ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!

Oct 8, 2024, 4:12 PM IST

ಮಂಗಳೂರು: ಅವರು ಕರಾವಳಿ ಭಾಗದ ಪ್ರಭಾವಿ ಮುಸ್ಲಿಂ ಮುಖಂಡ. ಒಬ್ಬ ಅಣ್ಣ ಮಾಜಿ ಎಂ.ಎಲ್​.ಎ ಆದ್ರೆ ಮತ್ತೊಬ್ಬ ಅಣ್ಣ ಮಾಜಿ ಎಂ.ಎಲ್​.ಸಿ. ಹೌದು​ ನಾವು ಮಾತನ್ನಾಡ್ತಿರೋದು ಮುಮ್ತಾಜ್​ ಆಲಿಯ ಸಾವಿನ ಕೇಸ್​​ ಬಗ್ಗೆ. ಆವತ್ತು ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋಗಿದ್ದ ಮುಮ್ತಾಜ್​​​​ ಆಲಿ ನಂತರ ಎಲ್ಲೂ ಕಾಣಿಸಿರಲಿಲ್ಲ. ಆದ್ರೆ ಈಗ ಅವರು ಹೆಣವಾಗಿ ಸಿಕ್ಕಿದ್ದಾರೆ.  ಪಾಲ್ಗುಣಿ ನದಿಗೆ ಹಾರಿ ಮುಮ್ತಾಜ್​ ಆಲಿ ಪ್ರಾಣಬಿಟ್ಟಿದ್ದಾರೆ.

ಆದ್ರೆ ಇದೇ ಮುಮ್ತಾಜ್​ ಸಾವಿನ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್​​​ ಸಿಕ್ಕಿದೆ. ಅವರ ಸಾವಿಗೆ ಹನಿಟ್ರ್ಯಾಪೇ ಕಾರಣ ಅಂತ ಈಗ ಹೇಳಲಾಗ್ತಿದೆ. ಹಾಗಾದ್ರೆ ಮುಮ್ತಾಜ್​ ಆಲಿ ಸಾವಿಗೆ ನಿಜವಾದ ಕಾರಣವೇನು? ಕೋಟಿ ಕೋಟಿ ಒಡೆಯ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇಕೆ? ಜೆಡಿಎಸ್​​ ನಾಯಕರ ಸಹೋದರನ ಸಾವಿನ ಮಿಸ್ಟರಿ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.