Jan 28, 2022, 3:42 PM IST
ಬೆಂಗಳೂರು (ಜ. 28): ಪರಪ್ಪನ ಅಗ್ರಹಾರದಲ್ಲಿ (Central jail) ಕೈದಿಗಳಿಗೆ ಯಾವ ರೀತಿ ರಾಜಾತಿಥ್ಯ ನಡೆಯುತ್ತಿತ್ತು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಅಷ್ಟಕ್ಕೆ ಮುಗಿದಿಲ್ಲ ಇಲ್ಲಿನ ಕರ್ಮಕಾಂಡ, ಬಗೆದಷ್ಟೂ ಹೊರ ಬರುತ್ತಿದೆ.
Central Jail Expose: ವರದಿ ತರಿಸಿಕೊಂಡು ಡಿಜಿ ಜೊತೆ ಚರ್ಚೆ, ಕಠಿಣ ಕ್ರಮ: ಬೊಮ್ಮಾಯಿ
ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ನಾಸಿರ್ಗೆ ಸೆಲ್ನಲ್ಲೇ ಬಯಸಿದ ಖಾದ್ಯಗಳು ತಯಾರಾಗುತ್ತದೆ. ಮನೆಯಂತೆ ಬೇಕಾದಂತೆ ಇಲ್ಲಿಯೂ ಇರುವ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಲ್ಲಿ ಪೊಲೀಸರು ಶಾಮಿಲಾಗಿರುವುದು ನಾಚಿಕೆಗೇಡಿನ ವಿಚಾರ.