿಸಲು ಆರೆಸ್ಸೆಸ್‌ ಪ್ಲ್ಯಾನ್‌, ಮುಗಿಯುತ್ತಾ ದಶಕಗಳ ವಿವಾದ?

Published : Jan 30, 2023, 11:18 PM IST

ದಶಕಗಳ ಕಾಲ ವಿವಾದದ ರೂಪದಲ್ಲಿಯೇ ಇರುವ ಕಾಶಿ ಹಾಗೂ ಮಥುರಾ ವಿವಾದ ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ. ಆರೆಸ್ಸೆಸ್‌ ಸರಸಂಘಚಾಲಕರ ಬಳಿಕ ಮುಸ್ಲಿಂ ಚಿಂತಕರೊಂದಿಗೆ ಆರೆಸ್ಸೆಸ್‌ ಉಳಿದ ನಾಯಕರು 2ನೇ ಸಭೆ ನಡೆಸಿದ್ದಾರೆ.
 

ನವದೆಹಲಿ (ಜ.30): ಅಯೋಧ್ಯೆ ಬಳಿಕ ಕಾಶಿ ವಿಶ್ವನಾಥ ಹಾಗೂ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯನ್ನು ಮತ್ತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಿಂದುಗಳ ಹೋರಾಟ ಆರಂಭವಾಗಿದೆ. ಈಗಾಗಲೇ ಈ ಎರಡೂ ಕೇಸ್‌ಗಳ ವಿಚಾರಣೆ ಕೋರ್ಟ್‌ನಲ್ಲಿದೆ. ಇದರ ನಡುವೆ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸುವ ನಿಟ್ಟಿನಲ್ಲಿ ಆರೆಸ್ಸೆಸ್‌ನ ಪ್ರಯತ್ನ ಆರಂಭವಾಗಿದೆ.

ವಿವಾದದಿಂದ ವಿಶ್ವಾಸದೆಡೆಗೆ ಆರೆಸ್ಸೆಸ್‌ ಮಹಾ ಹೆಜ್ಜೆ ಇಡುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ದೆಹಲಿಯಲ್ಲಿ ಇಮಾಮ್‌ ಅಸೋಸಿಯೇಷನ್‌ ಮುಖ್ಯಸ್ಥ ಉಮರ್‌ ಅಹ್ಮದ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಬಳಿಕ ಜನವರಿ 14 ರಂದು ಮಾಜಿ ಗವರ್ನರ್‌ ನಜೀಬ್‌ ಜಂಗ್‌ ಮನೆಯಲ್ಲಿ ಆರೆಸ್ಸೆಸ್‌ ನಾಯಕರಾದ ಇಂದ್ರೇಶ್‌ ಕುಮಾರ್‌, ಕೃಷ್ಣಗೋಪಾಲ್‌, ರಾಮ್‌ಲಾಲ್‌ ಹಾಗೂ ಮುಸ್ಲಿಂ ಚಿಂತಕರಾದ ಮಾಜಿ ಚುನಾವಣಾ ಆಯುಕ್ತ ಸಯ್ಯದ್‌ ಖುರೇಷಿ, ಪತ್ರಕರ್ತ ಶಾಹಿದ್‌ ಸಿದ್ದಿಕಿ, ದಾರೂಲ್ - ಇ- ಇಸ್ಲಾಂ ಹಿಂದ್, ಜಾಮತ್ ಉಲಾಮಾ ಇ ಹಿಂದ್, ದಾರೂಲ್ ಉಲಾಮ್ ದಿಯೋಬಂದ್ ನಾಯಕರು ಭಾಗವಹಿಸಿದ್ದರು.

60 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, 50 ಕೋಟಿ ನಗದು, ಕಾಶಿ ವಿಶ್ವನಾಥ ಕೂಡ ಈಗ ಶ್ರೀಮಂತ!

ಇದರ ನಡುವೆ ಸೌಹಾರ್ದತೆಗೆ ಎಐಎಂಐಎಂ ಮುಖಂಡ ಆಸಿಮ್‌ ವಖಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್‌ನವರಿಗೆ ಯಾವ ಅಧಿಕಾರ ಇದೆ ಎಂದು ಮಾತುಕತೆ ಮಾಡುತ್ತಿದ್ದಾರೆ. ಮಾತುಕತೆಗೆ ಹೋದವರು ಮುಸ್ಲಿಂ ಸಮಾಜವನ್ನು ಪ್ರತಿನಿಧಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರದಿಂದ ಲಾಭ ಪಡೆದ ಕೆಲ ಮುಸ್ಲಿಮರು ಮಾತುಕತೆಗೆ ಹೋಗಿದ್ದಾರೆ. ಆರೆಸ್ಸೆಸ್ ದೇಶದ ಎಲ್ಲ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಆರೆಸ್ಸೆಸ್ ನವರಿಗೆ ಬೇಕಾದಂತೆ ಮಾತುಕತೆ ನಡೆಸಬಾರದು ಎಂದು ಸಿಪಿಐ ಮುಖಂಡ ಅತುಲ್‌ ಅಂಜಾನ್‌ ಹೇಳಿದ್ದಾರೆ.

18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
Read more