ಮೊದಲು ಕಲಿತದ್ದೇ ತಮಿಳು.. ರಶ್ಮಿಕಾ ಮಂದಣ್ಣ ಭಾಷಾಪ್ರೇಮಕ್ಕೆ ಬಹುಪರಾಕ್ ಹೇಳಲ್ವ? ಲೆಕ್ಕಾಚಾರ ಕರೆಕ್ಟ್‌ ..!

ಮೊದಲು ಕಲಿತದ್ದೇ ತಮಿಳು.. ರಶ್ಮಿಕಾ ಮಂದಣ್ಣ ಭಾಷಾಪ್ರೇಮಕ್ಕೆ ಬಹುಪರಾಕ್ ಹೇಳಲ್ವ? ಲೆಕ್ಕಾಚಾರ ಕರೆಕ್ಟ್‌ ..!

Published : Jun 11, 2025, 08:00 PM IST

‘ನಾವು ಕುಬೇರ ಚಿತ್ರದ ಪ್ರಮೋಷನ್​ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಇವೇಂಟ್ ದಿನ ಸಾಕಷ್ಟು ನಕ್ಕಿದ್ದೇನೆ. ‘ನನ್ನ ಬಾಲ್ಯ ಚೆನ್ನೈನಲ್ಲೇ ಕಳೆದಿದ್ದೇನೆ. 

ಕಿರಿಕ್ ಬ್ಯೂಟಿ ರಶ್ಮಿಕಾ ಬೆಳೆದ ಎತ್ತರ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ರಶ್ಮಿಕಾ ಈ ಪರಿಯ ಬೆಳವಣಿಗೆ ಹಿಂದೆ ಅದೃಷ್ಟ, ಪ್ರತಿಭೆ ಜೊತೆಗೆ ಆಕೆಯ ಚಾಲಾಕಿತನವೂ ಕಾರಣ ಅಂದ್ರೆ ತಪ್ಪಾಗಲ್ಲ. ರಶ್ ಚಾಲಾಕಿ ಚೆಲುವೆ ಅನ್ನೋದನ್ನ ಪ್ರೂವ್ ಮಾಡೋವಂಥಾ ಮತ್ತೊಂದು ಘಟನೆ ಈಗ ಚೆನ್ನೈನಲ್ಲಿ ನಡೆದಿದೆ.

ಯೆಸ್ ನಮ್ಮ ಕಿರಿಕ್ ಬ್ಯೂಟಿ ರಶ್ಮಿಕಾ ಅದ್ಯಾಪರಿಯ ಚಾಲಾಕಿ ಚೆಲುವೆ ಅನ್ನೋದನ್ನ ಹೇಳಲೇಬೇಕಿಲ್ಲ. ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ರಶ್ ಹೇಗೆ ಅವಕಾಶಗಳನ್ನ ಬಳಸಿಕೊಂಡು ಮೇಲೆ ಬಂದಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅಂತೆಯೇ ಈ ಕೂರ್ಗಿ ಚೆಲುವೆ ಈಗ ಇಡೀ ಇಂಡಿಯಾದಲ್ಲೇ ನಂ.1 ನಟಿಮಣಿ.

ರಶ್ಮಿಕಾ ಎಲ್ಲೇ ಹೋದರೂ ನಾನು ಇದೇ ಊರವಳು ಅಂದುಬಿಡ್ತಾರೆ. ಈ ಹಿಂದೆ ಸಿಕಂದರ್ ಸಿನಿಮಾದ ಪ್ರಮೋಷನ್​ಗೆ  ಹೈದ್ರಾಬಾದ್​ಗೆ ಬಂದಾಗ, ನಾನು ತೆಲುಗು ಅಮ್ಮಾಯಿ. ನಾನ್ ನಿಮ್ಮವಳೇ ಕಣ್ರೀ ಅಂದಿದ್ಳು ರಶ್ಮಿಕಾ.

ರಶ್ಮಿಕಾಳ ಈ ಹೇಳಿಕೆ ವಿರುದ್ದ ಕನ್ನಡ ಸಂಘಟನೆಗಳು ಕೆಂಡಾಮಂಡಲ ಆಗಿದ್ವು. ಸಿನಿಮಾ ಪ್ರಚಾರಕ್ಕಾಗಿ ಪಕ್ಕದೂರನ್ನ ನನ್ನೂರು ಅನ್ನೋ ಈ ನಟಿ ಅದೆಂಥಾ ಘಾಟಿ ಅಂತ ಜನ ಟ್ರೋಲ್ ಮಾಡಿದ್ರು. ಆದ್ರೆ ರಶ್ಮಿಕಾ ಟ್ರೋಲ್​ಗಳಿಗೆಲ್ಲಾ ತಲೆಕೆಡಿಸಿಕೊಳ್ಳೋ ಬೆಡಗಿನೇ ಅಲ್ಲ. ಅಂತೆಯೇ ಸದ್ಯ ನಾನು ತಮಿಳ್ ಪೆಣ್ ಅಂತಂದು ಕಣ್​​ಮಿಟುಕಿಸಿದ್ದಾರೆ ರಶ್ಮಿಕಾ.

ಸದ್ಯ ರಶ್ಮಿಕಾ ನಟನೆಯ ಕುಬೇರ ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಧನುಷ್, ನಾಗಾರ್ಜುನ್ ನಟಿಸಿರೋ ಈ ಚಿತ್ರ ಪ್ಯಾನ್ ಇಂಡಿಯಾ ಮೂವಿಯಾದ್ರೂ ಮೂಲ ತಮಿಳು ಸಿನಿಮಾ. ಸೋ ಮೊದಲು ಚೆನ್ನೈನಲ್ಲಿ ಸಿನಿಮಾದ ಪ್ರಮೋಷನ್ ಶುರುವಾಗಿದೆ. ಪ್ರಮೋಷನ್​ಗೆ ಬಂದಿರೋ ರಶ್ಮಿಕಾ ಒಂದಿಷ್ಟು ಫೋಟೋಸ್ ಶೇರ್ ಮಾಡಿ ತನ್ನ ತಮಿಳು ಪ್ರೇಮದ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

‘ನಾವು ಕುಬೇರ ಚಿತ್ರದ ಪ್ರಮೋಷನ್​ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಇವೇಂಟ್ ದಿನ ಸಾಕಷ್ಟು ನಕ್ಕಿದ್ದೇನೆ. ‘ನನ್ನ ಬಾಲ್ಯ ಚೆನ್ನೈನಲ್ಲೇ ಕಳೆದಿದ್ದೇನೆ. ಅಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವು ಚೆನ್ನೈನಲ್ಲಿ ವಾಸಿಸುತ್ತಿದ್ದೆವು. ನಾನು ರಸ್ಕಿನ್ ಎಂಬ ಶಾಲೆಯಲ್ಲಿ ಓದಿದೆ ಮತ್ತು ಆ ಶಾಲೆ ಇನ್ನೂ ಇದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಅದರ ನಂತರ ನಾವು ಕೂರ್ಗ್‌ಗೆ ಸ್ಥಳಾಂತರಗೊಂಡೆವು. ನಾನು ಕಲಿತ ಮೊದಲ ಭಾಷೆ ತಮಿಳು’ ಎಂದಿದ್ದಾರೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
Read more