75ನೇ ಸ್ವಾತಂತ್ರ್ಯ ದಿನಕ್ಕೆ 75 ಕಿ.ಮೀಟರ್ ನಡಿಗೆ: ನಡಹಳ್ಳಿ ನೇತೃತ್ವದಲ್ಲಿ ಹೊಸ ಇತಿಹಾಸ ಸೃಷ್ಟಿ..!

Aug 8, 2022, 10:23 PM IST

ವಿಜಯಪುರ, (ಆಗಸ್ಟ್.08): INDIA @75 ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿಯವರಿಂದ ಯುವಜನ ಸಂಕಲ್ಪ ನಡಿಗೆ ನಡೆಯಿತು.

INDIA @75:4ನೇ ದಿನಕ್ಕೆ ಕಾಲಿಟ್ಟ AS ಪಾಟೀಲ್ ನಡಹಳ್ಳಿಯವರ ಯುವಜನ ಸಂಕಲ್ಪ ನಡಿಗೆ

75ನೇ ಸ್ವಾತಂತ್ರ್ಯ ದಿನಕ್ಕೆ 75 ಕಿ.ಮೀಟರ್ ನಡಿಗೆ ಆರಂಭಿಸಿದ್ದು,  ಯುವಜನ ಸಂಕಲ್ಪ ನಡಿಗೆ ಇಂದು(ಸೋಮವಾರ) 4ನೇ ದಿನಕ್ಕೆ ಕಾಲಿಟ್ಟಿದೆ.  ಮುದ್ದೇಬಿಹಾಳ ಪಟ್ಟಣದಲ್ಲಿ ಸಾವಿರ ಯುವಕರು, ಶಾಲಾ ವಿದ್ಯಾರ್ಥಿಗಳು ನಡಿಗೆಯಲ್ಲಿ ಭಾಗಿಯಾಗಿದ್ರು.