ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

Published : Jan 08, 2025, 11:45 AM IST

ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. 

ಬೆಂಗಳೂರು(ಜ.08): ಡಿಕೆ ಬ್ರದರ್ಸ್ ತಂಗಿ ಎಂದು ಹೇಳಿಕೊಂಡು ವಂಚಿಸಿದ್ದ ಐಶ್ವರ್ಯ ಗೌಡ ವಂಚನೆ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈಕೆಯನ್ನ ನಂಬಿ ಕೋಟಿ ಕೋಟಿ ಹಣ ನೀಡಿದವರು ಕಂಗಾಲಾಗಿದ್ದಾರೆ. ಸದ್ಯ ಮಾಜಿ ಮಿನಿಸ್ಟರ್​ಗೂ ಈ ಚಾಲಾಕಿ ನಂಟಿರೋದು ಬೆಳಕಿಗೆ ಬಂದಿದೆ. 

ಐಶ್ವರ್ಯ ಗೌಡ.. ಬ್ರ್ಯಾಂಡೆಂಡ್​​​ ಬಟ್ಟೆ ತೊಟ್ಟು..ಹೈ-ಫೈ ಕಾರಿನಲ್ಲಿ ಓಡಾಡ್ತ ಅದೆಷ್ಟು ಜನರಿಗೆ ಈ ವಂಚಕಿ ಪಂಗನಾಮ ಹಾಕಿದ್ದಾಳೋ ಗೊತ್ತಿಲ್ಲ. ಒಂದರ ನಂತರ ಮತ್ತೊಂದರಂತೆ ಐಶ್ವರ್ಯ ವಂಚನೆ ಪ್ರಕರಣಗಳು ಬೆಳಕಿಗೆ ಬರ್ತಿವೆ. 
ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಮಂಜುಳಾಗೆ ಐಶ್ವರ್ಯ ಗೌಡ ಪರಿಚಯವಾಗಿದೆ.  ಐಶ್ವರ್ಯ ತಾನು ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡಿದ್ದಳು. ಗೋಲ್ಡ್ ಬ್ಯುಸಿನೆಸ್, ರಿಯಲ್​ ಎಸ್ಟೇಟ್​​ ಮಾಡ್ತಿರೋದಾಗಿ ಕಥೆ ಕಟ್ಟಿದ್ದ ಚಾಲಾಕಿ, ಹೂಡಿಕೆ ಮಾಡಿ ಅಂತಾ ಹಣ ಪೀಕಿದ್ದಳು. 2.5 ಕೋಟಿ ಬೆಲೆ ಬಾಳುವ 2 ಕೆಜಿ 350 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ನಗದು ಸೇರಿದಂತೆ ವೈದ್ಯೆ ಮಂಜುಳಾಗೆ ಒಟ್ಟು 5 ಕೋಟಿ ರೂ. ವಂಚಿಸಲಾಗಿದೆ. 

News Hour: ಕಾಂಗ್ರೆಸ್‌ನಲ್ಲಿ ಈಗ ‘ಪವರ್​’ ಫೈಟ್..!

ವಂಚನೆ ಮಾಡಿರೋದು ಮಾತ್ರವಲ್ಲ. ಪೊಲೀಸರಿಗೆ ಏನಾದ್ರೂ ದೂರು ನೀಡಿದ್ರೆ ಅಷ್ಟೇ ಅಂತಾ ವೈದ್ಯೆ ಮಂಜುಳಾಗೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ RR ನಗರ ಠಾಣೆಯಲ್ಲಿ ಐಶ್ವರ್ಯ ವಿರುದ್ಧ FIR ದಾಖಲಾಗಿದೆ.  
ಮಾಜಿ ಸಚಿವ ವಿನಯ್​ ಕುಲಕರ್ಣಿಗೂ ಐಶ್ವರ್ಯ ಗೌಡ ನಂಟಿರುವುದು ಬೆಳಕಿಗೆ ಬಂದಿದೆ. ವಂಚಕಿ ಐಶ್ವರ್ಯ ಪತಿ ಹೆಸರಿನಲ್ಲಿರುವ ಕಾರನ್ನ ವಿನಯ್​ ಕುಲಕರ್ಣಿ ಬಳಸುತ್ತಿದ್ದು, RR ನಗರ ಪೊಲೀಸರ ತನಿಖೆಯಲ್ಲಿ ಈ ಸಂಗತಿ ಬಯಲಾಗಿದೆ. ಅಷ್ಟು ಮಾತ್ರವಲ್ಲ ಯೋಗೀಶ್​ಗೌಡ ಕೊಲೆ ಪ್ರಕರಣದ A5 ಆರೋಪಿ ಅಶ್ವತ್ಥ್​ ಗೌಡ, ವಂಚಕಿ ಐಶ್ವರ್ಯ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಹೀಗಾಗಿ ವಂಚನೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆಯಿದೆ. 

ಡಿ.ಕೆ ಸುರೇಶ್​ ಹೆಸರಲ್ಲಿ ಐಶ್ವರ್ಯ ವಂಚನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿದ್ದು, ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ಚಿನ್ನಾಭರಣದ ಉದ್ಯಮಿಯಂತೆ ಬಿಲ್ಡಪ್​​ ಕೊಡ್ತಿದ್ದ ಐಶ್ವರ್ಯ ತನ್ನ ಬಣ್ಣದ ಮಾತಿನಿಂದಲೇ ಜನರಿಗೆ ಮಕ್ಮಲ್​ ಟೋಪಿ ಹಾಕಿದ್ದಾಳೆ. ಪ್ರಕರಣದ ತನಿಖೆ ನಡೆದಂತೆಲ್ಲ ದೊಡ್ಡ ದೊಡ್ಡವರ ಹೆಸರು ಮುನ್ನಲೆಗೆ ಬರ್ತಿವೆ. ವಂಚನೆ ಉರಳು ಇನ್ನು ಯ್ಯಾರ ಕೊರಳಿಗೆ ಸುತ್ತಿಕೊಳ್ಳುತ್ತೋ ಕಾದು ನೋಡಬೇಕಿದೆ. 

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more