ಶೃಂಗೇರಿಯ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು ಪೊಲೀಸರ ಗುಂಡಿಗೆ ಖಲ್ಲಾಸ್!

Oct 29, 2019, 4:20 PM IST

ಬೆಂಗಳೂರು (ಅ.29): ಕೇರಳ ಪೊಲೀಸರು ಪಾಲಕ್ಕಡ್‌ ಅರಣ್ಯ ಪ್ರದೇಶದಲ್ಲಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಅವರಲ್ಲಿ ಇಬ್ಬರು ಕರ್ನಾಟಕ ಮೂಲದ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು. ಪೊಲೀಸ್ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕನೊಬ್ಬ ಗಾಯಗೊಂಡಿದ್ದಾನೆ. 

ಪೊಲೀಸರ ಗುಂಡಿಗೆ ಬಲಿಯಾದವರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀಮತಿ ಹಾಗೂ ಮೂಡಿಗೆರೆಯ ಸುರೇಶ್ ಕೂಡಾ ಸೇರಿದ್ದಾರೆ. ಸುಮಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಅವರಿಬ್ಬರ ವಿರುದ್ಧ ಡಜನ್‌ಗಟ್ಟಲೆ ಕೇಸ್‌ಗಳು ದಾಖಲಾಗಿದ್ದುವು, ಮೂರು ರಾಜ್ಯಗಳ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.   

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: