ಶ್ರೀಹರಿ ದಶಾವತಾರ ಎತ್ತಲು, ಆದಿಶಕ್ತಿಯ ಪ್ರೇರಣೆಯೇ ಕಾರಣ.!

Apr 11, 2021, 11:04 AM IST

ತಾಯಿ ಆದಿಶಕ್ತಿ ಇಡೀ ಜಗತ್ತಿಗೆ ಬೆಳಕಾಗಿರುವವಳು, ಆಕೆಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಖಂಡಿತವಾಗಿಯೂ ಹರಸುತ್ತಾಳೆ. ಕಷ್ಟಗಳನ್ನು ದೂರ ಮಾಡುತ್ತಾಳೆ. ಆ ತಾಯಿಯನ್ನು ಆರಾಧನೆ ಮಾಡು ಎಂದು ಶ್ರೀಹರಿ, ಬ್ರಹ್ಮದೇವರಿಗೆ ಹೇಳುತ್ತಾರೆ. ಅದರಂತೆ ಬ್ರಹ್ಮದೇವ ಆದಿಶಕ್ತಿಯನ್ನು ಆರಾಧನೆ ಮಾಡುತ್ತಾರೆ. ದಶಾವತಾರ ಎತ್ತಲು, ರಕ್ಕಸರ ಸಂಹಾರ ಮಾಡಲು ಆ ತಾಯಿಯೇ ಪ್ರೇರಣೆ ಎಂದು ಶ್ರೀಹರಿ ಹೇಳುತ್ತಾರೆ.  ಮಾನವರಿಗೆ ಮಾತ್ರವಲ್ಲ, ದೇವ ಸಂಕುಲಕ್ಕೆ ಕಷ್ಟಗಳು ಬಂದಾಗಲೂ ಆ ಭಗವತಿ ದೂರ ಮಾಡುತ್ತಾಳೆ ಎನ್ನುವುದಕ್ಕೆ ಇದು ಉದಾಹರಣೆ.