ಲೈವ್ ವರದಿ ನಡುವೆ ಗಾಯಾಳು ನೆರವಿಗೆ ಧಾವಿಸಿದ ಏಷ್ಯಾನೆಟ್ ನ್ಯೂಸ್ ಪತ್ರಕರ್ತ!

Oct 9, 2020, 10:32 PM IST

ತಿರುವನತಪುರಂ(ಅ.09);  ಲೈವ್ ವರದಿ ನೀಡುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತಕ್ಕೆ ಪತ್ರಕರ್ತ ತಕ್ಷಣ ಸ್ಪಂದಿಸಿ ನೆರವ ನೀಡಿದ ಘಟನೆ ತಿರುವನಂತಪುರಂದಲ್ಲಿ ನಡೆದಿದೆ. ಏಷ್ಯಾನ್ಯೂಸ್ ಪತ್ರಕರ್ತ ಅಜಯ್ ಘೋಷ್, ಕೇರಳ CPIM ಸಭೆಯ ಲೈವ್ ವರದಿ ನೀಡುತ್ತಿದ್ದರು. ಮಳೆಯ ಕಾರಣ ಸನಿಹದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ತಕ್ಷಣವೇ CPIM ಸಭೆ ಲೈವ್ ಅರ್ಧಕ್ಕೆ ನಿಲ್ಲಿಸಿ ನೆರವಿಗೆ ಧಾವಿಸಿದ್ದಾರೆ. ಅಜಯ್ ಘೋಷ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.