ಸೆಲ್ಪಿ ಬಿಚ್ಚಿಟ್ಟ ಸತ್ಯ: ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ!

ಸೆಲ್ಪಿ ಬಿಚ್ಚಿಟ್ಟ ಸತ್ಯ: ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ!

Published : Sep 01, 2021, 09:16 AM ISTUpdated : Sep 01, 2021, 10:50 AM IST

ಪ್ರೀತಿಸಿ ಮದುವೆಯಾದ ಗಂಡನನ್ನೇ ತನ್ನ ಪ್ರಿಯಕರನ ಜೊತೆಗೆ ಸೇರಿ ಕೊಲೆ ಮಾಡಿದ್ದಳು, ಆದರೆ ಅದನ್ನು ಆತ್ಮಹತ್ಯೆ ಎಂದು ನಂಬಿಸಿ ಪ್ರಿಯಕರನ ಜೊತೆಗೆ ಚಕ್ಕಂದವಾಡಿಕೊಂಡಿದ್ದವಳು, ಪ್ರಿಯಕರನೊಂದಿಗಿದ್ದ ಅದೊಂದು ಸೆಲ್ಪಿ ಪೋಟೋ ಆ ಇಬ್ಬರು ಕೊಲೆಗಟುಕರನ್ನು ಜೀವಾವಧಿ ಶಿಕ್ಷಯವರೆಗೆ ಕರೆದುಕೊಂಡು ಬಂದು ಬಿಟ್ಟಿದೆ.

ಕೋಲಾರ(ಸೆ.01): ತನ್ನ ಮಗನ ಕೊಲೆಯಿಂದ ಮನನೊಂದಿರುವ ವೃದ್ದೆ, ತನ್ನ ಮಗನ ಕೊಲೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನ್ಯಾಯಾಲಯದ ಎದುರು ನ್ಯಾಯಕ್ಕಾಗಿ ಶಬರಿಯಂತೆ ಕಾದಿರುವ ಈಕೆಯ ಹೆಸರು ವಾಸಗಿ. ಕೋಲಾರ ಜಿಲ್ಲೆ ಕೆಜಿಎಫ್ ನಗರ ನಿವಾಸಿ.ವಾಸಗಿಯವರ ಎರಡನೇ ಮಗ ಸೋಮನಾಥ್ 2016 ಮಾರ್ಚ್‌ನಲ್ಲಿ ತಾನು ಪ್ರೀತಿಸಿ ಮದುವೆಯಾಗಿದ್ದ. ತನ್ನ ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಸಂತೋಷ್ ಎಂಬಾತನಿಂದ ಕೊಲೆಯಾಗಿ ಹೋಗಿದ್ದ. 

ಅದನ್ನು ಅಷ್ಟಕ್ಕೇ ಬಿಡದ ಸೋಮವಾಥ್ ತಾಯಿ 60 ವರ್ಷದ ಆ ವೃದ್ದೆ ವಾಸಗಿ ತನ್ನ ಮಗನದ್ದು ಆತ್ಮಹತ್ಯೆಯಲ್ಲಾ, ಅದೊಂದು ಕೊಲೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ ವೃದ್ದೆಯ ದೂರನ್ನು ಆಲಿಸಿದ ಕೆಜಿಎಫ್‌ನ ರಾಬರ್ಟ್ಸನ್ ಪೇಟೆ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ಮಾಡಲು ಶುರುಮಾಡಿದ್ದರು. ಈ ವೇಳೆ ಇಡೀ ಪ್ರಕರಣಕ್ಕೆ ಸಾಕ್ಷಿಯಾಗಿ ತಿರುವು ಕೊಟ್ಟಿದ್ದ ಅದೊಂದು ಸೆಲ್ಪಿ ಪೋಟೋ ಆಧಾರವಿಗಿಟ್ಟುಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅದು ಆತ್ಮಹತ್ಯೆಯಲ್ಲಾ ಕೊಲೆ ಅನ್ನೋದನ್ನು ಸುಲಭವಾಗಿ ಆರೋಪಿತರಿಂದ ಬಾಯಿಬಿಡಿಸಿದ್ದರು. 

ಈ ವೇಳೆ ಸೋಮನಾಥನ ಕೊಲೆ ಮಾಡಿದ್ದ ಸೋಮನಾಥನ ಪತ್ನಿ ಅಶ್ವಿನಿ ಹಾಗೂ ಸಂತೋಷ್‌ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕೊಲೆಗಾರರಾದ ಹಾಕಿದ್ದ ಅಶ್ವಿನಿ ಹಾಗೂ ಅವಳ ಪ್ರಿಯಕರ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಕೋಲಾರದ ಎರಡನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ಮಗನ ಸಾವಿನ ನ್ಯಾಯಕ್ಕಾಗಿ ಐದು ವರ್ಷಗಳ ಕಾಲ ಶಬರಿಯಂತೆ ನ್ಯಾಯಾಲಯಕ್ಕೆ ತಿರುಗಿದ್ದ ವೃದ್ದೆಗೆ ಕೊನೆಗೂ ನ್ಯಾಯ ಸಿಕ್ಕಿದೆ.

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!