‘ನಿಖಿಲ್ ಎಲ್ಲಿದ್ದಿಯಪ್ಪಾ’ಗೆ ವಿಶ್ ಮಾಡಿದ ಯಶ್

May 15, 2019, 5:05 PM IST

ಲೋಕಸಭಾ ಚುನಾವಣೆ ಬಳಿಕ ಪ್ರಥಮ ಬಾರಿಗೆ ಮಂಡ್ಯಕ್ಕೆ ರಾಕಿಭಾಯ್ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯದ ಅಭಿಮಾನಿಯೊಬ್ಬರ ಗೃಹಪ್ರವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ಚುನಾವಣೆ ಬಗ್ಗೆ ಮಾತನಾಡುತ್ತಾ, ಸುಮಲತಾ ಚುನಾವಣೆಯಲ್ಲಿ ಗೆಲ್ತಾರೆ.  ಒಳ್ಳೆಯ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದ್ರೆ ಕೊಚ್ಚಿಕೊಂಡಂತಾಗುತ್ತೆ.  ಮಂಡ್ಯ ಫಲಿತಾಂಶವನ್ನ ನಿರ್ದಿಷ್ಟವಾಗಿ ಹೇಳೋಕಾಗ್ತಿಲ್ಲ ಎಂದಿದ್ದಾರೆ. 

ನಿಖಿಲ್ ಎಲ್ಲಿದ್ದಿಯಪ್ಪಾ? ವಿಚಾರವಾಗಿ ಪ್ರಶ್ನಿಸಿದಾಗ ಗುಡ್ ಲಕ್. ಒಳ್ಳೆದಾಗಲಿ ಎಂದು ವಿಶ್ ಮಾಡಿದ್ದಾರೆ.