News Hour ಬಸವಕಲ್ಯಾಣದ ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹು ಪತ್ತೆ?

May 27, 2022, 11:47 PM IST

ಬೀದರ್‌ನಲ್ಲಿ ಇದೀಗ ಮಂದಿರ ಹಾಗೂ ದರ್ಗಾ ನಡುವಿನ ಹೋರಾಟ ಆರಂಭಗೊಂಡಿದೆ. ಕಾರಣ ಬಸವಣ್ಣನ ಅನುಭವ ಮಂಟಪದ ಮೇಲೆ ಪೀರ್ ಪಾಷಾ ದರ್ಗಾ ಕಟ್ಟಲಾಗಿದೆ. ಇದರ ಕುರುಹು ಪತ್ತೆಯಾಗಿದೆ. ಇದೀಗ ಸ್ವಾಮೀಜಿಗಳ ನೇೃತ್ವದಲ್ಲಿ ಜೂನ್ 12 ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ. ಇತ್ತ ಸಿದ್ದರಾಮಯ್ಯ ಮತ್ತೊಂದು ಚರ್ಚೆ ಹುಟ್ಟುಹಾಕಿದ್ದಾರೆ. ಆರ್‌ಎಸ್ಎಸ್ ಆರ್ಯರು, ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದವರು. ಆರ್‌ಎಸ್ಎಸ್‌ನವರು ಮೂಲ ಭಾರತೀಯರಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.