ನೊಟೀಸ್ ಬಂದ ದಿನ ಪ್ರಭಾವಿಗಳಿಗೆ ಅನುಶ್ರೀ ಕರೆ; ಮಾಜಿ ಸಿಎಂ, ಅವರ ಮಗನಿಗೆ ಢವಢವ ಶುರು!

Oct 3, 2020, 2:02 PM IST

ಬೆಂಗಳೂರು (ಅ. 03): ನಿರೂಪಕಿ ಕಮ್ ನಟಿ ಅನುಶ್ರೀ ಮೊಬೈಲ್ ಕರೆಗಳನ್ನು ಬಗ್ಗೆ ತನಿಖೆ ನಡೆಸಿದಾಗ ರಾಜಕಾರಣಿಗಳ ಜೊತೆ ಮಾತನಾಡಿರುವುದು ಪತ್ತೆಯಾಗಿದೆ. ನೊಟೀಸ್ ಬಂದ ದಿನ ರಾಜಕಾರಣಿಗಳಿಗೆ ಕರೆ ಮಾಡಿ ಅನುಶ್ರೀ ಮಾತನಾಡಿದ್ದಾರೆ. 

ಡ್ರಗ್ ಕೇಸ್: ಮಾಜಿ ಸಿಎಂ ಹಾಗೂ ಅವರ ಮಗನಿಗೆ ಕಾಲ್ ಮಾಡಿ ನೆರವು ಕೇಳಿದ್ರಾ ಅನುಶ್ರೀ?

ನಾಲ್ವರು ರಾಜಕಾರಣಿಗಳ ಹೆಸರಿನಲ್ಲಿಯೇ ನಂಬರ್ ಸೇವ್ ಆಗಿದೆ. ಮಾಜಿ ಸಿಎಂ, ಅವರ ಪುತ್ರನ ನಂಬರ್ ಕೂಡಾ ಇದರಲ್ಲಿದೆ ಎನ್ನಲಾಗಿದೆ.  ಮಾಹಿತಿ ಹೊರ ಬೀಳುತ್ತಿದ್ದಂತೆ ರಾಜಕಾರಣಿಗಳು ಅಲರ್ಟ್ ಅಗಿದ್ದಾರೆ. ಇದು ತಮಗೂ ಉರುಳಾಗಬಹುದು ಎಂಬ ಆತಂಕದಲ್ಲಿದ್ದಾರೆ.