Hijab Row: ವಿವಾದದ ಸಮಯದಲ್ಲಿ ಮಹತ್ವ ಪಡೆದಿದೆ ಯುಪಿಯಲ್ಲಿ ಮೋದಿ ಕೊಟ್ಟ ಹೇಳಿಕೆ!

Feb 10, 2022, 2:34 PM IST

ಲಕ್ನೋ(ಫೆ.10): ಕರ್ನಾಟಕದಲ್ಲಿ ಹಿಜಾಬ್ ವರ್ಸಸ್‌ ಕೇಸರಿ ವಿವಾದಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಮೋದಿ ಮಾತನಾಡಿದ್ದಾರೆ. ಮುಸ್ಲಿಂ ಮಹಿಳೆಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಬೇರೆ ಮಾರ್ಗದ ಮೂಲಕ ಮುಸ್ಲಿಂ ಮಹಿಳೆಯರನ್ನು ಪ್ರಚೋದಿಸುತ್ತಿದ್ದಾರೆ ಎಂದಿದ್ದಾರೆ.

ವಿವಾದದ ಹೊತ್ತಿನಲ್ಲಿ ಮೋದಿ ಮಾತುಗಳು ಬಹಳಷ್ಟು ಮಹತ್ವ ಪಡೆದಿವೆ. ಮುಸ್ಲಿಂ ಹೆಣ್ಣು ಮಕ್ಕಳಲ್ಲಿ ಬಿಜೆಪಿ ವಿಕಾಸದ ಆಸೆಯನ್ನು ಹುಟ್ಟು ಹಾಕುತ್ತಿದೆ. ತ್ರಿವಳಿ ತಲಾಖ್ ನಿಷೇಧದ ಮೂಲಕ ಮುಸ್ಲಿಂ ಮಹಿಳೆಯರ ಸಬಲೀಕರಣ ಮಾಡಿದೆ, ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಹೊಗಳುತ್ತಿದ್ದಾರೆ. ಇದನ್ನು ತಡೆಯಲು ವಿಪಕ್ಷಗಳು ಈ ಷಡ್ಯಂತ್ರ ಹೆಣೆದಿವೆ ಎಂದೂ ದೂರಿದ್ದಾರೆ ಮೋದಿ.