ಉಡುಪಿ ಕೃಷ್ಣ ಮಠದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಡೆಯುತ್ತೆ ಜಾಗರ ಪೂಜೆ..!

Oct 23, 2021, 9:43 AM IST

ಉಡುಪಿ (ಅ. 23): ಕೃಷ್ಣಮಠದಲ್ಲಿ ಉಷಾಕಾಲದಲ್ಲಿ ಪಶ್ಚಿಮ ಜಾಗರ ಪೂಜೆ ಎಂಬ ವಿಶೇಷ ಪೂಜೆ ನಡೆಯುತ್ತದೆ. ವಾಸುದೇವ ಕೃಷ್ಣನನ್ನು ನಿದ್ದೆಯಿಂದ ಎಬ್ಬಿಸುವ ಅಪರೂಪದ ಪೂಜೆ. ಚಾತುರ್ಮಾಸ್ಯದಲ್ಲಿ ದೇವರು ಯೋಗ ನಿದ್ದೆಯಲ್ಲಿರುತ್ತಾನೆ ಎಂಬ ನಂಬಿಕೆಯಿದೆ. ನಿದ್ದೆಯಲ್ಲಿರುವ ಪರಮಾತ್ಮನನ್ನು ಎಬ್ಬಿಸಲು ವಿಶೇಷ ಪೂಜೆ ಮಾಡಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳುವುದೇ ವಿಶೇಷವಾದ ಅನುಭೂತಿ ನೀಡುತ್ತದೆ. 

ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿದರೆ ಸಂಪತ್ತು, ಸಂತೋಷ ತುಂಬುತ್ತದೆ