ಉತ್ತರ ಭಾರತದ ಕ್ರಿಮಿನಲ್​ಗಳಿಗೆ ಬೆಂಗಳೂರು ಸ್ವರ್ಗ: ರಾಜ್ಯ ರಾಜಧಾನಿಯಲ್ಲಿ ಸ್ವೀಪರ್​ ಸೆಲ್​ಗಳಿದ್ದಾವಾ?

ಉತ್ತರ ಭಾರತದ ಕ್ರಿಮಿನಲ್​ಗಳಿಗೆ ಬೆಂಗಳೂರು ಸ್ವರ್ಗ: ರಾಜ್ಯ ರಾಜಧಾನಿಯಲ್ಲಿ ಸ್ವೀಪರ್​ ಸೆಲ್​ಗಳಿದ್ದಾವಾ?

Published : Jul 10, 2025, 06:25 PM IST

ನಿಮಗೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆಗಳು ನೆನಪಿರಬಹುದು. ಪೊಲೀಸ್ ಜೀಪುಗಳನ್ನೇ ಸುಟ್ಟು, ಠಾಣೆಗೆ ಬೆಂಕಿಯಿಟ್ಟ ಘಟನೆಯನ್ನ ಯಾರೂ ಮರೆಯುವುದಿಲ್ಲ. ಅಂಥಹ ಏರಿಯಾಗಳಲ್ಲಿ ಈಗ ಗ್ಯಾಂಗ್​ಸ್ಟಾರ್​ಗಳಿಗೆ ಪಾಸ್​​ಪೋರ್ಟ್​ ಮಾಡಿಸಿಕೊಡುವ ಕೆಲಸ ಕೂಡಾ ಆಗ್ತಾ ಇದೆ.

ನಿಮಗೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆಗಳು ನೆನಪಿರಬಹುದು. ಪೊಲೀಸ್ ಜೀಪುಗಳನ್ನೇ ಸುಟ್ಟು, ಠಾಣೆಗೆ ಬೆಂಕಿಯಿಟ್ಟ ಘಟನೆಯನ್ನ ಯಾರೂ ಮರೆಯುವುದಿಲ್ಲ. ಅಂಥಹ ಏರಿಯಾಗಳಲ್ಲಿ ಈಗ ಗ್ಯಾಂಗ್​ಸ್ಟಾರ್​ಗಳಿಗೆ ಪಾಸ್​​ಪೋರ್ಟ್​ ಮಾಡಿಸಿಕೊಡುವ ಕೆಲಸ ಕೂಡಾ ಆಗ್ತಾ ಇದೆ. ಇಂತಾ ಕೆಲಸ ಆಗ್ತಾ ಇದೆ ಅನ್ನೋದನ್ನು ಕಂಡು ಹಿಡಿಯೋದಕ್ಕೆ ಹರಿಯಾಣ ಪೊಲೀಸರು ಬರಬೇಕಾಯ್ತು ನೋಡಿ. ಅಮೀನ್ ಉಸ್ಮಾನ್ ಸೇಠ್ ನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಪೊಲೀಸರ ಸ್ಟೈಲ್​ನಲ್ಲಿ ವಿಚಾರಣೆ ಮಾಡಿದಾಗ ತಾನು ಆ ಮೂವರಿಗೂ ಯಾವ ರೀತಿ ಯಾರ ಸಹಾಯ ಪಡೆದು ಪಾಸ್​ಪೋರ್ಟ್​ ಮಾಡಿಕೊಟ್ಟೆ ಅನ್ನುವ ಅಂಶವನ್ನ ಬಾಯಿಬಿಟ್ಟಿದ್ದಾನೆ.

ಆ ವಿಚಾರಣೆ ವೇಳೆ ಬೆಳಕಿಗೆ ಬಂದವನೇ ಹೆಗಡೆನಗರದ  ಶಿವರಾಮ ಕಾರಂತ ನಗರ ಪೋಸ್ಟ್ ಆಫೀಸ್​​ನ ಪೋಸ್ಟ್ ಮೆನ್ ಕೇಶವಮೂರ್ತಿ..!  ಬೆಂಗಳೂರು ಪೊಲೀಸರು ನಟೋರಿಯಸ್ ಗ್ಯಾಂಗ್​​ಸ್ಟರ್​ಗಳಿಗೆ ಪಾಸ್​​ಪೋರ್ಟ್​ ಮಾಡಿಕೊಡಲು ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ.. ನಮ್ಮ ಅನುಮಾನ ಮತ್ತಷ್ಟು ಹೆಚ್ಚಾಗೋಕೆ ಮತ್ತೊಂದು ಕಾರಣ ಕೂಡಾ ಇದೆ. ಯಾಕಂದ್ರೆ, ಇದೇ ಕೇಸ್​ನಲ್ಲಿ ಈ ಮೂವರು ಗ್ಯಾಂಗ್​ಸ್ಟರ್​ಗಳ ಪಾಸ್​ಪೋರ್ಟ್​ ಡಿಲಿವರಿ ಮಾಡಬೇಕಾಗಿದ್ದ ಪೋಸ್ಟ್​​ ಮೆನ್ ಕೇಶವಮೂರ್ತಿ ಕೂಡಾ ಅರೆಸ್ಟ್ ಆಗಿದ್ದಾನೆ. ಜೈಲಿನಿಂದ ಬೇಲ್ ಮೇಲೆ ಬಂದಿರುವ ಪೋಸ್ಟ್​ಮೆನ್ ಕೇಶವಮೂರ್ತಿಯನ್ನು  ಏಷ್ಯಾನೆಟ್​ ಸುವರ್ಣನ್ಯೂಸ್​ ಬೇಟಿಯಾಗಿದೆ. ಈತ ನಕಲಿ ಪಾಸ್​ಪೋರ್ಟ್​ ಕೇಸ್​ನ ಸಂಪೂರ್ಣ ಮಾಹಿತಿ ಬಿಚ್ಚಿಟ್ಟದ್ದ. ರಹಸ್ಯ ಕ್ಯಾಮರಾದಲ್ಲಿ ಪಾಸ್​ಪೋರ್ಟ್​ ಕಥೆಯ ಅಸಲಿ ಕಹಾನಿ ಸೆರೆಯಾಗಿದೆ.

ನನ್ನದೇನೂ ತಪ್ಪಿಲ್ಲ. ನಾನವನನ್ನ ನಾನವನಲ್ಲ ಎನ್ನುತ್ತಿದ್ದಾನೆ ಪೋಸ್ಟ್ ಮೆನ್. ಈತ ನೇರವಾಗಿ ಕೈ ತೋರಿಸಿದ್ದೇ ಪೊಲೀಸರತ್ತ. ಎಲ್ಲಾ ತಪ್ಪು ಪೊಲೀಸರೇ ಮಾಡಿದ್ದಾರೆ. ಅಡ್ರೆಸ್​ ಸರಿಯಾಗಿ ವೆರಿಫಿಕೇಶನ್ ಮಾಡದೇ ಅಪ್ರೂವ್ ಮಾಡಿದ್ದಾರೆ. ಆದರೆ ನಾನು ಪೋಸ್ಟ್ ಆಫೀಸ್​ಗೆ ಬಂದ ಪಾಸ್​ಪೋರ್ಟ್​ಗಳನ್ನ ಬೇರೆಯವರಿಗೆ ಕೊಟ್ಟದ್ದು ನಿಜ ಅಂತಾ ತಪ್ಪೊಪ್ಪಿಕೊಂಡುಬಿಟ್ಟ..! ಬರೀ ಡಾಕ್ಯೂಮೆಂಟ್ಸ್​ ಮಾತ್ರ ಇದ್ರೆ ಪಾಸ್​ಪೋರ್ಟ್​ ಆಗಲ್ಲ. ಬದಲಾಗಿ, ಪೊಲೀಸ್ ವೆರಿಫಿಕೇಶನ್ ತುಂಬಾ ಮುಖ್ಯವಾಗುತ್ತದೆ. ಒಬ್ಬೊಬ್ಬರ ಮೇಲೆ 20-30 ಪ್ರಕರಣಗಳಿವೆ. ಅಂಥಹ ಉತ್ತರ ಭಾರತದ ಗ್ಯಾಂಗ್​​ಸ್ಟರ್​ಗಳಿಗೆ ಅಷ್ಟು ಸಲೀಸಾಗಿ ಪೊಲೀಸ್ ವೆರಿಫಿಕೇಶನ್ ಕ್ಲಿಯರ್ ಮಾಡಿಕೊಟ್ಟದ್ದು ಯಾರು ಅನ್ನುವ ಪ್ರಶ್ನೆ ಕೂಡಾ ನಮ್ಮನ್ನ ಕಾಡುತ್ತದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more