ಬೆಂಗಳೂರಿನಲ್ಲಿ ಸರಗಳ್ಳತನ: ಬೈಕ್‌ನಲ್ಲಿ ಬಂದು ವೃದ್ದೆಯ ಸರ ಎಗರಿಸಿದ ಕಿಡಿಗೇಡಿ

Oct 27, 2020, 11:28 AM IST

ಬೆಂಗಳೂರು (ಅ. 27): ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೈಕ್‌ನಲ್ಲಿ ಬಂದ ಕಿಡಿಗೇಡಿ ವೃದ್ಧೆಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಸರ ಎಳೆದ ರಭಸಕ್ಕೆ ಕೆಳಕ್ಕೆ ಬಿದ್ದಿದ್ದಾರೆ ವೃದ್ಧೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಕೆಂಗೇರಿ ವಲಗೇರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯರೇ ಹೊರಗಡೆ ಹೋಗುವಾಗ ದಯವಿಟ್ಟು ಎಚ್ಚರವಾಗಿರಿ. ಚಿನ್ನದ ಸರವನ್ನು ಹಾಕಿಕೊಂಡು ಓಡಾಡಬೇಡಿ...!

ಕಳ್ಳತನದ ಮಾಂಗಲ್ಯಸರ ವಾಪಸ್; ಕಳ್ಳನನ್ನು ಕ್ಷಮಿಸಿ ಮಾನವೀಯತೆ ಮೆರೆದ ದಂಪತಿ..!