ಕೋವಿಡ್ ವಿರುದ್ಧ ಹೋರಾಟ: ಕಿಡ್ನಿ ಸಮಸ್ಯೆ ಇದ್ದವರು ಏನು ಮಾಡಬೇಕು..?

Jun 12, 2021, 3:18 PM IST

ಬೆಂಗಳೂರು (ಜೂ. 12): ಕೊರೋನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಕಿಡ್ನಿ ರೋಗಿಗಳಿಗೆ ಕೊರೋನಾ ಯಾವ ರೀತಿ ಬಾಧಿಸುತ್ತದೆ..? ಕಿಡ್ನಿ ಸಮಸ್ಯೆ ಇರುವವರು ಯಾವ ರೀತಿ ಮುಂಜಾಗ್ರತೆ ವಹಿಸಬೇಕು..? ಇವೆಲ್ಲದರ ಬಗ್ಗೆ ಖ್ಯಾತ ಮೂತ್ರಪಿಂಡ ತಜ್ಞರಾದ ಡಾ. ಸುದರ್ಶನ್ ಬಲ್ಲಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.