ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!

ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!

Published : Jan 15, 2025, 12:25 PM ISTUpdated : Jan 15, 2025, 03:52 PM IST

ದೂರು ಕೊಟ್ಟಾಕೆ ನನಗೆ ಗಂಡ ಬೇಕು, ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಬೇಕೆಂದು ಹಠ ಹಿಡಿದಿದ್ದಾಳೆ. ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ಅಂತಾ ಅಲೆದಾಡುತ್ತಿದ್ದಾಳೆ.

ಹುಬ್ಬಳ್ಳಿ(ಜ.15):  ಆಕೆ ಜೀವನದಲ್ಲಿ ತುಂಬಾನೇ ನೊಂದಿದ್ದಳು. ಕಟ್ಕೊಂಡ ಗಂಡ ತನಗಿಂತ 15 ವರ್ಷ ದೊಡ್ಡವನು ಎಂಬ ಕೊರಗು ಆಕೆಯನ್ನ ಸದಾಕಾಲ ಕಾಡುತ್ತಿತ್ತು. ಹೀಗಾಗಿ ಆ ಸಂಬಂಧಕ್ಕೆ ಪುಲ್ ಸ್ಟಾಪ್ ಇಟ್ಟು ಹೊಸ ಜೀವನ ಶುರು ಮಾಡಿದ್ಲು. ಆಗಲೇ ನೋಡಿ ನಿನ್ನ ಜೀವನಕ್ಕೆ ಸಾರಥಿಯಾಗ್ತೀನಿ ಅಂತ ಬಂದವನು ಬಿರುಗಾಳಿಯನ್ನೇ ಎಬ್ಬಿಸಿದ್ದ. 

ಹೀಗೆ ಕೈ ಕೈ ಹಿಡಿದು ರೀಲ್ಸ್ ಮಾಡಿದ್ದೇ ಮಾಡಿದ್ದು. ಆಕೆಯ ಜತೆ ಈತ ಫೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಯುವತಿಯೂ ಇವನೇ ನನ್ನ ಮನ್ಮಥ ಎಂದು ಹಾಡಿದ್ದೇ ಹಾಡಿದ್ದು. ಹೀಗೆ, ಯುವತಿಯ ಜೊತೆ ಹೆಜ್ಜೆ ಹಾಕುತ್ತಿರುವ ಈತನ ಹೆಸರು ಮಂಜುನಾಥ್. ಬೆಂಗಳೂರು ಎಂ.ಎಸ್.ಪಾಳ್ಯ ಬಿಎಂಟಿಸಿ ಡಿಪೋವಿನ ಕಂಡಕ್ಟರ್ ಕಮ್ ಡ್ರೈವರ್. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದ್ರೆ ಇದೆಲ್ಲವನ್ನೂ ಬಚ್ಚಿಟ್ಟು ಯುವತಿಯೊಬ್ಬಳಿಗೆ ಪ್ರೀತಿ ಪ್ರೇಮ ಅಂಥ ವಂಚಿಸಿದ್ದಾನೆ. ಪರಿಣಾಮ ಯುವತಿ ಈಗ ಮೂರು ತಿಂಗಳ ಗರ್ಭಿಣಿ.

2025ರ ಆರಂಭದಲ್ಲೇ ನಿಜವಾಗ್ತಿದ್ಯಾ ವಂಗಾ ಬಾಬಾ ಭವಿಷ್ಯ: ಡೇಂಜರ್ ಸಿಗ್ನಲ್, ಏನಿದು

ಮಂಜುನಾಥ್ ಬೆಂಗಳೂರಿನ ಎಂ.ಎಸ್.ಪಾಳ್ಯ ಟು ಯಲಹಂಕ ರೂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ವೇಳೆ ಖಾಸಗಿ ಕಂಪನಿಯೊಂದರಲ್ಲಿ ರಿಸೆಪ್ಟಿನಿಸ್ಟ್ ಆಗಿದ್ದ ಯುವತಿಯೊಬ್ಬಳು ಪ್ರತಿ ದಿನ ಮಂಜುನಾಥ್ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಹತ್ತುತ್ತಿದ್ದಳು. ನಂಬರ್ ಕೇಳಿದ್ದಕ್ಕೆ ಯುವತಿ ಕೊಡೋದಿಲ್ಲ ಅಂದಿದ್ದಳು. ಆದ್ರೆ, ಇನ್ಸ್ ಟಾಗ್ರಾಂ ಐಡಿ ಪತ್ತೆ ಮಾಡಿ ಚಾಟ್ ಮಾಡಿದ್ದ. ನಂತರ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿದ್ದ.

AI ತಂತ್ರಜ್ಞಾನದಲ್ಲಿ ಮೂಡಿಬಂದ ದಿಗ್ಗಜರು: ಸಂಕ್ರಾಂತಿ ಹಬ್ಬಕ್ಕೆ ಬಂದ ಡಾ.ರಾಜ್,ವಿಷ್ಣು, ಅಂಬಿ!

ಪ್ರೀತಿಸೋದಕ್ಕೂ ಮುನ್ನವೇ ಯುವತಿ ತನಗೆ ವಿಚ್ಛೇಧನ ಆಗಿರುವ ವಿಚಾರವನ್ನು ಮಂಜುನಾಥ್ ಗೆ ಹೇಳಿದ್ದಳು. ಪರವಾಗಿಲ್ಲ ನಾನು ನಿನಗೆ ಬಾಳು ಕೊಡ್ತೀನಿ ಅಂತ ಪುಂಗಿ ಬಿಟ್ಟಿದ್ದ ಇವನು ಯುವತಿ ಜತೆ ಹಲವು ಕಡೆ ಸುತ್ತಾಡಿದ್ದ. ಸುತ್ತಾಡಿದ್ದಷ್ಟೇ ಅಲ್ಲ ಆಕೆಯ ಜತೆ ದೇವಾಲಯದಲ್ಲಿ ಮದುವೆ ಕೂಡ ಆಗಿದ್ದ. ನಂತರ ಯಲಹಂಕದಲ್ಲಿ ಮನೆ ಮಾಡಿ ಆಗಾಗ ಬಂದು ಹೋಗ್ತಿದ್ದ. ಇದಾದ ಕೆಲ ತಿಂಗಳಿನಲ್ಲಿ ಮಂಜುನಾಥ್ ನ ಮದುವೆ ವಿಷಯ ಈಕೆಗೆ ಗೊತ್ತಾಗಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನೀನ್ಯಾರು ನನಗೆ ಗೊತ್ತಿಲ್ಲ ಅಂತ ಅವೈಡ್ ಮಾಡೋಕೆ ಶುರು ಮಾಡಿದ್ದಾನೆ. ಹೀಗಾಗಿ ಯುವತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ದೂರು ಕೊಟ್ಟಾಕೆ ನನಗೆ ಗಂಡ ಬೇಕು, ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಬೇಕೆಂದು ಹಠ ಹಿಡಿದಿದ್ದಾಳೆ. ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ಅಂತಾ ಅಲೆದಾಡುತ್ತಿದ್ದಾಳೆ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more