India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್‌

India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್‌

Published : Aug 02, 2022, 12:33 PM IST

 ಬ್ರಿಟೀಷರು, ನಿಜಾಮರು, ಭೂಮಾಲೀಕರ ವಿರುದ್ಧ ಹೋರಾಡಿ ಹುತಾತ್ಮರಾದ  ಹೈದರಾಬಾದ್ ಪ್ರಾಂತ್ಯದ ಗೊಂಡ ಬುಡಕಟ್ಟು ಸಮುದಾಯದ ನಾಯಕ ಕೊಮರಂ ಭೀಮ್ ಸಾಹಸಗಾಥೆ ಇಲ್ಲಿದೆ.

ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಬ್ರಿಟಿಷರು ಹಾಗೂ ಭೂಮಾಲೀಕರ ಶೋಷಣೆಯ ವಿರುದ್ಧ ಹೋರಾಡಿ ಹುತಾತ್ಮರಾದ ಆಂಧ್ರದ   ಆದಿವಾಸಿ ನಾಯಕ  ಕೊಮರಂ ಭೀಮ್‌ ಸಾಹಸಗಾಥೆ ಇಲ್ಲಿದೆ. ಜಲ್‌, ಜಂಗಲ್, ಜಮೀನ್ ತೆಲಂಗಾಣ, ಆಂಧ್ರದಲ್ಲಿ ಆದಿವಾಸಿ ಚಳುವಳಿಯ ಜನಪ್ರಿಯ ಘೋಷಣೆ. ಈ ಘೋಷಣೆಯನ್ನು ಮೊದಲು ಕೂಗಿದವರು ಕೊಮರಂ ಭೀಮ್. ನಿಜಾಮರು ಆಳುತ್ತಿದ್ದ ಹೈದರಾಬಾದ್ ಪ್ರಾಂತ್ಯದ ಗೊಂಡ ಬುಡಕಟ್ಟು ಸಮುದಾಯದ ನಾಯಕ ಇವರು. ಬ್ರಿಟೀಷರು, ನಿಜಾಮರು, ಭೂಮಾಲೀಕರ ವಿರುದ್ಧ ಹೋರಾಡಿ ಹುತಾತ್ಮರಾದ ನಾಯಕ. ಉತ್ತರ ಹೈದರಾಬಾದ್ ನಲ್ಲಿರುವ  ಅಸಿಫಾಬಾದ್ ನ ಸಂಕೀಪಲ್ಲಿಯಲ್ಲಿ ಕೊಮರಂ ಭೀಮ್ 1901 ರಲ್ಲಿ ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದರು. ಬ್ರಿಟೀಷರ ವಿರುದ್ಧ ಹೋರಾಡಿದ   ಬುಡಕಟ್ಟು ಜನಾಂಗದ ನಾಯಕ 1940ರಲ್ಲಿ ಹುತಾತ್ಮರಾದರು.

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
22:33India@75: ಶ್ರೀ ಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಯ ಡಾ. ಎಲ್‌ ಎಚ್‌ ಮಂಜನಾಥ್‌ ವಿಶೇಷ ಸಂದರ್ಶನ
08:01Inchageri Math: 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಸಿಕ್ತು ಗೌರವ
22:46ನವಭಾರತ ನಿರ್ಮಾಣಕ್ಕೆ ನವಚೈತನ್ಯ ತುಂಬುತ್ತಿರುವ ಐಎಚ್‌ಎಕ್ಸ್‌ಗೆ ಆಜಾದಿ ಕಾ ಅಮೃತ್‌ ಮಹೋತ್ಸವ ಯಾತ್ರೆ
19:57ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ಗೆ ಅಮೃತ ಮಹೋತ್ಸವ ಯಾತ್ರೆ
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
22:26ಭಾರತದ ಪ್ರತಿಷ್ಠಿತ ಸಂಸ್ಥೆ IISc ಕಡೆ ಅಮೃತ ಮಹೋತ್ಸವ ಯಾತ್ರೆ
24:09ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ
Read more