ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

Published : Jan 08, 2025, 11:45 AM IST

ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. 

ಬೆಂಗಳೂರು(ಜ.08): ಡಿಕೆ ಬ್ರದರ್ಸ್ ತಂಗಿ ಎಂದು ಹೇಳಿಕೊಂಡು ವಂಚಿಸಿದ್ದ ಐಶ್ವರ್ಯ ಗೌಡ ವಂಚನೆ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈಕೆಯನ್ನ ನಂಬಿ ಕೋಟಿ ಕೋಟಿ ಹಣ ನೀಡಿದವರು ಕಂಗಾಲಾಗಿದ್ದಾರೆ. ಸದ್ಯ ಮಾಜಿ ಮಿನಿಸ್ಟರ್​ಗೂ ಈ ಚಾಲಾಕಿ ನಂಟಿರೋದು ಬೆಳಕಿಗೆ ಬಂದಿದೆ. 

ಐಶ್ವರ್ಯ ಗೌಡ.. ಬ್ರ್ಯಾಂಡೆಂಡ್​​​ ಬಟ್ಟೆ ತೊಟ್ಟು..ಹೈ-ಫೈ ಕಾರಿನಲ್ಲಿ ಓಡಾಡ್ತ ಅದೆಷ್ಟು ಜನರಿಗೆ ಈ ವಂಚಕಿ ಪಂಗನಾಮ ಹಾಕಿದ್ದಾಳೋ ಗೊತ್ತಿಲ್ಲ. ಒಂದರ ನಂತರ ಮತ್ತೊಂದರಂತೆ ಐಶ್ವರ್ಯ ವಂಚನೆ ಪ್ರಕರಣಗಳು ಬೆಳಕಿಗೆ ಬರ್ತಿವೆ. 
ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಮಂಜುಳಾಗೆ ಐಶ್ವರ್ಯ ಗೌಡ ಪರಿಚಯವಾಗಿದೆ.  ಐಶ್ವರ್ಯ ತಾನು ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡಿದ್ದಳು. ಗೋಲ್ಡ್ ಬ್ಯುಸಿನೆಸ್, ರಿಯಲ್​ ಎಸ್ಟೇಟ್​​ ಮಾಡ್ತಿರೋದಾಗಿ ಕಥೆ ಕಟ್ಟಿದ್ದ ಚಾಲಾಕಿ, ಹೂಡಿಕೆ ಮಾಡಿ ಅಂತಾ ಹಣ ಪೀಕಿದ್ದಳು. 2.5 ಕೋಟಿ ಬೆಲೆ ಬಾಳುವ 2 ಕೆಜಿ 350 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ನಗದು ಸೇರಿದಂತೆ ವೈದ್ಯೆ ಮಂಜುಳಾಗೆ ಒಟ್ಟು 5 ಕೋಟಿ ರೂ. ವಂಚಿಸಲಾಗಿದೆ. 

News Hour: ಕಾಂಗ್ರೆಸ್‌ನಲ್ಲಿ ಈಗ ‘ಪವರ್​’ ಫೈಟ್..!

ವಂಚನೆ ಮಾಡಿರೋದು ಮಾತ್ರವಲ್ಲ. ಪೊಲೀಸರಿಗೆ ಏನಾದ್ರೂ ದೂರು ನೀಡಿದ್ರೆ ಅಷ್ಟೇ ಅಂತಾ ವೈದ್ಯೆ ಮಂಜುಳಾಗೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ RR ನಗರ ಠಾಣೆಯಲ್ಲಿ ಐಶ್ವರ್ಯ ವಿರುದ್ಧ FIR ದಾಖಲಾಗಿದೆ.  
ಮಾಜಿ ಸಚಿವ ವಿನಯ್​ ಕುಲಕರ್ಣಿಗೂ ಐಶ್ವರ್ಯ ಗೌಡ ನಂಟಿರುವುದು ಬೆಳಕಿಗೆ ಬಂದಿದೆ. ವಂಚಕಿ ಐಶ್ವರ್ಯ ಪತಿ ಹೆಸರಿನಲ್ಲಿರುವ ಕಾರನ್ನ ವಿನಯ್​ ಕುಲಕರ್ಣಿ ಬಳಸುತ್ತಿದ್ದು, RR ನಗರ ಪೊಲೀಸರ ತನಿಖೆಯಲ್ಲಿ ಈ ಸಂಗತಿ ಬಯಲಾಗಿದೆ. ಅಷ್ಟು ಮಾತ್ರವಲ್ಲ ಯೋಗೀಶ್​ಗೌಡ ಕೊಲೆ ಪ್ರಕರಣದ A5 ಆರೋಪಿ ಅಶ್ವತ್ಥ್​ ಗೌಡ, ವಂಚಕಿ ಐಶ್ವರ್ಯ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಹೀಗಾಗಿ ವಂಚನೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆಯಿದೆ. 

ಡಿ.ಕೆ ಸುರೇಶ್​ ಹೆಸರಲ್ಲಿ ಐಶ್ವರ್ಯ ವಂಚನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿದ್ದು, ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ಚಿನ್ನಾಭರಣದ ಉದ್ಯಮಿಯಂತೆ ಬಿಲ್ಡಪ್​​ ಕೊಡ್ತಿದ್ದ ಐಶ್ವರ್ಯ ತನ್ನ ಬಣ್ಣದ ಮಾತಿನಿಂದಲೇ ಜನರಿಗೆ ಮಕ್ಮಲ್​ ಟೋಪಿ ಹಾಕಿದ್ದಾಳೆ. ಪ್ರಕರಣದ ತನಿಖೆ ನಡೆದಂತೆಲ್ಲ ದೊಡ್ಡ ದೊಡ್ಡವರ ಹೆಸರು ಮುನ್ನಲೆಗೆ ಬರ್ತಿವೆ. ವಂಚನೆ ಉರಳು ಇನ್ನು ಯ್ಯಾರ ಕೊರಳಿಗೆ ಸುತ್ತಿಕೊಳ್ಳುತ್ತೋ ಕಾದು ನೋಡಬೇಕಿದೆ. 

25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
Read more