ದಸರಾದಲ್ಲಿ ಪ್ರಾಣೇಶ್ ಕಾಮಿಡಿ ಪಂಚ್.. ನಕ್ಕಾಂವ ಗೆದ್ದಾಂವ!

Oct 14, 2021, 7:48 PM IST

ಎಲ್ಲ ನೀವುಗಳಿಗೆ ನಗುವೆ ಟಾನಿಕ್.  ಹಬ್ಬದ (Dasara) ಸಂದರ್ಭದಲ್ಲಿ ನಗುವಿನ ಮಂತ್ರ.   ಗಂಗಾವತಿ ಪ್ರಾಣೇಶ್ (Gangavathi Pranesh) ನೀಡುವ ಒಂದೊಂದು ಪಂಚ್ ಭಿನ್ನ... ವಿಭಿನ್ನ.. ಉತ್ತರ ಕರ್ನಾಟಕ(North Karnataka)  ಶೈಲಿಯ ಮಾತುಗಳಲ್ಲೇ  ಅವರ ವಿವರಣೆ ಕೇಳುತ್ತಲೇ ಇರಬೇಕು ಎನಿಸುತ್ತದೆ.

'ಬೀಗಬೇಡ' ಪ್ರಾಣೇಶ್ ಕೊಟ್ಟ ಪಂಚ್ ಸಖತ್ತಾಗಿದೆ

ಸರಳ ವಿಚಾರವನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಾಣೇಶ್  ಪಂಚ್ ನಲ್ಲಿ ಸಂದೇಶವೂ ಅಡಕವಾಗಿರುತ್ತದೆ. ಗಂಗಾವತಿ ಪ್ರಾಣೇಶ್ ಹೇಳಿದ್ದ ಬೀಗಬೇಡ ಪದ ಸೋಶಿಯಲ್ ಮೀಡಿಯಾದಲ್ಲಿ(Social Media) ಹೊಸ ಟ್ರೆಂಡ್ ಸೃಷ್ಟಿಸಿ ಇಂದಿಗೂ ಮುಂದುವರಿಯುತ್ತಲೇ ಇದೆ ಅಂದರೆ ಅವರ ಅಭಿಮಾನಿಗಳು ಯಾವ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಲೆಕ್ಕ ಸಿಗುತ್ತದೆ.