
ನಿಮಗೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆಗಳು ನೆನಪಿರಬಹುದು. ಪೊಲೀಸ್ ಜೀಪುಗಳನ್ನೇ ಸುಟ್ಟು, ಠಾಣೆಗೆ ಬೆಂಕಿಯಿಟ್ಟ ಘಟನೆಯನ್ನ ಯಾರೂ ಮರೆಯುವುದಿಲ್ಲ. ಅಂಥಹ ಏರಿಯಾಗಳಲ್ಲಿ ಈಗ ಗ್ಯಾಂಗ್ಸ್ಟಾರ್ಗಳಿಗೆ ಪಾಸ್ಪೋರ್ಟ್ ಮಾಡಿಸಿಕೊಡುವ ಕೆಲಸ ಕೂಡಾ ಆಗ್ತಾ ಇದೆ.
ನಿಮಗೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆಗಳು ನೆನಪಿರಬಹುದು. ಪೊಲೀಸ್ ಜೀಪುಗಳನ್ನೇ ಸುಟ್ಟು, ಠಾಣೆಗೆ ಬೆಂಕಿಯಿಟ್ಟ ಘಟನೆಯನ್ನ ಯಾರೂ ಮರೆಯುವುದಿಲ್ಲ. ಅಂಥಹ ಏರಿಯಾಗಳಲ್ಲಿ ಈಗ ಗ್ಯಾಂಗ್ಸ್ಟಾರ್ಗಳಿಗೆ ಪಾಸ್ಪೋರ್ಟ್ ಮಾಡಿಸಿಕೊಡುವ ಕೆಲಸ ಕೂಡಾ ಆಗ್ತಾ ಇದೆ. ಇಂತಾ ಕೆಲಸ ಆಗ್ತಾ ಇದೆ ಅನ್ನೋದನ್ನು ಕಂಡು ಹಿಡಿಯೋದಕ್ಕೆ ಹರಿಯಾಣ ಪೊಲೀಸರು ಬರಬೇಕಾಯ್ತು ನೋಡಿ. ಅಮೀನ್ ಉಸ್ಮಾನ್ ಸೇಠ್ ನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಪೊಲೀಸರ ಸ್ಟೈಲ್ನಲ್ಲಿ ವಿಚಾರಣೆ ಮಾಡಿದಾಗ ತಾನು ಆ ಮೂವರಿಗೂ ಯಾವ ರೀತಿ ಯಾರ ಸಹಾಯ ಪಡೆದು ಪಾಸ್ಪೋರ್ಟ್ ಮಾಡಿಕೊಟ್ಟೆ ಅನ್ನುವ ಅಂಶವನ್ನ ಬಾಯಿಬಿಟ್ಟಿದ್ದಾನೆ.
ಆ ವಿಚಾರಣೆ ವೇಳೆ ಬೆಳಕಿಗೆ ಬಂದವನೇ ಹೆಗಡೆನಗರದ ಶಿವರಾಮ ಕಾರಂತ ನಗರ ಪೋಸ್ಟ್ ಆಫೀಸ್ನ ಪೋಸ್ಟ್ ಮೆನ್ ಕೇಶವಮೂರ್ತಿ..! ಬೆಂಗಳೂರು ಪೊಲೀಸರು ನಟೋರಿಯಸ್ ಗ್ಯಾಂಗ್ಸ್ಟರ್ಗಳಿಗೆ ಪಾಸ್ಪೋರ್ಟ್ ಮಾಡಿಕೊಡಲು ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ.. ನಮ್ಮ ಅನುಮಾನ ಮತ್ತಷ್ಟು ಹೆಚ್ಚಾಗೋಕೆ ಮತ್ತೊಂದು ಕಾರಣ ಕೂಡಾ ಇದೆ. ಯಾಕಂದ್ರೆ, ಇದೇ ಕೇಸ್ನಲ್ಲಿ ಈ ಮೂವರು ಗ್ಯಾಂಗ್ಸ್ಟರ್ಗಳ ಪಾಸ್ಪೋರ್ಟ್ ಡಿಲಿವರಿ ಮಾಡಬೇಕಾಗಿದ್ದ ಪೋಸ್ಟ್ ಮೆನ್ ಕೇಶವಮೂರ್ತಿ ಕೂಡಾ ಅರೆಸ್ಟ್ ಆಗಿದ್ದಾನೆ. ಜೈಲಿನಿಂದ ಬೇಲ್ ಮೇಲೆ ಬಂದಿರುವ ಪೋಸ್ಟ್ಮೆನ್ ಕೇಶವಮೂರ್ತಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬೇಟಿಯಾಗಿದೆ. ಈತ ನಕಲಿ ಪಾಸ್ಪೋರ್ಟ್ ಕೇಸ್ನ ಸಂಪೂರ್ಣ ಮಾಹಿತಿ ಬಿಚ್ಚಿಟ್ಟದ್ದ. ರಹಸ್ಯ ಕ್ಯಾಮರಾದಲ್ಲಿ ಪಾಸ್ಪೋರ್ಟ್ ಕಥೆಯ ಅಸಲಿ ಕಹಾನಿ ಸೆರೆಯಾಗಿದೆ.
ನನ್ನದೇನೂ ತಪ್ಪಿಲ್ಲ. ನಾನವನನ್ನ ನಾನವನಲ್ಲ ಎನ್ನುತ್ತಿದ್ದಾನೆ ಪೋಸ್ಟ್ ಮೆನ್. ಈತ ನೇರವಾಗಿ ಕೈ ತೋರಿಸಿದ್ದೇ ಪೊಲೀಸರತ್ತ. ಎಲ್ಲಾ ತಪ್ಪು ಪೊಲೀಸರೇ ಮಾಡಿದ್ದಾರೆ. ಅಡ್ರೆಸ್ ಸರಿಯಾಗಿ ವೆರಿಫಿಕೇಶನ್ ಮಾಡದೇ ಅಪ್ರೂವ್ ಮಾಡಿದ್ದಾರೆ. ಆದರೆ ನಾನು ಪೋಸ್ಟ್ ಆಫೀಸ್ಗೆ ಬಂದ ಪಾಸ್ಪೋರ್ಟ್ಗಳನ್ನ ಬೇರೆಯವರಿಗೆ ಕೊಟ್ಟದ್ದು ನಿಜ ಅಂತಾ ತಪ್ಪೊಪ್ಪಿಕೊಂಡುಬಿಟ್ಟ..! ಬರೀ ಡಾಕ್ಯೂಮೆಂಟ್ಸ್ ಮಾತ್ರ ಇದ್ರೆ ಪಾಸ್ಪೋರ್ಟ್ ಆಗಲ್ಲ. ಬದಲಾಗಿ, ಪೊಲೀಸ್ ವೆರಿಫಿಕೇಶನ್ ತುಂಬಾ ಮುಖ್ಯವಾಗುತ್ತದೆ. ಒಬ್ಬೊಬ್ಬರ ಮೇಲೆ 20-30 ಪ್ರಕರಣಗಳಿವೆ. ಅಂಥಹ ಉತ್ತರ ಭಾರತದ ಗ್ಯಾಂಗ್ಸ್ಟರ್ಗಳಿಗೆ ಅಷ್ಟು ಸಲೀಸಾಗಿ ಪೊಲೀಸ್ ವೆರಿಫಿಕೇಶನ್ ಕ್ಲಿಯರ್ ಮಾಡಿಕೊಟ್ಟದ್ದು ಯಾರು ಅನ್ನುವ ಪ್ರಶ್ನೆ ಕೂಡಾ ನಮ್ಮನ್ನ ಕಾಡುತ್ತದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.