ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

Published : Jan 08, 2025, 11:45 AM IST

ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. 

ಬೆಂಗಳೂರು(ಜ.08): ಡಿಕೆ ಬ್ರದರ್ಸ್ ತಂಗಿ ಎಂದು ಹೇಳಿಕೊಂಡು ವಂಚಿಸಿದ್ದ ಐಶ್ವರ್ಯ ಗೌಡ ವಂಚನೆ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈಕೆಯನ್ನ ನಂಬಿ ಕೋಟಿ ಕೋಟಿ ಹಣ ನೀಡಿದವರು ಕಂಗಾಲಾಗಿದ್ದಾರೆ. ಸದ್ಯ ಮಾಜಿ ಮಿನಿಸ್ಟರ್​ಗೂ ಈ ಚಾಲಾಕಿ ನಂಟಿರೋದು ಬೆಳಕಿಗೆ ಬಂದಿದೆ. 

ಐಶ್ವರ್ಯ ಗೌಡ.. ಬ್ರ್ಯಾಂಡೆಂಡ್​​​ ಬಟ್ಟೆ ತೊಟ್ಟು..ಹೈ-ಫೈ ಕಾರಿನಲ್ಲಿ ಓಡಾಡ್ತ ಅದೆಷ್ಟು ಜನರಿಗೆ ಈ ವಂಚಕಿ ಪಂಗನಾಮ ಹಾಕಿದ್ದಾಳೋ ಗೊತ್ತಿಲ್ಲ. ಒಂದರ ನಂತರ ಮತ್ತೊಂದರಂತೆ ಐಶ್ವರ್ಯ ವಂಚನೆ ಪ್ರಕರಣಗಳು ಬೆಳಕಿಗೆ ಬರ್ತಿವೆ. 
ಡಿ.ಕೆ ಸುರೇಶ್​ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ.  ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್​​ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಮಂಜುಳಾಗೆ ಐಶ್ವರ್ಯ ಗೌಡ ಪರಿಚಯವಾಗಿದೆ.  ಐಶ್ವರ್ಯ ತಾನು ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡಿದ್ದಳು. ಗೋಲ್ಡ್ ಬ್ಯುಸಿನೆಸ್, ರಿಯಲ್​ ಎಸ್ಟೇಟ್​​ ಮಾಡ್ತಿರೋದಾಗಿ ಕಥೆ ಕಟ್ಟಿದ್ದ ಚಾಲಾಕಿ, ಹೂಡಿಕೆ ಮಾಡಿ ಅಂತಾ ಹಣ ಪೀಕಿದ್ದಳು. 2.5 ಕೋಟಿ ಬೆಲೆ ಬಾಳುವ 2 ಕೆಜಿ 350 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ನಗದು ಸೇರಿದಂತೆ ವೈದ್ಯೆ ಮಂಜುಳಾಗೆ ಒಟ್ಟು 5 ಕೋಟಿ ರೂ. ವಂಚಿಸಲಾಗಿದೆ. 

News Hour: ಕಾಂಗ್ರೆಸ್‌ನಲ್ಲಿ ಈಗ ‘ಪವರ್​’ ಫೈಟ್..!

ವಂಚನೆ ಮಾಡಿರೋದು ಮಾತ್ರವಲ್ಲ. ಪೊಲೀಸರಿಗೆ ಏನಾದ್ರೂ ದೂರು ನೀಡಿದ್ರೆ ಅಷ್ಟೇ ಅಂತಾ ವೈದ್ಯೆ ಮಂಜುಳಾಗೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ RR ನಗರ ಠಾಣೆಯಲ್ಲಿ ಐಶ್ವರ್ಯ ವಿರುದ್ಧ FIR ದಾಖಲಾಗಿದೆ.  
ಮಾಜಿ ಸಚಿವ ವಿನಯ್​ ಕುಲಕರ್ಣಿಗೂ ಐಶ್ವರ್ಯ ಗೌಡ ನಂಟಿರುವುದು ಬೆಳಕಿಗೆ ಬಂದಿದೆ. ವಂಚಕಿ ಐಶ್ವರ್ಯ ಪತಿ ಹೆಸರಿನಲ್ಲಿರುವ ಕಾರನ್ನ ವಿನಯ್​ ಕುಲಕರ್ಣಿ ಬಳಸುತ್ತಿದ್ದು, RR ನಗರ ಪೊಲೀಸರ ತನಿಖೆಯಲ್ಲಿ ಈ ಸಂಗತಿ ಬಯಲಾಗಿದೆ. ಅಷ್ಟು ಮಾತ್ರವಲ್ಲ ಯೋಗೀಶ್​ಗೌಡ ಕೊಲೆ ಪ್ರಕರಣದ A5 ಆರೋಪಿ ಅಶ್ವತ್ಥ್​ ಗೌಡ, ವಂಚಕಿ ಐಶ್ವರ್ಯ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಹೀಗಾಗಿ ವಂಚನೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆಯಿದೆ. 

ಡಿ.ಕೆ ಸುರೇಶ್​ ಹೆಸರಲ್ಲಿ ಐಶ್ವರ್ಯ ವಂಚನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿದ್ದು, ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ಚಿನ್ನಾಭರಣದ ಉದ್ಯಮಿಯಂತೆ ಬಿಲ್ಡಪ್​​ ಕೊಡ್ತಿದ್ದ ಐಶ್ವರ್ಯ ತನ್ನ ಬಣ್ಣದ ಮಾತಿನಿಂದಲೇ ಜನರಿಗೆ ಮಕ್ಮಲ್​ ಟೋಪಿ ಹಾಕಿದ್ದಾಳೆ. ಪ್ರಕರಣದ ತನಿಖೆ ನಡೆದಂತೆಲ್ಲ ದೊಡ್ಡ ದೊಡ್ಡವರ ಹೆಸರು ಮುನ್ನಲೆಗೆ ಬರ್ತಿವೆ. ವಂಚನೆ ಉರಳು ಇನ್ನು ಯ್ಯಾರ ಕೊರಳಿಗೆ ಸುತ್ತಿಕೊಳ್ಳುತ್ತೋ ಕಾದು ನೋಡಬೇಕಿದೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more