ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?

ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?

Published : Nov 29, 2025, 01:53 PM IST

ಪೊಲೀಸರು ಯಾವುದೋ ಪಿಟಿ ಕೇಸ್​​ ಮೇಲೆ ಆತನನ್ನ ಎತ್ತಾಕೊಂಡು ಹೋಗಿದ್ರು. ಆತನ ಹೆತ್ತವರ ಕೋರಿಕೆ ಮೇರೆಗೆ ಆತನನ್ನ ರಿಹ್ಯಾಬಿಲಿಟೇಷನ್​​ ಸೆಂಟರ್​ಗೆ ಸೇರಿಸಿದ್ರು. ಆದ್ರೆ ಆತ ಹೋಗಿ 10 ದಿನಗಳಾಗಿತ್ತು ಅಷ್ಟೇ.

ಅವನಿಗಿನ್ನು 22 ವರ್ಷ.. ಅಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿದ್ದ.. ಕುಡಿಯೋದು ಏರಿಯಾದಲ್ಲೆಲ್ಲಾ ಗಲಾಟೆ ಮಾಡೋದು ಇದೇ ಅವನ ಕಾಯಕ. ಇನ್ನೂ ಈ ವಯಸಿಗಾಗ್ಲೇ ಆತನಿಗೆ 2 ವರ್ಷ ಮಗು ಇತ್ತು. ಪ್ರೀತಿಸಿ ಮದುವೆಯಾದವಳನ್ನೂ ಆತ ಸರಿಯಾಗಿ ಬಾಳಿಸಲಿಲ್ಲ. ಗಂಡನ ಸಹವಾಸ ಬೇಡ ಅಂತ 8 ತಿಂಗಳ ಹಿಂದೆಯೇ ಬಿಟ್ಟು ಹೋಗಿದ್ಲು.. ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತೊಂದು ದಿನ ಪೊಲೀಸರು ಯಾವುದೋ ಪಿಟಿ ಕೇಸ್​​ ಮೇಲೆ ಆತನನ್ನ ಎತ್ತಾಕೊಂಡು ಹೋಗಿದ್ರು. ಆತನ ಹೆತ್ತವರ ಕೋರಿಕೆ ಮೇರೆಗೆ ಆತನನ್ನ ರಿಹ್ಯಾಬಿಲಿಟೇಷನ್​​ ಸೆಂಟರ್​ಗೆ ಸೇರಿಸಿದ್ರು. ಆದ್ರೆ ಆತ ಹೋಗಿ 10 ದಿನಗಳಾಗಿತ್ತು ಅಷ್ಟೇ. ಆವನು ಸತ್ತು ಹೋದ ಅನ್ನೋ ಸುದ್ದಿ ಹೆತ್ತವರಿಗೆ ಬಂದಿತ್ತು. ಹಾಗಾದ್ರೆ ಅವನಿಗೆ ಏನಾಯ್ತು..?

ಪುನಶ್ಚೇತನ ಶಿಬಿರದಲ್ಲಿ ಅವನಿಗೆ ಏನ್​ ಮಾಡಿದ್ರು? ಹೆತ್ತವರು ಪೊಲೀಸರ ಕಡೆಗೆ ಬೊಟ್ಟು ಮಾಡ್ತಿರೋದ್ಯಾಕೆ? ಒಂದು ಕಸ್ಟೋಡಿಯಲ್​​ ಡೆತ್​ ಹಿಂದಿನ ಕಥೆಯೇ ಇವತ್ತಿನ ಎಫ್​​ಐಆರ್​​. ಸತ್ತವನು ಕಡುಕನೋ.. ಸುಳ್ಳನೋ.. ಏನೇ ಆಗಲಿ.. ಆದ್ರೆ ಒಂದು ಜೀವ ಹೋಗಿದೆ.. ಅದಕ್ಕೆ ಕಾರಣ ಪೊಲೀಸರು ಮತ್ತು ರಿಹ್ಯಾಬಿಲಿಟೇಷನ್​ ಸೆಂಟರ್​ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ತನಿಖೆ ಆರಂಭವಾಗಿದೆ. ನೊಡೋಣ ಈ ಕೇಸ್​ಗೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ. ಅವ್ರೆಲ್ಲ ಒಂದೇ ಬಡಾವಣೆಯ ಯುವಕರು. ಜೊತೆಗೆ ಇದ್ದವರು..ಅಣ್ಣತಮ್ಮರಂತೆ ಬೆಳೆದವರು.. ಆದ್ರೆ, ಇತ್ತೀಚೆಗೆ ಒಂದು ಸಣ್ಣ ಕಾರಣಕ್ಕೆ ಆ ಎರಡು ಗುಂಪಿನ ಮಧ್ಯೆ ವೈಮನಸ್ಸು ಮೂಡಿತ್ತು. ಇದೇ ಕಾರಣಕ್ಕೆ ಆಗ್ಗಾಗೆ ಇಬ್ಬರ ನಡುವೆ ಸಣ್ಣಪುಟ್ಟ ಫೈಟ್​​ಗಳು ನಡೆಯುತ್ತಲೇ ಇತ್ತು.

ಆದ್ರೆ ಆವತ್ತೊಂದು ದಿನ ಹಳೆಯ ದ್ವೇಷ ಇಡ್ಕೊಂಡಿದ್ದ ಒಂದು ಗುಂಪು ಬಾರ್ ಎದುರು ನಿಂತಿದ್ದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿಬಿಟ್ಟಿದೆ. ತಲೆ ಮೇಲೆ ಒಂದರ ನಂತರ ಮತ್ತೊಂದರಂತೆ ಬಿಯರ್​ ಬಾಟಲ್​ನಿಂದ ದಾಳಿ ಮಾಡಿದೆ. ಸಾಲದ್ದಕ್ಕೆ ಕಿಡಿಗೇಡಿಯೊಬ್ಬ ತಲ್ವಾರ್​ನಿಂದ ಇರಿದುಬಿಟ್ಟಿದ್ದಾನೆ. ಅದೃಶಷ್ವಷಾತ್​​ ಹಲ್ಲೆಗಳಗಾದವನು ಬದುಕಿಬಿಟ್ಟಿದ್ದಾನೆ. ವಯಸಲ್ಲದ ವಯಸಲ್ಲಿ, ಹವಾ ಮೇಂಟೇನ್​ ಮಾಡಬೇಕು ಅಂತಲೋ ಅಥವಾ ದುಡ್ಡು ಮಾಡಬೆಕು ಅಂತಲೋ ಫೀಲ್ಡ್​ಗೆ ಇಳಿದುಬಿಡ್ತಾರೆ. ಆದ್ರೆ ನಂತರ ಒಂದೊ ಹೆಣವಾಗ್ತಾರೆ. ಇಲ್ಲಾ ಜೈಲು ಸೇರುತ್ತಾರೆ. ಸಣ್ಣವಯಸಿನಲ್ಲಿ ಈ ಪಾಪದ ಲೋಕದ ಕಡೆಗೆ ಆಕರ್ಷಣೆಗೊಳ್ಳೋ ಯುವಕರಿಗೆ ಇವತ್ತಿನ ಎರಡೂ ಕಥೆಗಳು ಪಾಠವಾಗಲಿ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more