ಮಹಾಲಯದಲ್ಲಿ ಮನೆಗೆ ಬರ್ತಾರೆ ಪೂರ್ವಜರು!

Sep 15, 2022, 2:19 PM IST

ಪಿತೃಪಕ್ಷದಲ್ಲಿ ಪೂರ್ವಜರು ತಮ್ಮ ಕುಟುಂಬಸ್ಥರನ್ನು ಕಾಣಲು ಧರೆಗೆ ಬರುತ್ತಾರೆ. ನಮಗೆ 15 ದಿನ ಎಂದರೆ ಅವರಿಗೆ ಅರ್ಧ ದಿನ.. ಈ ಸಂದರ್ಭದಲ್ಲಿ ಕುಟುಂಬಕ್ಕೆ ಅವರು ತುಂಬು ಹೃದಯದಿಂದ ಹರಸಬೇಕು. ಅದನ್ನು ಪಡೆಯಲು ಅವರನ್ನು ಬಹಳ ಶ್ರದ್ಧೆಯಿಂದ ನೆನೆಸಿಕೊಳ್ಳಬೇಕು. ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ.. ಹೀಗಾಗಿ ಯಥಾಸಾಮರ್ಥ್ಯ ಪೂರ್ವಜರಿಗೆ ಕೃತಜ್ಞತೆ ಅರ್ಪಿಸಬೇಕು ಎನ್ನುತ್ತಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..