ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?

ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?

Published : Oct 15, 2025, 01:08 PM IST

ಕುತೂಹಲಕರ ಘಟ್ಟದಲ್ಲಿ ಕರ್ಣ ಧಾರಾವಾಹಿ.. ಪ್ರಾಣ ಪ್ರೇಮಿಗಳ ಮದುವೆಗೆ ವಿಘ್ನ? ನಿತ್ಯಾ ಜೊತೆ ಕರ್ಣನಿಗೆ ಒತ್ತಾಯದ ಮದುವೆನಾ? ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ..! ಆದರೇನು ಮಾಡೋದು? ಮುಂದಿನ ಕಥೆ ಏನಾಗುತ್ತೋ..!

ಜೀ ಕನ್ನಡ ವಾಹಿನಿಯಲ್ಲಿ  ಮೂಡಿಬರುವ ಕರ್ಣ (Karna Serial) ಸೀರಿಯಲ್​ ಕಥೆ ರೋಚಕ ಹಂತಕ್ಕೆ ತಲುಪಿದೆ. ಸದ್ಯ ಕರ್ಣನ ಮದುವೆ ಸನ್ನಿವೇಶ ನಡೀತಾ ಇದ್ದು, ಕರ್ಣ ನಿಧಿನಾ ಮದುವೆಯಾಗ್ತಾನೋ..? ನಿತ್ಯಾಳನ್ನ ಮದುವೆಯಾಗ್ತಾನೋ..? ಅಂತ ವೀಕ್ಷಕರು ಕಣ್ಣು ಮಿಟುಕಿಸದೇ ನೋಡ್ತಾ ಇದ್ದಾರೆ. ಕರ್ಣನ ಈ ಟ್ರಯಾಂಗಲ್ ಪ್ರೇಮ್​ಕಹಾನಿ ಇಡೀ ಕರುನಾಡ ವೀಕ್ಷಕರ ಕುತೂಹಲ ಕೆರಳಿಸಿದೆ.

ಕರ್ಣ.. ಕನ್ನಡ ಕಿರುತೆರೆ ವೀಕ್ಷಕರ ಮನಸು ಗೆದ್ದಿರೋ ಧಾರಾವಾಹಿ. ಸದ್ಯ ಕರ್ಣ ಧಾರಾವಾಹಿಯಲ್ಲಿ ಕಥಾನಾಯಕ ಕರ್ಣನ ಮದುವೆ ದೃಶ್ಯಾವಳಿಗಳು ನಡೀತಾ ಇವೆ. ಅದ್ಧೂರಿ ಸೆಟ್​ನಲ್ಲಿ ಚಿತ್ರೀಕರಣ ನಡೀತಾ ಇದ್ದು ಸೆಟ್​ ತುಂಬಾ ಕಲಾವಿದರ ಕಲರವ ಜೋರಾಗಿದೆ.

ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ. ಆದ್ರೆ ಮನೆಯವರ ಒತ್ತಾಯಕ್ಕೆ ಮಣಿದು ನಿತ್ಯಾಳನ್ನ ಕರ್ಣ ಮದುವೆ ಆಗಿಬಿಡ್ತಾನಾ,.? ಇಂಥದ್ದೊಂದು ರೋಚಕ ತಿರುವಿಗೆ ಕರ್ಣ ಧಾರಾವಾಹಿ ಬಂದು ತಲುಪಿದೆ.

ಕರ್ಣ-ನಿಧಿ-ನಿತ್ಯಾರ ನಡುವಿನ ಈ ಟ್ರಯಾಂಗಲ್ ಲವ್ ಸ್ಟೋರಿಲಿ ಏನು ಟ್ವಿಸ್ಟ್ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಎದುರು ನೋಡ್ತಾ ಇದ್ದಾರೆ. ಕರ್ಣನ್ ಲವ್ ಸ್ಟೋರಿ ಮುಂದೇನಾಗುತ್ತೆ ಅಂತ ಗೊತ್ತಾಗಬೇಕಂದ್ರೆ ತಪ್ಪದೇ ಮುಂದಿನ ಎಪಿಸೋಡ್ ನೋಡಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
06:51BBK 12: ಎಲ್ಲಿಗೋ ವೈರಿಂಗ್​, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
21:30BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
04:21ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ!
07:10ಕಾಪಾಡು ಚಾಮುಂಡಿ..! ಶಕ್ತಿ ದೇವತೆ ಮೊರೆಹೋದ ಕಿಚ್ಚ ಸುದೀಪ್‌, ವಿಜಯಲಕ್ಷ್ಮೀ ದರ್ಶನ್!
Read more