ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

Published : Jul 25, 2024, 07:49 PM IST

ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಜ್ಯೋತಿಷ್ಯ ಹೇಳಿಕೊಂಡು ಜೀವನ ಮಾಡುತ್ತಿದ್ದ ಪೂಜಾರಿಗೆ ತಾನು ಹೇಳಿದ್ದ ಜ್ಯೋತಿಷ್ಯವೇ ತನ್ನ ಜೀವಕ್ಕೆ ಮುಳುವಾಯ್ತು! 

ಆತ ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿ.. ಭೂಮಿಯಲ್ಲಿ ಸಿಕ್ಕ ದಕ್ಷಿಣ ವೈಷ್ಣೋದೇವಿಯ ವಿಗ್ರಹಕ್ಕೆ ದೇವಸ್ಥಾನ ಕಟ್ಟಿ ಬಂದ ಭಕ್ತಾದಿಗಳಿಗೆ ಭವಿಷ್ಯ ಹೇಳುತ್ತಿದ್ದ.. ಇನ್ನೂ ಮಾಠ ಮಂತ್ರ ಕೂಡ ಮಾಡ್ತಿದ್ದ ಅನ್ನೋ ಮಾತಿದೆ.. ಇಂಥಹ ಪೂಜಾರಿ ಆವತ್ತು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಹೋಗುವಾಗ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.. ಕಾರ್​​ ಹತ್ತುವಾಗ್ಲೇ ಎಂಟ್ರಿ ಕೊಟ್ಟ ಹಂತಕ ಪೂಜಾರಿಗೆ ಚಾಕು ಹಾಕಿ ಎಸ್ಕೇಪ್​​​ ಆಗಿಬಿಟ್ಟಿದ್ದ.. ಇನ್ನೂ ತನಿಖೆ ನಡೆಸಿದ ಪೊಲೀಸರು 24 ಗಂಟೆಗಳಲ್ಲೇ ಹಂತಕನನ್ನ ಸೆರೆಹಿಡಿದಿದ್ರು.. ಆಗಲೇ ನೋಡಿ ಗೊತ್ತಾಗಿದ್ದು, ಹಂತಕ ಪೂಜಾರಿಯನ್ನ ಮುಗಿಸಲು 7 ವರ್ಷ ಕಾದಿದ್ದ ಅಂತ.. ಅಷ್ಟಕ್ಕೂ ಆ ಹಂತಕ ಯಾರು..? ಏನವನ 7 ವರ್ಷದ ದ್ವೇಷದ ಕಥೆ..? ಪೂಜಾರಿಯೊಬ್ಬನ ಬರ್ಬರ ಕೊಲೆಯ ರೋಚಕ ಇನ್ವೆಸ್ಟಿಗೇಷನ್​ ಕಥೆಯಾಗಿದೆ.

ಈತ ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ದ್ವೇಷ ಅಂತೂ ಇಲ್ವೇ ಇಲ್ಲ. ಸದಾ ತಾಯಿಯ ಸೇವೆ ಮಾಡಿಕೊಂಡಿದ್ದವನು ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ವೈಷ್ಣೋದೇವಿ ಪೂಜೆ ಮಾಡಿಕೊಂಡಿದ್ದ ಅಜ್ಜ ಜೊತೆ ಜೊತೆಗೆ ಬರೋ ಭಕ್ತರಿಗೆ ಜ್ಯೋತಿಷ್ಯವನ್ನೂ ಹೇಳ್ತಿದ್ದ.. ಈತ ಹೇಳಿದಂತೆ ಆಗುತ್ತೆ ಅನ್ನೋದನ್ನ ಹಲವರು ನಂಬಿದ್ದರು..  ಆದ್ರೆ ಈತನಿಂದ ನನ್ನ ಕುಟುಂಬವೇ ಸರ್ವನಾಶವಾಗಿತ್ತು ಅನ್ನೋದನ್ನ ಅವನೊಬ್ಬ ನಂಬಿಬಿಟ್ಟಿದ್ದ.. ಈತನಿಗೆ ಆಗದವರು ಇದೇ ಅಜ್ಜನಿಂದ ಮಾಟ ಮಂತ್ರ ಮಾಡಿಸಿ ನನ್ನ ಕುಟುಂಬವನ್ನ ಸರ್ವನಾಶ ಮಾಡಿದ್ರು ಅಂತ ಕೋಪಕೊಂಡು ತನ್ನ ಈ ಸ್ತಿತಿಗೆ ಕಾರಣವಾದ ಅಜ್ಜನನ್ನ ಮುಗಿಸಿಬಿಡಬೇಕು ಅಂತ ನಿರ್ಧರಿಸಿದ್ದನು..

ಎರಡುವರೆ ವರ್ಷದ ಹಿಂದೆ ಮನೆಗೇ ನುಗ್ಗಿ ಅಜ್ಜನಿಗೆ ಚಾಕು ಹಾಕಿದ್ದ. ಆದ್ರೆ ಆವತ್ತು ಬದುಕಿದ್ದ ದೇವೇಂದ್ರಪ್ಪ ಎರಡನೇ ಬಾರಿಯ ಪ್ರಯತ್ನದಲ್ಲಿ ಸತ್ತೇ ಹೋಗಿದ್ದಾನೆ. ಸದ್ಯ ಪೊಲೀಸರು ಈತನನ್ನ ಅರೆಸ್ಟ್​​ ಮಾಡಿ ವಿಚಾರಣೆ ಮಾಡ್ತಿದ್ದಾರೆ.. ಆದ್ರೆ ತನ್ನ ಪಾಡಿಗೆ ದೇವಿಯ ಪೂಜೆ ಮಾಡಿಕೊಂಡು, ನಂಬಿದವರಿಗೆ ಜ್ಯೋತಿಷ್ಯ ಹೇಳುತ್ತಿದ್ದ ದೇವೇಂದ್ರಪ್ಪ ಮಾಡದ ತಪ್ಪಿಗೆ ಹೆಣವಾಗಿದ್ದಾನೆ..

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!