ಆಸಾನಿ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಅಲೆಗಳ ನರ್ತನ ಆರಂಭವಾಗಿದೆ. ಹೀಗಿರುವಾಗ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥದ ಮಾದರಿಯೊಂದು ತೇಲಿ ಬಂದಿದ್ದು, ಇದನ್ನು ನೋಡಲು ಜನರು ಕರಾವಳಿ ಪ್ರದೇಶದತ್ತ ಧಾವಿಸುತ್ತಿದ್ದಾರೆ.
ಅಮರಾವತಿ(ಮೇ.11): ಮಂಗಳವಾರ ಸಂಜೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥದಂತಹ ಮಾದರಿಯು ಪತತ್ತೆಯಾಗಿದೆ. ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥೈಲ್ಯಾಂಡ್ನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಇದನ್ನು ದಡಕ್ಕೆ ಎಳೆದಿದ್ದಾರೆ.
ರಥವು ಆಗ್ನೇಯ ಏಷ್ಯಾದ ದೇಶಗಳ ಮಠದ ಆಕಾರವನ್ನು ಹೋಲುತ್ತದೆ. ಆಸಾನಿ ಚಂಡಮಾರುತದ ಪ್ರಭಾವದಿಂದ ರಥವು ಆಂಧ್ರಪ್ರದೇಶ ಕರಾವಳಿಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ಸ್ಥಳೀಯ ನಾವಿಕರ ಪ್ರಕಾರ, ಚಂಡಮಾರುತದ ಪ್ರಭಾವದಿಂದ ಉಂಟಾದ ಅಲೆಗಳ ಅಬ್ಬರದ ಕಾರಣ ರಥವು ಕರಾವಳಿಗೆ ಕೊಚ್ಚಿ ಬಂದಿರಬಹುದೆಂದಿದ್ದಾರೆ. ಚಿನ್ನದ ರಥದ ದರ್ಶನ ಪಡೆಯಲು ಅಕ್ಕಪಕ್ಕದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ದಡದತ್ತ ಆಗಮಿಸಲಾರಂಭಿಸಿದ್ದಾರೆ.
ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಮೊದಲ ಬಾರಿ ಒತ್ತಡ ರೂಪುಗೊಂಡಿದ್ದರಿಂದ, ಮ್ಯಾನ್ಮಾರ್, ಥೈಲ್ಯಾಂಡ್, ಮಲೇಷ್ಯಾ ಅಥವಾ ಇಂಡೋನೇಷ್ಯಾದಂತಹ ಅಂಡಮಾನ್ ಸಮುದ್ರಕ್ಕೆ ಹತ್ತಿರವಿರುವ ದೇಶದಿಂದ ಅಲೆಗಳ ರಭಸಕ್ಕೆ ರಥವನ್ನು ಬಂದಿರಬಹುದು. ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಅವರನ್ನು ಸಂಪರ್ಕಿಸಿದಾಗ, ಯಾವುದೇ ದೇಶದಿಂದ ಬಂದಿರದಿರಬಹುದು. "ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿದೆ ಮತ್ತು ಹೆಚ್ಚಿನ ಉಬ್ಬರವಿಳಿತದ ಚಟುವಟಿಕೆಯು ಶ್ರೀಕಾಕುಲಂ ತೀರಕ್ಕೆ ತಂದಿರಬಹುದು ಎಂಬುವುದು ನಮ್ಮ ಅಂದಾಜು" ಎಂದು ಅವರು ಹೇಳಿದರು.