Murder Sketch: ಸುಪಾರಿ ಕೊಲೆಗೆ ಇಳಿದ ರಾಜ್ಯ ರಾಜಕಾರಣ, ವಿಶ್ವನಾಥ್, ಗೋಪಾಲಕೃಷ್ಣ ಜಟಾಪಟಿ ಶುರು!

Dec 2, 2021, 12:12 AM IST

ರಾಜ್ಯದಲ್ಲಿ ಸುಪಾರಿ ಕೊಲೆ ಕೇಸ್ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕ ಎಸ್ ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ನೀಡುತ್ತಿರುವ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ವಿಡಿಯೋ ವೈರಲ್ ಆಗಿದೆ. ಈ ಕುರಿತು ದೂರು ನೀಡಿರುವ ವಿಶ್ವನಾಥ್ ತನಿಖೆಗೆ ಆಗ್ರಹಿಸಿದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕನಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಈ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.