News Hour: ಮಾಲ್ಡೀವ್ಸ್‌ ಅನ್ನೋ ಪುಟ್ಟ ದೇಶವನ್ನು ಕಾಪಾಡಿದ್ದೇ ಭಾರತ!

News Hour: ಮಾಲ್ಡೀವ್ಸ್‌ ಅನ್ನೋ ಪುಟ್ಟ ದೇಶವನ್ನು ಕಾಪಾಡಿದ್ದೇ ಭಾರತ!

Published : Jan 08, 2024, 10:44 PM ISTUpdated : Jan 08, 2024, 10:46 PM IST

ಇಂದು ಲಕ್ಷದ್ವೀಪದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್‌ಗೆ ಉರಿದುಕೊಂಡಿರುವ ಇದೇ ಮಾಲ್ಡೀವ್ಸ್ ದೇಶವನ್ನು ಹಿಂದೊಮ್ಮೆ ಅಪಾಯದಿಂದ ಕಾಪಾಡಿದ್ದು ಇದೇ ಭಾರತ.
 

ಬೆಂಗಳೂರು (ಜ.8): ಭಾರತದ ಕುರಿತಾಗಿ ಮಾಲ್ಡೀವ್ಸ್‌ ದೇಶದ ಮೂವರು ಸಚಿವರುಗಳು ಆಡಿರುವ ಮಾತಿಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬಾಯ್ಕಾಟ್‌ ಮಾಲ್ಡೀವ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಇದರ ನಡುವೆ ಭಾರತೀಯರು, ನಿಮ್ಮ ಪುಟ್ಟ ರಾಷ್ಟ್ರವನ್ನು ಕಾಪಾಡಿದ್ದೇ ಭಾರತ ಎಂದು ಅವರಿಗೆ ನೆನಪಿಸಿದ್ದಾರೆ.

1988ರ ನವೆಂಬರ್‌ನಲ್ಲಿ ಭಾರತದಿಂದ ಆಪರೇಷನ್ ಕ್ಯಾಕ್ಟಸ್ ಆರಂಭವಾಗಿತ್ತು. ತಮಿಳು ಉಗ್ರರು ಮಾಲ್ಡೀವ್ಸ್‌ ದೇಶವನ್ನು ವಶಪಡಿಸಿಕೊಂಡಿದ್ದರು. ಅಂದು ನೆರವಿಗಾಗಿ ಮಾಲ್ಡೀವ್ಸ್‌ ಭಾರತದ ಬಳಿ ಮನವಿ ಮಾಡಿತ್ತು.  ನೆರವು ಕೇಳಿದ 9 ಗಂಟೆಗಳಲ್ಲೇ ಆಪರೇಷನ್ ಶುರು ಮಾಡಿದ್ದ ಭಾರತ, 18 ಗಂಟೆಗಳಲ್ಲೇ ಆಪರೇಷನ್‌ ಅಂತ್ಯಗೊಂಡಿತ್ತು.  ಇಡೀ ಮಾಲ್ಡೀವ್ಸ್‌ ಎನ್ನುವ ದೇಶವನ್ನು 9 ಗಂಟೆಗಳಲ್ಲಿಯೇ ಭಾರತ ರಕ್ಷಿಸಿತ್ತು. ವಿದೇಶವೊಂದರ ರಕ್ಷಣೆಗಾಗಿ ಭಾರತದಿಂದ ನಡೆದ ಆಪರೇಷನ್‌ ಆಗಿತ್ತು.

ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್‌ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್‌ ಉತ್ತರ!

ತಮಿಳು ಉಗ್ರರು ಮಾಲ್ಡೀವ್ಸ್‌ ಮೇಲೆ ಯಾವ ರೀತಿ ದಾಳಿ ಮಾಡಿದ್ದರೆಂದರೆ, ಮಾಲ್ಡೀವ್ಸ್ ಉದ್ಯಮಿಯಿಂದಲೇ ಅಧ್ಯಕ್ಷರ ಹತ್ಯೆಗೆ ಪ್ರಯತ್ನ ನಡೆದಿತ್ತು. ಅಬ್ದುಲ್ಲಾ ಲುತಾಫಿ ಎಂಬಾತನಿಂದ ಮಾಲ್ಡೀವ್ಸ್ ವಶಕ್ಕೆ ಯತ್ನ ನಡೆದಿತ್ತು. ಸಿಕ್ಕಾ ಅಸಿಫ್ ಇಸ್ಮಾಯಿಲ್ ಮಲ್ಲಿಕ್ ಜೊತೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ಎಲ್‌ಟಿಟಿಇ ಜೊತೆ ಸೇರಿಕೊಂಡು ಮಾಲ್ಡೀವ್ಸ್ ವಶಕ್ಕೆ ಷಡ್ಯಂತ್ರ ಮಾಡಲಾಗಿತ್ತು.

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
Read more