ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

Published : Jul 25, 2024, 07:49 PM IST

ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಜ್ಯೋತಿಷ್ಯ ಹೇಳಿಕೊಂಡು ಜೀವನ ಮಾಡುತ್ತಿದ್ದ ಪೂಜಾರಿಗೆ ತಾನು ಹೇಳಿದ್ದ ಜ್ಯೋತಿಷ್ಯವೇ ತನ್ನ ಜೀವಕ್ಕೆ ಮುಳುವಾಯ್ತು! 

ಆತ ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿ.. ಭೂಮಿಯಲ್ಲಿ ಸಿಕ್ಕ ದಕ್ಷಿಣ ವೈಷ್ಣೋದೇವಿಯ ವಿಗ್ರಹಕ್ಕೆ ದೇವಸ್ಥಾನ ಕಟ್ಟಿ ಬಂದ ಭಕ್ತಾದಿಗಳಿಗೆ ಭವಿಷ್ಯ ಹೇಳುತ್ತಿದ್ದ.. ಇನ್ನೂ ಮಾಠ ಮಂತ್ರ ಕೂಡ ಮಾಡ್ತಿದ್ದ ಅನ್ನೋ ಮಾತಿದೆ.. ಇಂಥಹ ಪೂಜಾರಿ ಆವತ್ತು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಹೋಗುವಾಗ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.. ಕಾರ್​​ ಹತ್ತುವಾಗ್ಲೇ ಎಂಟ್ರಿ ಕೊಟ್ಟ ಹಂತಕ ಪೂಜಾರಿಗೆ ಚಾಕು ಹಾಕಿ ಎಸ್ಕೇಪ್​​​ ಆಗಿಬಿಟ್ಟಿದ್ದ.. ಇನ್ನೂ ತನಿಖೆ ನಡೆಸಿದ ಪೊಲೀಸರು 24 ಗಂಟೆಗಳಲ್ಲೇ ಹಂತಕನನ್ನ ಸೆರೆಹಿಡಿದಿದ್ರು.. ಆಗಲೇ ನೋಡಿ ಗೊತ್ತಾಗಿದ್ದು, ಹಂತಕ ಪೂಜಾರಿಯನ್ನ ಮುಗಿಸಲು 7 ವರ್ಷ ಕಾದಿದ್ದ ಅಂತ.. ಅಷ್ಟಕ್ಕೂ ಆ ಹಂತಕ ಯಾರು..? ಏನವನ 7 ವರ್ಷದ ದ್ವೇಷದ ಕಥೆ..? ಪೂಜಾರಿಯೊಬ್ಬನ ಬರ್ಬರ ಕೊಲೆಯ ರೋಚಕ ಇನ್ವೆಸ್ಟಿಗೇಷನ್​ ಕಥೆಯಾಗಿದೆ.

ಈತ ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ದ್ವೇಷ ಅಂತೂ ಇಲ್ವೇ ಇಲ್ಲ. ಸದಾ ತಾಯಿಯ ಸೇವೆ ಮಾಡಿಕೊಂಡಿದ್ದವನು ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ವೈಷ್ಣೋದೇವಿ ಪೂಜೆ ಮಾಡಿಕೊಂಡಿದ್ದ ಅಜ್ಜ ಜೊತೆ ಜೊತೆಗೆ ಬರೋ ಭಕ್ತರಿಗೆ ಜ್ಯೋತಿಷ್ಯವನ್ನೂ ಹೇಳ್ತಿದ್ದ.. ಈತ ಹೇಳಿದಂತೆ ಆಗುತ್ತೆ ಅನ್ನೋದನ್ನ ಹಲವರು ನಂಬಿದ್ದರು..  ಆದ್ರೆ ಈತನಿಂದ ನನ್ನ ಕುಟುಂಬವೇ ಸರ್ವನಾಶವಾಗಿತ್ತು ಅನ್ನೋದನ್ನ ಅವನೊಬ್ಬ ನಂಬಿಬಿಟ್ಟಿದ್ದ.. ಈತನಿಗೆ ಆಗದವರು ಇದೇ ಅಜ್ಜನಿಂದ ಮಾಟ ಮಂತ್ರ ಮಾಡಿಸಿ ನನ್ನ ಕುಟುಂಬವನ್ನ ಸರ್ವನಾಶ ಮಾಡಿದ್ರು ಅಂತ ಕೋಪಕೊಂಡು ತನ್ನ ಈ ಸ್ತಿತಿಗೆ ಕಾರಣವಾದ ಅಜ್ಜನನ್ನ ಮುಗಿಸಿಬಿಡಬೇಕು ಅಂತ ನಿರ್ಧರಿಸಿದ್ದನು..

ಎರಡುವರೆ ವರ್ಷದ ಹಿಂದೆ ಮನೆಗೇ ನುಗ್ಗಿ ಅಜ್ಜನಿಗೆ ಚಾಕು ಹಾಕಿದ್ದ. ಆದ್ರೆ ಆವತ್ತು ಬದುಕಿದ್ದ ದೇವೇಂದ್ರಪ್ಪ ಎರಡನೇ ಬಾರಿಯ ಪ್ರಯತ್ನದಲ್ಲಿ ಸತ್ತೇ ಹೋಗಿದ್ದಾನೆ. ಸದ್ಯ ಪೊಲೀಸರು ಈತನನ್ನ ಅರೆಸ್ಟ್​​ ಮಾಡಿ ವಿಚಾರಣೆ ಮಾಡ್ತಿದ್ದಾರೆ.. ಆದ್ರೆ ತನ್ನ ಪಾಡಿಗೆ ದೇವಿಯ ಪೂಜೆ ಮಾಡಿಕೊಂಡು, ನಂಬಿದವರಿಗೆ ಜ್ಯೋತಿಷ್ಯ ಹೇಳುತ್ತಿದ್ದ ದೇವೇಂದ್ರಪ್ಪ ಮಾಡದ ತಪ್ಪಿಗೆ ಹೆಣವಾಗಿದ್ದಾನೆ..

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ