India@75: ಕಾನ್ಪುರದ ಸಿಂಹ ಖ್ಯಾತಿಯ ಪತ್ರಕರ್ತ ಗಣೇಶ ಶಂಕರ ವಿದ್ಯಾರ್ಥಿ ಸಾಹಸಗಾಥೆ

Aug 9, 2022, 11:09 AM IST

ಬೆಂಗಳೂರು(ಆ.09): ಪತ್ರಕರ್ತ ಗಣೇಶ್‌ ಶಂಕರ ವಿದ್ಯಾರ್ಥಿ ಅವರು ಕಾನ್ಪುರದ ಸಿಂಹ ಎಂದೇ ಪ್ರಖ್ಯಾತರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಣೇಶ್‌ ಶಂಕರ ವಿದ್ಯಾರ್ಥಿ ಹಿಂದು-ಮುಸ್ಲಿಂರ ಒಗ್ಗಟ್ಟಿಗಾಗಿ ಹುತಾತ್ಮರಾದವರು. ಸ್ವಾತಂತ್ರ ಹೋರಾಟದ ಮುಖವಾಣಿಯಾಗಿ ಶೋಷಿತರ ಧ್ವನಿಯಾಗಿ ಬ್ರಿಟಿಷರ ವಿರುದ್ಧ ಕೆಂಡದಂತ ಲೇಖನಿಗಳಿಗೆ ಪ್ರಸಿದ್ಧವಾಗಿದ್ದರು. 1916 ರಲ್ಲಿ ವಿದ್ಯಾರ್ಥಿ ಗಾಂಧೀಜಿ ಅವರನ್ನ ಭೇಟಿಯಾದ ಬಳಿಕ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾದರು. ಗಣೇಶ್‌ ಶಂಕರ ವಿದ್ಯಾರ್ಥಿ ಅವರ ಸ್ವಾತಂತ್ರ ಹೋರಾಟದ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಂದಿನ ಸುದ್ದಿಯಲ್ಲಿದೆ.