ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!

ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!

Published : Jan 15, 2025, 12:25 PM ISTUpdated : Jan 15, 2025, 03:52 PM IST

ದೂರು ಕೊಟ್ಟಾಕೆ ನನಗೆ ಗಂಡ ಬೇಕು, ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಬೇಕೆಂದು ಹಠ ಹಿಡಿದಿದ್ದಾಳೆ. ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ಅಂತಾ ಅಲೆದಾಡುತ್ತಿದ್ದಾಳೆ.

ಹುಬ್ಬಳ್ಳಿ(ಜ.15):  ಆಕೆ ಜೀವನದಲ್ಲಿ ತುಂಬಾನೇ ನೊಂದಿದ್ದಳು. ಕಟ್ಕೊಂಡ ಗಂಡ ತನಗಿಂತ 15 ವರ್ಷ ದೊಡ್ಡವನು ಎಂಬ ಕೊರಗು ಆಕೆಯನ್ನ ಸದಾಕಾಲ ಕಾಡುತ್ತಿತ್ತು. ಹೀಗಾಗಿ ಆ ಸಂಬಂಧಕ್ಕೆ ಪುಲ್ ಸ್ಟಾಪ್ ಇಟ್ಟು ಹೊಸ ಜೀವನ ಶುರು ಮಾಡಿದ್ಲು. ಆಗಲೇ ನೋಡಿ ನಿನ್ನ ಜೀವನಕ್ಕೆ ಸಾರಥಿಯಾಗ್ತೀನಿ ಅಂತ ಬಂದವನು ಬಿರುಗಾಳಿಯನ್ನೇ ಎಬ್ಬಿಸಿದ್ದ. 

ಹೀಗೆ ಕೈ ಕೈ ಹಿಡಿದು ರೀಲ್ಸ್ ಮಾಡಿದ್ದೇ ಮಾಡಿದ್ದು. ಆಕೆಯ ಜತೆ ಈತ ಫೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಯುವತಿಯೂ ಇವನೇ ನನ್ನ ಮನ್ಮಥ ಎಂದು ಹಾಡಿದ್ದೇ ಹಾಡಿದ್ದು. ಹೀಗೆ, ಯುವತಿಯ ಜೊತೆ ಹೆಜ್ಜೆ ಹಾಕುತ್ತಿರುವ ಈತನ ಹೆಸರು ಮಂಜುನಾಥ್. ಬೆಂಗಳೂರು ಎಂ.ಎಸ್.ಪಾಳ್ಯ ಬಿಎಂಟಿಸಿ ಡಿಪೋವಿನ ಕಂಡಕ್ಟರ್ ಕಮ್ ಡ್ರೈವರ್. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದ್ರೆ ಇದೆಲ್ಲವನ್ನೂ ಬಚ್ಚಿಟ್ಟು ಯುವತಿಯೊಬ್ಬಳಿಗೆ ಪ್ರೀತಿ ಪ್ರೇಮ ಅಂಥ ವಂಚಿಸಿದ್ದಾನೆ. ಪರಿಣಾಮ ಯುವತಿ ಈಗ ಮೂರು ತಿಂಗಳ ಗರ್ಭಿಣಿ.

2025ರ ಆರಂಭದಲ್ಲೇ ನಿಜವಾಗ್ತಿದ್ಯಾ ವಂಗಾ ಬಾಬಾ ಭವಿಷ್ಯ: ಡೇಂಜರ್ ಸಿಗ್ನಲ್, ಏನಿದು

ಮಂಜುನಾಥ್ ಬೆಂಗಳೂರಿನ ಎಂ.ಎಸ್.ಪಾಳ್ಯ ಟು ಯಲಹಂಕ ರೂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ವೇಳೆ ಖಾಸಗಿ ಕಂಪನಿಯೊಂದರಲ್ಲಿ ರಿಸೆಪ್ಟಿನಿಸ್ಟ್ ಆಗಿದ್ದ ಯುವತಿಯೊಬ್ಬಳು ಪ್ರತಿ ದಿನ ಮಂಜುನಾಥ್ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಹತ್ತುತ್ತಿದ್ದಳು. ನಂಬರ್ ಕೇಳಿದ್ದಕ್ಕೆ ಯುವತಿ ಕೊಡೋದಿಲ್ಲ ಅಂದಿದ್ದಳು. ಆದ್ರೆ, ಇನ್ಸ್ ಟಾಗ್ರಾಂ ಐಡಿ ಪತ್ತೆ ಮಾಡಿ ಚಾಟ್ ಮಾಡಿದ್ದ. ನಂತರ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿದ್ದ.

AI ತಂತ್ರಜ್ಞಾನದಲ್ಲಿ ಮೂಡಿಬಂದ ದಿಗ್ಗಜರು: ಸಂಕ್ರಾಂತಿ ಹಬ್ಬಕ್ಕೆ ಬಂದ ಡಾ.ರಾಜ್,ವಿಷ್ಣು, ಅಂಬಿ!

ಪ್ರೀತಿಸೋದಕ್ಕೂ ಮುನ್ನವೇ ಯುವತಿ ತನಗೆ ವಿಚ್ಛೇಧನ ಆಗಿರುವ ವಿಚಾರವನ್ನು ಮಂಜುನಾಥ್ ಗೆ ಹೇಳಿದ್ದಳು. ಪರವಾಗಿಲ್ಲ ನಾನು ನಿನಗೆ ಬಾಳು ಕೊಡ್ತೀನಿ ಅಂತ ಪುಂಗಿ ಬಿಟ್ಟಿದ್ದ ಇವನು ಯುವತಿ ಜತೆ ಹಲವು ಕಡೆ ಸುತ್ತಾಡಿದ್ದ. ಸುತ್ತಾಡಿದ್ದಷ್ಟೇ ಅಲ್ಲ ಆಕೆಯ ಜತೆ ದೇವಾಲಯದಲ್ಲಿ ಮದುವೆ ಕೂಡ ಆಗಿದ್ದ. ನಂತರ ಯಲಹಂಕದಲ್ಲಿ ಮನೆ ಮಾಡಿ ಆಗಾಗ ಬಂದು ಹೋಗ್ತಿದ್ದ. ಇದಾದ ಕೆಲ ತಿಂಗಳಿನಲ್ಲಿ ಮಂಜುನಾಥ್ ನ ಮದುವೆ ವಿಷಯ ಈಕೆಗೆ ಗೊತ್ತಾಗಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನೀನ್ಯಾರು ನನಗೆ ಗೊತ್ತಿಲ್ಲ ಅಂತ ಅವೈಡ್ ಮಾಡೋಕೆ ಶುರು ಮಾಡಿದ್ದಾನೆ. ಹೀಗಾಗಿ ಯುವತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ದೂರು ಕೊಟ್ಟಾಕೆ ನನಗೆ ಗಂಡ ಬೇಕು, ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಬೇಕೆಂದು ಹಠ ಹಿಡಿದಿದ್ದಾಳೆ. ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ಅಂತಾ ಅಲೆದಾಡುತ್ತಿದ್ದಾಳೆ.

24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
Read more