ಸಮುದ್ರಗಳ ಸೃಷ್ಟಿ ಬಗ್ಗೆ ಭಾಗವತದಲ್ಲಿ ಏನಿದೆ ಉಲ್ಲೇಖ.? ತಿಳಿಯೋಣ ಬನ್ನಿ..!

Dec 27, 2020, 4:28 PM IST

ಭಗವಂತನ ಬಗ್ಗೆ ಅಪಾರ ಭಕ್ತಿ ಇದ್ದರೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದಿದೆ ಭಾಗವತ. ಇದಕ್ಕೆ ಒಂದು ಉದಾಹರಣೆ ಹೀಗಿದೆ. ಬ್ರಹ್ಮನ ಮಾತಿಗೆ ಒಪ್ಪಿ ಪ್ರಿಯರ್ವತ ಮಹಾರಾಜ ವಿಶ್ವಕರ್ಮನ ಮಗಳು ಬಹಿಷ್ಮತಿಯನ್ನು ಮದುವೆಯಾಗ್ತಾನೆ. ಸೂರ್ಯದೇವ ಮೇರು ಪರ್ವತಕ್ಕೆ ಪ್ರದಕ್ಷಿಣೆ ಬಂದಾಗ ಭೂಮಿಯ ಅರ್ಧ ಭಾಗ ಕತ್ತಲಾಗುತ್ತದೆ. ಪ್ರಿಯರ್ವತ ತಾನೇ ಸೂರ್ಯನಾಗಿ ಬೆಳಕು ಕೊಡುತ್ತಿದ್ದ. ಆಗ ಅವನ ರಥದ ಚಕ್ರದಿಂದ ನೆಲದಲ್ಲಿ ಕಂದಕಗಳಾದವು. ಅವುಗಳೇ ಮುಂದೆ ಸಮುದ್ರಗಳಾದವು ಎಂದು ಭಾಗವತ ಹೇಳುತ್ತದೆ. ಹೀಗೆ ಕಥೆ ಸಾಗುತ್ತಾ ಹೋಗುತ್ತದೆ. 

ಸ್ನೇಹದ ಮಹತ್ವವನ್ನು ಈ ಕಥೆ ಬಹಳ ಸೊಗಸಾಗಿ ಹೇಳಿದೆ, ಕೇಳೋಣ ಬನ್ನಿ!