News Hour: ಮಾಲ್ಡೀವ್ಸ್‌ ಅನ್ನೋ ಪುಟ್ಟ ದೇಶವನ್ನು ಕಾಪಾಡಿದ್ದೇ ಭಾರತ!

News Hour: ಮಾಲ್ಡೀವ್ಸ್‌ ಅನ್ನೋ ಪುಟ್ಟ ದೇಶವನ್ನು ಕಾಪಾಡಿದ್ದೇ ಭಾರತ!

Published : Jan 08, 2024, 10:44 PM ISTUpdated : Jan 08, 2024, 10:46 PM IST

ಇಂದು ಲಕ್ಷದ್ವೀಪದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್‌ಗೆ ಉರಿದುಕೊಂಡಿರುವ ಇದೇ ಮಾಲ್ಡೀವ್ಸ್ ದೇಶವನ್ನು ಹಿಂದೊಮ್ಮೆ ಅಪಾಯದಿಂದ ಕಾಪಾಡಿದ್ದು ಇದೇ ಭಾರತ.
 

ಬೆಂಗಳೂರು (ಜ.8): ಭಾರತದ ಕುರಿತಾಗಿ ಮಾಲ್ಡೀವ್ಸ್‌ ದೇಶದ ಮೂವರು ಸಚಿವರುಗಳು ಆಡಿರುವ ಮಾತಿಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬಾಯ್ಕಾಟ್‌ ಮಾಲ್ಡೀವ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಇದರ ನಡುವೆ ಭಾರತೀಯರು, ನಿಮ್ಮ ಪುಟ್ಟ ರಾಷ್ಟ್ರವನ್ನು ಕಾಪಾಡಿದ್ದೇ ಭಾರತ ಎಂದು ಅವರಿಗೆ ನೆನಪಿಸಿದ್ದಾರೆ.

1988ರ ನವೆಂಬರ್‌ನಲ್ಲಿ ಭಾರತದಿಂದ ಆಪರೇಷನ್ ಕ್ಯಾಕ್ಟಸ್ ಆರಂಭವಾಗಿತ್ತು. ತಮಿಳು ಉಗ್ರರು ಮಾಲ್ಡೀವ್ಸ್‌ ದೇಶವನ್ನು ವಶಪಡಿಸಿಕೊಂಡಿದ್ದರು. ಅಂದು ನೆರವಿಗಾಗಿ ಮಾಲ್ಡೀವ್ಸ್‌ ಭಾರತದ ಬಳಿ ಮನವಿ ಮಾಡಿತ್ತು.  ನೆರವು ಕೇಳಿದ 9 ಗಂಟೆಗಳಲ್ಲೇ ಆಪರೇಷನ್ ಶುರು ಮಾಡಿದ್ದ ಭಾರತ, 18 ಗಂಟೆಗಳಲ್ಲೇ ಆಪರೇಷನ್‌ ಅಂತ್ಯಗೊಂಡಿತ್ತು.  ಇಡೀ ಮಾಲ್ಡೀವ್ಸ್‌ ಎನ್ನುವ ದೇಶವನ್ನು 9 ಗಂಟೆಗಳಲ್ಲಿಯೇ ಭಾರತ ರಕ್ಷಿಸಿತ್ತು. ವಿದೇಶವೊಂದರ ರಕ್ಷಣೆಗಾಗಿ ಭಾರತದಿಂದ ನಡೆದ ಆಪರೇಷನ್‌ ಆಗಿತ್ತು.

ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್‌ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್‌ ಉತ್ತರ!

ತಮಿಳು ಉಗ್ರರು ಮಾಲ್ಡೀವ್ಸ್‌ ಮೇಲೆ ಯಾವ ರೀತಿ ದಾಳಿ ಮಾಡಿದ್ದರೆಂದರೆ, ಮಾಲ್ಡೀವ್ಸ್ ಉದ್ಯಮಿಯಿಂದಲೇ ಅಧ್ಯಕ್ಷರ ಹತ್ಯೆಗೆ ಪ್ರಯತ್ನ ನಡೆದಿತ್ತು. ಅಬ್ದುಲ್ಲಾ ಲುತಾಫಿ ಎಂಬಾತನಿಂದ ಮಾಲ್ಡೀವ್ಸ್ ವಶಕ್ಕೆ ಯತ್ನ ನಡೆದಿತ್ತು. ಸಿಕ್ಕಾ ಅಸಿಫ್ ಇಸ್ಮಾಯಿಲ್ ಮಲ್ಲಿಕ್ ಜೊತೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ಎಲ್‌ಟಿಟಿಇ ಜೊತೆ ಸೇರಿಕೊಂಡು ಮಾಲ್ಡೀವ್ಸ್ ವಶಕ್ಕೆ ಷಡ್ಯಂತ್ರ ಮಾಡಲಾಗಿತ್ತು.

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more