Aug 8, 2019, 12:32 PM IST
ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಜನರು ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ಉತ್ತರ ಕರ್ನಾಟಕದ ಜನರ ಸಹಾಯಕ್ಕೆ ಕಿಚ್ಚ ಸುದೀಪ್ ನಿಂತಿದ್ದಾರೆ. ಉತ್ತರ ಕರ್ನಾಟಕಕ್ಕೆ ಸಹಾಯ ಮಾಡೋಣ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ನೆರೆ ಪೀಡಿತ ಪ್ರದೇಶದ ಅಕ್ಕ ಪಕ್ಕದಲ್ಲಿರುವ ನನ್ನ ಸ್ನೇಹಿತರು ಕೂಡಲೇ ಸ್ಥಳಗಳಿಗೆ ಧಾವಿಸಿ ನೆರವು ನೀಡಿ. ಅಲ್ಲಿ ಅಗತ್ಯವಾಗಿ ಬೇಕಾಗಿರೋದು ಏನು ಅನ್ನೋದನ್ನ ತಕ್ಷಣ ತಿಳಿಸಿ ಎಂದು ಸುದೀಪ್ ವಿನಂತಿಸಿಕೊಂಡಿದ್ದಾರೆ.