ವಿಜಯಪುರದಲ್ಲಿ ರೌಡಿಗಳ ಪರೇಡ್:  ಧರ್ಮರಾಜ್‌ ಚೇಲಾಗಳ ಚಳಿ ಬಿಡಿಸಿದ ಎಸ್ಪಿ

ವಿಜಯಪುರದಲ್ಲಿ ರೌಡಿಗಳ ಪರೇಡ್: ಧರ್ಮರಾಜ್‌ ಚೇಲಾಗಳ ಚಳಿ ಬಿಡಿಸಿದ ಎಸ್ಪಿ

Published : Jun 26, 2022, 02:05 PM ISTUpdated : Jun 26, 2022, 04:14 PM IST

ಭೀಮಾ ತೀರದ ಹಂತಕರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಶಾಂತಿ ಕಾಪಾಡಲು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಡಿಎಂಸಿ ಹೆಸರು ಹೇಳಿದ ಹುಡುಗರಿಗೆ ಎಸ್‌ಪಿ ಆನಂದ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. 

ವಿಜಯಪುರ (ಜೂ. 26): ಭೀಮಾ ತೀರದ (Bhimatheera)  ಹಂತಕರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಶಾಂತಿ ಕಾಪಾಡಲು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಡಿಎಂಸಿ ಹೆಸರು ಹೇಳಿದ ಹುಡುಗರಿಗೆ ಎಸ್‌ಪಿ ಆನಂದ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. ಎಸ್‌ಪಿ ಹೊಡೆತಕ್ಕೆ ಧರ್ಮರಾಜ್ ಚಡಚಣ ಹುಡುಗರು ಥಂಡಾ ಹೊಡೆದಿದ್ದಾರೆ. 

ವಿಜಯಪುರ ಜಿಲ್ಲೆಯ ಭೀಮಾತೀರ ಐದು ದಶಕಗಳ ರಕ್ತಪಾತದ ಇತಿಹಾಸ ಹೊಂದಿದೆ. 4 ವರ್ಷಗಳ ಹಿಂದೆ ಮಹಾದೇವ ಬೈರಗೊಂಡ ಮೇಲೆ ಹಾಡುಹಗಲೇ ಅಟ್ಯಾಕ್‌ ನಡೆಯೋ ಮೂಲಕ ಭೀಮಾತೀರ ಸಧ್ಯಕ್ಕೆ ತಣ್ಣಗಿರುವಂತೆ ಕಾಣ್ತಿದೆ. ಆದ್ರೆ ಈ ಭಾಗದಲ್ಲಿ ಅಪರಾಧ ಕೃತ್ಯಗಳನ್ನ ತಡೆಯೋದು ಪೊಲೀಸ್‌ ಇಲಾಖೆಗೆ ಸವಾಲೆ ಸರಿ. ಯಾಕಂದ್ರೆ 50 ವರ್ಷಗಳ ಇತಿಹಾಸವನ್ನ ಹೊಂದಿದೆ ಭೀಮಾತೀರದ ಪಾತಕಲೋಕ. ಸಧ್ಯ ಭೀಮಾತೀರದಲ್ಲಿನ ಅಪರಾಧಿಕ ಕೃತ್ಯಗಳನ್ನ ತಡೆಯಲು ಎಸ್ಪಿ ಆನಂದಕುಮಾರ್‌ ಇನ್ನಿಲ್ಲದ ಕಠಿಣ ಕ್ರಮಗಳನ್ನ ಕೈಗೊಳ್ತಿದ್ದಾರೆ. ಭೀಮಾತೀರದ ಹತ್ಯಾಕಾಂಡಗಳಲ್ಲಿ ಭಾಗಿಯಾಗಿರೋ ರೌಡಿಗಳಿಗೆ ಹಳೆ ಹಂತಕರಿಗೆ ಎಸ್ಪಿ ಆನಂದಕುಮಾರ್‌ ಮುಲಾಜೇ ಇಲ್ಲದಂತೆ ಖಡಕ್ಕಾಗಿ ವಾರ್ನಿಂಗ್‌ ಗಳನ್ನ ಮಾಡಿದ್ದಾರೆ. ಭೀಮಾತೀರದಲ್ಲಿ ಬಾಲ ಬಿಚ್ಚಿದ್ರೆ ಬಾಲವನ್ನೆ ಕಟ್‌ ಮಾಡಿ ಬಿಡ್ತೀವಿ ಎನ್ನುವ ಮೂಲಕ ಇನ್ಮುಂದೆ ಪೊಲೀಸ್‌ ಇಲಾಖೆ ಸಹಿಸೋದಿಲ್ಲ ಎನ್ನುವ ಸಂದೇಶವನ್ನ ನೀಡಿದ್ದಾರೆ.

 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more