ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?

ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?

Published : Jan 21, 2026, 05:19 PM IST

ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಬಿಹಾರ ಮೂಲದ ನಿತಿನ್ ನಬೀನ್‌ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಹಿಂದೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಡುವಿನ ಸಂಬಂಧವನ್ನು ಸರಿಪಡಿಸುವ ತಂತ್ರವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು: 1984ರಲ್ಲಿ ಕೇವಲ ಎರಡೇ ಎರಡು ಸೀಟು ಗೆದ್ದಿದ್ದ ಪಕ್ಷ, ಇವತ್ತು ಭಾರತದ ಮೂಲೆ ಮೂಲೆಯಲ್ಲೂ ಭದ್ರವಾಗಿ ಬೇರೂರಿದೆ ಅಂದರೆ, ಅದಕ್ಕೆ ಕಾರಣ ಇಲ್ಲಿನ ಶಿಸ್ತು ಮತ್ತು ಕಾರ್ಯಕರ್ತರ ಸೈನ್ಯ. ಯಾರೋ ಒಬ್ಬ ನಾಯಕ ಬಂದು ಇಡೀ ಪಕ್ಷವನ್ನ ನಡೆಸೋ ಪದ್ಧತಿ ಇಲ್ಲಿಲ್ಲ. ಬದಲಿಗೆ ಕೆಳಗಿನ ಹಂತದ ಕಾರ್ಯಕರ್ತನೂ ಕೂಡ ಅತ್ಯುನ್ನತ ಸ್ಥಾನಕ್ಕೆ ಏರಬಲ್ಲ ವ್ಯವಸ್ಥೆ ಇದೆ. ಯಾವುದೇ ಗದ್ದಲವಿಲ್ಲದೆ, ವಿವಾದಗಳಿಲ್ಲದೆ ಸದ್ದಿಲ್ಲದಂತೆ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಆ ಪಕ್ಷದ ಸ್ಪೆಷಾಲಿಟಿ. ಅದೇ ಭಾರತೀಯ ಜನತಾ ಪಕ್ಷ.  ಈಗ ಆ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆಯಲ್ಲೂ ಕೂಡ ಅಂಥದ್ದೇ ಸಂಚಲನ ಸೃಷ್ಟಿಯಾಗಿದೆ. ಅದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ

14 ಕೋಟಿಗೂ ಹೆಚ್ಚಿನ ನೊಂದಾಯಿತ ಸದಸ್ಯರೊಂದಿಗೆ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆ ಹೊಂದಿರುವ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್‌ ನಬೀನ್‌ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಅವರು ಏಕಾಂಗಿ ಅಭ್ಯರ್ಥಿಯಾಗಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬಿದ್ದಿದೆ.

ಕೇಸರಿ ಪಾಳೆಯದಲ್ಲಿ ಈಗೀಗ ಒಂದು ಮಾತು ಕೇಳಿ ಬಂದಿತ್ತು. ವಿಪಕ್ಷ ನಾಯಕರೂ ಸಹ, ಅದನ್ನೇ ಹಲವು ಸಲ ಹೇಳಿದ್ರು. ಅದೇನು ಅಂದ್ರೆ, ಭಾರತೀಯ ಜನತಾ ಪಾರ್ಟಿಗೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ ನಡುವೆ, ಎಲ್ಲವೂ ಸರಿ ಇಲ್ಲ ಅಂತ. ಆ ಮಾತು ಮೊನ್ನೆ ತನಕ ಹಸಿಹಸಿಯಾಗಿಯೇ ಇತ್ತು. ಅದನ್ನ ನಿವಾರಿಸೋದಕ್ಕಂತಲೇ ಪದ್ಮಪಾಳಯ ನಿತಿನ್ ವ್ಯೂಹ ರಚಿಸಿದೆ ಅನ್ನೋದು, ಹಲವರ ತರ್ಕ. ಅದಕ್ಕೆ ಕಾರಣ ಏನು ಗೊತ್ತಾ?
 

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more