Yadagir: ಹಿಂದೂಗಳಿಗೆ ಮೌನೇಶ್ವರ, ಮುಸ್ಲಿಮರಿಗೆ ಮೌನುದ್ಧಿನ್; ಐಕ್ಯತೆಯ ಕ್ಷೇತ್ರ ತಿಂಥಣಿ

Yadagir: ಹಿಂದೂಗಳಿಗೆ ಮೌನೇಶ್ವರ, ಮುಸ್ಲಿಮರಿಗೆ ಮೌನುದ್ಧಿನ್; ಐಕ್ಯತೆಯ ಕ್ಷೇತ್ರ ತಿಂಥಣಿ

Published : Feb 19, 2022, 04:42 PM ISTUpdated : Feb 19, 2022, 05:15 PM IST

ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲಿನ ಸಂಘರ್ಷ ವಿವಾದ ಭುಗಿಲೆದ್ದಿದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯಲ್ಲಿ ಭಾವೈಕ್ಯತೆಯ ಭಾವ ತುಂಬಿದೆ. ಹಿಂದೂ-ಮುಸ್ಲಿಂ ಜನಾಂಗದವರೆಲ್ಲಾ ಐಕ್ಯತೆ ಸಾರುವ ಪುಣ್ಯ ಕ್ಷೇತ್ರ ಈ ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಹೊಂದಿರುವ ತಿಂಥಣಿ ಮೌನೇಶ್ವರ ದೇವಾಲಯ. 
 

ಯಾದಗಿರಿ (ಫೆ. 19): ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲಿನ ಸಂಘರ್ಷ ವಿವಾದ ಭುಗಿಲೆದ್ದಿದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯಲ್ಲಿ ಭಾವೈಕ್ಯತೆಯ ಭಾವ ತುಂಬಿದೆ. ಹಿಂದೂ-ಮುಸ್ಲಿಂ ಜನಾಂಗದವರೆಲ್ಲಾ ಐಕ್ಯತೆ ಸಾರುವ ಪುಣ್ಯ ಕ್ಷೇತ್ರ ಈ ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಹೊಂದಿರುವ ತಿಂಥಣಿ ಮೌನೇಶ್ವರ ದೇವಾಲಯ. 

 ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿರುವ ತಿಂಥಣಿ ಮೌನೇಶ್ವರ ಹಿಂದೂ-ಮುಸ್ಲಿಮರ ಆರಾಧ್ಯ ಧೈವ. ಹಿಂದೂಗಳು ಮೌನೇಶ್ವರ ಎಂದು ಪೂಜಿಸಿದ್ರೆ, ಮಸಲ್ಮಾನರು ಮೌನುದ್ಧಿನ್ ಎಂದು ಆರಾಧಿಸುತ್ತಾರೆ. ಎರಡು ಧರ್ಮದವರು ಜನರು ಅದ್ದೂರಿಯಿಂದ ಆಚರಿಸುವ ಜಾತ್ರೆ ಈ ಮೌನೇಶ್ವರ ಜಾತ್ರೆ. ಕೃಷ್ಣಾ ನದಿ ತೀರದಲ್ಲಿರುವ ತಿಂಥಣಿ ಮೌನೇಶ್ವರ ದೇವಾಲಯ ಅಪಾರ ಭಕ್ತರನ್ನು ಹೊಂದಿದೆ. 

ತಿಂಥಣಿ ಮೌನೇಶ್ವರ ಕ್ಷೇತ್ರದಲ್ಲಿ ಕೈಲಾಸ ಕಟ್ಟೆ ವಿಶೇಷತೆಯನ್ನು ಹೊಂದಿದೆ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಸೇರಿದಂತೆ ಬೇರೆ ಬೇರೆ ರಾಜ್ಯದ ನೂರಾರು ಸಾಧು-ಸಂತರ ಈ ಕೈಲಾಸ ಕಟ್ಟೆಗೆ ಬಂದು ಗಾಂಜಾ ಸೇವನೆ ಮಾಡುತ್ತಾರೆ. ಮೌನೇಶ್ವರನ ಭಕ್ತರು ಸಾಧು-ಸಂತರಿಗೆ ಗಾಂಜಾ, ಅನ್ನ ಸಂತರ್ಪಣೆ ಮಾಡಿ ಭಕ್ತಿಯನ್ನು ಮೆರೆಯುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಸಾಧು-ಸಂತರ ತವರೂರು ಇದ್ದಂತೆ. ಗಾಂಜಾ ನಶೆಯಲ್ಲಿ ತೆಲಾಡುವ ಸಾಧು-ಸಂತರು,ಗಾಂಜಾ ಸೇವನೆಯಿಂದ ಕೈಲಾಸ ಕಾಣುತ್ತಾರಂತೆ.

 ರಾಜ್ಯದಲ್ಲೆಡೆ ಹಿಜಾಬ್-ಕೇಸರಿ ಶಾಲಿನ ಗಲಾಟೆ, ಗದ್ದಲ ನಡೆಯುತ್ತಿದ್ರೆ ಯಾದಗಿರಿಯ ಈ ಪುಣ್ಯಕ್ಷೇತ್ರದಲ್ಲಿ ಸಾಮರಸ್ಯ, ಸಹೋದರತೆ, ಐಕ್ಯತೆ, ಭಾವೈಕತೆಯಿಂದ ಮೌನೇಶ್ವರ ಜಾತ್ರೆ ಆಚರಿಸುತ್ತಿದ್ದಾರೆ. ಇದು ರಾಜ್ಯದ ಎಲ್ಲರಿಗೂ ಮಾದರಿಯಾದ ವಿಶೇಷ ಜಾತ್ರೆಯಾಗಿದೆ.

 

24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?