ಗುತ್ತಿಗೆದಾರರಿಂದ ಮತ್ತೊಂದು ಸ್ಫೋಟಕ ಆರೋಪ, ಲಂಚದ ಪರ್ಸೆಂಟೇಜ್ ಏರಿಕೆ!

Aug 24, 2022, 4:10 PM IST

ಬೆಂಗಳೂರು, (ಆಗಸ್ಟ್.24):ಕರ್ನಾಟಕದಲ್ಲಿ ಮತ್ತೆ ಪರ್ಸೆಂಟೇಜ್ ಆರೋಪ ಮತ್ತೊಂದು ತಿರುವುಪಡೆದುಕೊಂಡಿದೆ.
40 ಪರ್ಸೆಂಟ್ ಇದ್ದ ಕಮಿಷನ್‌ನಲ್ಲಿ ಏರಿಕೆಯಾಗಿದೆ. ಈ ಮೊದಲು ಇದ್ದ 40 ಪರ್ಸೆಂಟ್ ಈಗ ಅದು 50ಕ್ಕೆ ಏರಿದೆ.

ಸರ್ಕಾರ ಕಟ್ಟಿಹಾಕಲು ಸಿದ್ದರಾಮಯ್ಯ ಮತ್ತೊಂದು ಅಸ್ತ್ರ, ಹಳೇ ಆರೋಪಕ್ಕೆ ಮರುಜೀವ!

ಹೌದು..ರಾಜ್ಯದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುತ್ತಿದೆ ಕಮಿಷನ್​ ಬಾಂಬ್​. ರಾಜ್ಯ ಸರ್ಕಾರ ಮಾತ್ರವಲ್ಲ, ಬಿಬಿಎಂಪಿ ಕೂಡ ಕಮಿಷನ್​ ಪಡೆಯುತ್ತಿದೆ. ರಾಜ್ಯ ಸರ್ಕಾರ 40% ಕಮಿಷನ್​ ಪಡೆಯುತ್ತಿದ್ದರೆ, ಬಿಬಿಎಂಪಿ 50% ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಮೂರು ಸಂಘಗಳು ಗಂಭೀರ ಆರೋಪ ಮಾಡಿವೆ.