ಸಮುದ್ರ ತಳದಲ್ಲಿ 22,000 ಕೆಜಿ ಬಂಗಾರ ಪತ್ತೆ; ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ?

ಸಮುದ್ರ ತಳದಲ್ಲಿ 22,000 ಕೆಜಿ ಬಂಗಾರ ಪತ್ತೆ; ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ?

Published : Jan 02, 2025, 05:39 PM IST

ಪೋರ್ಚುಗಲ್ ಸಮುದ್ರದಲ್ಲಿ 22,000 ಕೆ.ಜಿ ಚಿನ್ನ ಪತ್ತೆಯಾಗಿದ್ದು, 4 ಶತಮಾನಗಳ ಹಿಂದೆ ಮುಳುಗಿದ ಹಡಗುಗಳಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಇದೆಲ್ಲವನ್ನು ನೋಡಿದರೆ ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ ಎಂಬ ಅನುಮಾನ ಮೂಡುತ್ತಿದೆ.

ಕೆಜಿಎಫ್ ಸಿನಿಮಾದಲ್ಲಿ ಸಮುದ್ರ ಪಾಲಾಗಿತ್ತು ರಾಕಿ ಕಟ್ಟಿದ ಸ್ವರ್ಣ ಸಾಮ್ರಾಜ್ಯ. ರಾಕಿ ಭಾಯ್ ಚಿನ್ನದೊಂದಿಗೆ ಸಾಗರದಲ್ಲಿ ಸಮಾಧಿಯಾಗಿದ್ದ. ಅದು ರೀಲ್ ಕೆಜಿಎಫ್, ಇದು ರಿಯಲ್ ಕೆಜಿಎಫ್. ಆ ಸಮುದ್ರ ಗರ್ಭದಲ್ಲಿ ಪತ್ತೆಯಾಯ್ತು ಬರೋಬ್ಬರಿ 22,000 ಕೆ.ಜಿ ಬಂಗಾರ. 4 ಶತಮಾನಗಳ ಹಿಂದೆ, ಆ ಸಾಗರದಲ್ಲಿ ಮುಳುಗಿದ್ವು 8,500ಕ್ಕೂ ಅಧಿಕ ಹಡಗುಗಳು. ಈ ಪೈಕಿ ಜಲಸಮಾಧಿಯಾದ 250ಕ್ಕೂ ಅಧಿಕ ನೌಕೆಗಳಲ್ಲಿ ಟನ್‌ಗಟ್ಟಲೆ ಚಿನ್ನವಿತ್ತು. ಇದೀಗ ಚಿನ್ನದ ಗಣಿ ಕಡಲುಗಳ್ಳರ ಪಾಲಾಗುತ್ತಾ ಎಂಬ ಆತಂಕ ಮೂಡಿದೆ. 435 ವರ್ಷಗಳ ಹಿಂದೆ ಸಮಾಧಿಯಾದ ಸ್ವರ್ಣ ಸತ್ಯ ಈಗ ಸುನಾಮಿಯಂತೆ ಎದ್ದು ಬಂದಿದ್ದೇ ರೀಚಕವಾಗಿದೆ. ಇದೇ ಇವತ್ತಿನ ಸುವರ್ಣ ಫೋಕಸ್, ಕೆಜಿಎಫ್ ಚಾಪ್ಟರ್ 3.

ಅಷ್ಟಕ್ಕೂ ಪೋರ್ಚುಗಲ್‌ನ ಆ ಸಮುದ್ರದಾಳದಲ್ಲಿ 22 ಸಾವಿರ ಕೆ.ಜಿ ಚಿನ್ನ ಇದೆ ಅನ್ನೋದು ಗೊತ್ತಾಗಿದ್ದು ಹೇಗೆ.? ಸಾಗರಗರ್ಭಕ್ಕೆ ಹೋಗಿ ಅದನ್ನು ಪತ್ತೆ ಹಚ್ಚಿದ ಮಹಾನುಭಾವ ಯಾರು.? ಆತ ಬಿಚ್ಚಿಟ್ಟ ರಹಸ್ಯವನ್ನು ಕೇಳಿ ಪೋರ್ಚುಗಲ್ ಸರ್ಕಾರ ಬೆಚ್ಚಿ ಬಿದ್ದಿರೋದ್ಯಾಕೆ.? 16 ಸಾವಿರ ಕೋಟಿಗಳ ಈ ಚಿನ್ನದ ಮೇಲೆ ಬಿದ್ದಿರೋದು ಅದ್ಯಾರ ಕಳ್ಳಗಣ್ಣು.? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಸಾಗರ ಗರ್ಭದಿಂದ ಸಿಡಿದು ಬಂದಿದೆ ಆ ಸ್ವರ್ಣ ರಹಸ್ಯ. ಸಮುದ್ರದಾಳದಲ್ಲಿ 22 ಸಾವಿರ ಕೆ.ಜಿ ಚಿನ್ನ ಅನಾಥವಾಗಿ ಬಿದ್ದಿದೆ ಅನ್ನೋ ಸತ್ಯ, ಪೋರ್ಚುಗಲ್ ಸರ್ಕಾರದ ನಿದ್ದೆಗೆಡಿಸಿದೆ. ನೀರಿನೊಳಗಿನ ಆ ಚಿನ್ನಕ್ಕೆ ರಕ್ಷಣೆ ಕೊಡದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಪುರಾತತ್ವ ಶಾಸ್ತ್ರಜ್ಞ ಎಚ್ಚರಿಸಿದ್ದಾರೆ. ಅಷ್ಟಕ್ಕೂ ಆ ಸ್ವರ್ಣ ರಹಸ್ಯ ಪೋರ್ಚುಗಲ್ ಸರ್ಕಾರಕ್ಕೆ ತಲೆ ನೋವು ತಂದಿರೋದು ಯಾಕೆಎಂಬ ಪ್ರಶ್ನೆ ಮೂಡಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?