ನಕಲಿ ವಿಳಾಸ ನೀಡಿ ದಾಖಲೆ ಪಡೆದಿದ್ದ ಗ್ಯಾಂಗ್​ಸ್ಟರ್​ ಟೀಂ: ಅಂಡರ್​​ವರ್ಲ್ಡ್​​ ಜನರಿಗೆ ಬೆಂಗಳೂರೇ ಸ್ವರ್ಗವಾ?

ನಕಲಿ ವಿಳಾಸ ನೀಡಿ ದಾಖಲೆ ಪಡೆದಿದ್ದ ಗ್ಯಾಂಗ್​ಸ್ಟರ್​ ಟೀಂ: ಅಂಡರ್​​ವರ್ಲ್ಡ್​​ ಜನರಿಗೆ ಬೆಂಗಳೂರೇ ಸ್ವರ್ಗವಾ?

Published : Jul 10, 2025, 06:15 PM IST

ಗ್ಯಾಂಗ್​ಸ್ಟರ್​​ಗಳಿಗೆ ಎಲ್ಲಾ ಡಾಕ್ಯೂಮೆಂಟ್ಸ್​​ ಮಾಡಿಕೊಟ್ಟು ಅಂತಿಮವಾಗಿ ಪಾಸ್​ಪೋರ್ಟ್​​​ ಕೊಡಿಸಿ ವಿದೇಶಕ್ಕೆ ಸುರಕ್ಷಿತವಾಗಿ ಹಾರಿಸುತ್ತಿದ್ದ ದೊಡ್ಡ ಮಾಫಿಯಾವೊಂದನ್ನು ಹರಿಯಾಣ ಪೊಲೀಸರು ಬಯಲು ಮಾಡಿದ್ದಾರೆ.

ನಂಬೋದಿಕ್ಕೆ ಆಗೋದಿಲ್ಲ. ಆದರೂ ಸತ್ಯ. ರಾಷ್ಟ್ರೀಯ ಮಟ್ಟದ ಅಂಡರ್​​​ವರ್ಲ್ಡ್​​​ಗೆ ದೇಶದ ಕುಖ್ಯಾತ  ಗ್ಯಾಂಗ್​ಸ್ಟರ್​​ಗಳಿಗೆ, ಎಲ್ಲಾ ಡಾಕ್ಯೂಮೆಂಟ್ಸ್​​ ಮಾಡಿಕೊಟ್ಟು ಅಂತಿಮವಾಗಿ ಪಾಸ್​ಪೋರ್ಟ್​​​ ಕೊಡಿಸಿ ವಿದೇಶಕ್ಕೆ ಸುರಕ್ಷಿತವಾಗಿ ಹಾರಿಸುತ್ತಿದ್ದ ದೊಡ್ಡ ಮಾಫಿಯಾವೊಂದನ್ನು ಹರಿಯಾಣ ಪೊಲೀಸರು ಬಯಲು ಮಾಡಿದ್ದಾರೆ. ದೇಶದ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ಕೀಳುವ ಅಂತಾರಾಷ್ಟ್ರೀಯ ಗ್ಯಾಂಗ್​ಸ್ಟರ್​​ಗಳಿಗೆ ಇಂಥದ್ದೊಂದು ವ್ಯವಸ್ಥೆ ಮಾಡಿಕೊಟ್ಟು, ವಿದೇಶಕ್ಕೆ ಪರಾರಿಯಾಗಲು ಸಹಕಾರ ಕೊಡುವ ವ್ಯವಸ್ಥಿತ ಜಾಲ ಬಯಲಾಗಿದೆ. ಎಲ್ಲೂ ದೂರದ ದೇಶದಲ್ಲಿ ಕುಳಿತು ಭಾರತದ ಖ್ಯಾತನಾಮರ ಮೇಲೆ ನಡೆಯುತ್ತಿರುವ ದಾಳಿಗಳು ಈ  ಮೂಲಕ ಸಂಘಟಿತವಾಗಿ ನಡೆಯುತ್ತಿದೆ ಎನ್ನುವ ಅಂದಾಜು ಸ್ಪಷ್ಟವಾಗುತ್ತಿದೆ.

ಹರಿಯಾಣದ ಕುಖ್ಯಾತ ಗ್ಯಾಂಗ್​ಸ್ಟಾರ್​​ಗಳಿಗೆ ಬೆಂಗಳೂರು ತಲೆಮರೆಸಿಕೊಳ್ಳುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವ ವೇದಿಕೆಯಾಗುತ್ತಿದೆ. ಜೈಲುಗಳಲ್ಲಿ ಮುಂದೆ ಮುರಿಯಬೇಕಾಗಿದ್ದ ನಟೋರಿಯಸ್ ​​ಹಂತಕರಿಗೆ ಮನೆ ವಸತಿ, ನಿವಾಸಿಗಳೆನಿಸಿಕೊಳ್ಳಲಿ ಅಗತ್ಯವಾದ ಆಧಾರ್​​ ಕಾರ್ಡ್​​, ವೋಟರ್​​ ಐಡಿ, ಪಾನ್​ಕಾರ್ಡ್​​ ಎಲ್ಲಾ ಮಾಡಿಕೊಟ್ಟು ವಿದೇಶಕ್ಕೆ ಹಾರಲು ಸಹಾಯ ಮಾಡುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ.. ಬೆಂಗಳೂರು ಪ್ರಮುಖ ಬಡಾವಣೆಯೊಂದರಲ್ಲಿ ಹಲವಾರು ವರ್ಷಗಳಿಂದ ವಾಸಮಾಡ್ತಿದ್ದೇವೆ ಎಂದು ಆಧಾರ್​ಕಾರ್ಡ್​​ ಸೃಷ್ಟಿಸಿ , ಆ ದಾಖಲೆಗಳೊಂದಿಗೆ ಪಾಸ್​​ಪೋರ್ಟ್​​​ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ, ಅಲ್ಲಿಂದ ಪೊಲೀಸ್​​ ವೆರಿಫಿಕೇಶನ್​ ಕ್ಲಿಯರ್​​ ಮಾಡಿಸಿ, ಪಾಸ್​ಪೋರ್ಟ್​​​ ಡಿಲಿವರಿ ಮಾಡುವ ಪೋಸ್ಟ್​ಮೆನ್​ ವರೆಗೂ ಎಲ್ಲಾ ವ್ಯವಸ್ಥೆಯನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಂಡು, ಅಪರಾಧ ಹಿನ್ನಲೆಯುಳ್ಳವರನ್ನು ದೇಶದಿಂದ ಪರಾರಿಯಾಗಿಸುವ ದುಷ್ಟ ಪ್ರಯೋಗಕ್ಕೆ ಬೆಂಗಳೂರು ಸಾಕ್ಷಿಯಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more