ಕನ್ನಡದ ಏಕೈಕ ಪ್ರಧಾನಿ ದೇವೇಗೌಡರದ್ದು ಗಂಡೆದೆಯ ಗುಂಡಿಗೆ; ಉಗ್ರರ ಅಗ್ನಿಕುಂಡಕ್ಕೆ ಕಾಲಿಟ್ಟಿದ್ದ ದೊಡ್ಡಗೌಡ್ರು!

ಕನ್ನಡದ ಏಕೈಕ ಪ್ರಧಾನಿ ದೇವೇಗೌಡರದ್ದು ಗಂಡೆದೆಯ ಗುಂಡಿಗೆ; ಉಗ್ರರ ಅಗ್ನಿಕುಂಡಕ್ಕೆ ಕಾಲಿಟ್ಟಿದ್ದ ದೊಡ್ಡಗೌಡ್ರು!

Published : Sep 01, 2024, 01:45 PM IST

ದೇಶದ ಏಕೈಕ ಕನ್ನಡಿಗ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಉಗ್ರರ ಬೆಂಕಿ ಚೆಂಡಿನಂತಿದ್ದ ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಗಟ್ಟಿ ಗುಂಡಿಗೆಯನ್ನು ಪ್ರದರ್ಶನ ಮಾಡಿದ್ದರು.

ದೇಶದ ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ಹೆಚ್.ಡಿ. ದೇವೇಗೌಡರದ್ದು ನಿಜಕ್ಕೂ ಗಂಡೆದೆಯ ಗುಂಡಿಗೆ ಎಂದೇ ಹೇಳಬಹುದು. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಉಗ್ರರ ಉಪಟಳದಿಂದಾಗಿ ಅಗ್ನಿಕುಂಡದಂತಿದ್ದ ಕಾಶ್ಮೀರಕ್ಕೆ ಎರೆಡೆರಡು ಬಾರಿ ಭೇಟಿ ನೀಡಿ ಕ್ರಾಂತಿ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಎಲ್ಲ ಪ್ರಧಾನಿಗಳು ಕಾಶ್ಮೀರಕ್ಕೆ ಹೋದರೆ ಜೀವಕ್ಕೆ ಉಳಿಗಾಲವಿಲ್ಲ ಎಂಬ ಭಯದಿಂದ ಹಿಂಜರಿಯುತ್ತಿದ್ದ ಭಯದ ವಾತಾವರಣ ಇದ್ದಾಗ. ಅಲ್ಲಿಗೆ ಭೇಟಿ ನೀಡಿದ್ದ ದೇವೇಗೌಡರು ಹೆಚ್ಚು ಭಧ್ರತೆಯನ್ನೂ ಪಡೆಯದೇ ಓಪೆನ್ ಜೀಪಿನಲ್ಲಿ ಕಾಶ್ಮೀರದಲ್ಲಿ ಸುತ್ತಾಡಿದ್ದಾರೆ. ಇದನ್ನು ನೋಡಿದ ದೇಶದ ಜನರು ನಿಜಕ್ಕೂ ದೇವೇಗೌಡರದ್ದು ಗಂಡೆದೆಯ ಗುಂಡಿಗೆಯೇ ಇರಬೇಕು ಎಂದು ಕೊಂಡಾಡಿದ್ದರು.

ಕಳೆದ 27 ವರ್ಷಗಳ ಹಿಂದೆ ಪ್ರಧಾನಮಂತ್ರಿ ಆಗಿದ್ದಾಗ ಕಾಶ್ಮೀರ ಕಣಿವೆಗೆ 2 ಬಾರಿ ಭೇಟಿ ನೀಡಿದ್ದ ದೇವೇಗೌಡರು ಈಗ ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ 92ನೇ ವಯಸ್ಸಿನಲ್ಲಿ ಮತ್ತೆ ಕಣಿವೆ ರಾಜ್ಯಕ್ಕೆ ಹೋಗಿದ್ದಾರೆ. ಶಂಕರಾಚಾರ್ಯ ಬೆಟ್ಟವನ್ನೇರಿ ಶಿವನ ದರ್ಶನ ಪಡೆದಿದ್ದಾರೆ. ಅದು ತಮ್ಮ ಜೀವಮಾನದ ಕನಸಾಗಿತ್ತು ಅಂದಿದ್ದಾರೆ. ಕಾಶ್ಮೀರದಿಂದ ನೇರವಾಗಿ ಹುಟ್ಟೂರಿಗೆ ಬಂದ ದೇವೇಗೌಡರು, ಶ್ರಾವಣಮಾಸದ ಕಡೇ ಶನಿವಾರ ರಂಗನಾಥ ಸ್ವಾಮಿ ದರ್ಶನ ಪಡೆದಿದ್ದಾರೆ. ಈ ವೇಳೆ ತಮ್ಮ ಕಾಶ್ಮೀರ ಭೇಟಿಯ ಬಗ್ಗೆ ದೇವೇಗೌಡರು ಮಾತಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 27 ವರ್ಷಗಳ ಹಿಂದೆ ದೊಡ್ಡ ಕ್ರಾಂತಿಯನ್ನು ಮಾಡಿದ್ದರು.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more